ಬೆಂಗಳೂರು: ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಕಳಿಸುವ ಸಂಚನ್ನು ಮಾಡಿದ್ದೇ ಬಿಜೆಪಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಹಾಸನ ಪೆನ್ಡ್ರೈವ್ ಪ್ರಕರಣದಲ್ಲಿ ವಿಡಿಯೋ ಹೇಗೆ ವೈರಲ್ ಆಯ್ತು ಎಂದು ಚರ್ಚೆ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಕೃತ್ಯ ಮಾಡಿದವನು ಎಲ್ಲೋ ಇದ್ದಾನೆ.
ಬೇಡದ ವಿಚಾರ ಮಾತ್ರ ಜೆಡಿಎಸ್ ನವರು ಚರ್ಚೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಒಬ್ಬ ಹೆಡ್ ಆಫ್ ಸ್ಟೇಟ್ ಆಗಿ ಸಿಎಂ ಎರಡೆರಡು ಬಾರಿ ಇವರ ಗಮನ ಸೆಳೆಯಬೇಕಾ? ಇವರಿಂದ ಏನಾದ್ರೂ ಸ್ಪಂದನೆ ಪ್ರತಿಕ್ರಿಯೆ ಬಂತಾ? ಹುಡುಕಾಟ ಕ್ಕೆ ಚಾಲನೆ ನೀಡಿದ್ದೇವೆ ಅಂತ ಏನಾದ್ರೂ ಹೇಳಬೇಕಲ್ವಾ ಅವರು. ಮೊದಲ ಪತ್ರದ ಮೇಲೆ 25 ದಿನ ಅದರ ಮೇಲೆ ಮಲಗಿಕೊಂಡು ಈಗ ಎರಡನೇ ಪತ್ರ ಬರೆದ ಮೇಲೆ ನೋಡ್ತಿವಿ ಮಾಡ್ತೀವಿ ಅಂತಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
500 Note Update: ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್
ಇನ್ನಾದ್ರೂ ಕೂಡ ಪ್ರಜ್ವಲ್ ವಿರುದ್ಧ ಕೇಂದ್ರ ಕಾನೂನು ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿದರು.
ವಿರೋಧಪಕ್ಷದವರ ಮೇಲೆ ಇಡಿ ದಾಳಿ ಮಾಡುವಾಗ ಅರೆಸ್ಟ್ ಮಾಡುವಾಗ ಯಾವುದೇ ಕಾನೂನು ಕ್ರಮ ಪಾಲನೆ ಮಾಡುವುದಿಲ್ಲ. ಆದರೆ ಈಗ ಪ್ರಜ್ವಲ್ ಪ್ರಕರಣದಲ್ಲಿ ಆ ದಾಖಲೆ ಕೊಡಬೇಕು ಈ ದಾಖಲೆ ಕೊಡಬೇಕು ಕೋರ್ಟ್ ನಿಂದ ಆದೇಶ ಆಗಬೇಕು ಅಂತಾರೆ. ಕಾನೂನು ಮುರಿದವರನ್ನು ಕರೆತರಲು ನೀವೇನು ಕಾನೂನು ಪಾಲನೆ ಮಾಡ್ತಿದ್ದೀರಾ? ಎಂದು ಪ್ರಶ್ನಿಸಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)