ಕೆ.ಆರ್.ಪುರ: ಶ್ರೀ ಕೃಷ್ಣ ಜನ್ಮಾಷ್ಠಾಮಿಯ ಅಂಗವಾಗಿ ಕೆ.ಆರ್.ಪುರ ಕ್ಷೇತ್ರದ ದೇವಸಂದ್ರದಲ್ಲಿ ನಿರ್ಮಾಪಕರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಡಿ.ಕೆ.ದೇವೆಂದ್ರ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು.
ಶ್ರೀ ಕೃಷ್ಣ ಜನ್ಮಾಷ್ಠಾಮಿಯ ಶುಭಾಶಯ ಸಲ್ಲಿಸಲು ಡಿ.ಕೆ.ದೇವೆಂದ್ರ ಮನೆಗೆ ಸಾವಿರಾರು ಬಂಧು-ಮಿತ್ರರು
ಕಾಂಗ್ರೆಸ್ ಮುಖಂಡರು ಆಗಮಿಸಿದರು. ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡರು ಭೇಟಿ ನೀಡಿ ಶುಭಾಶಯ ತಿಳಿಸಿದರು.
ದೇವಸಂದ್ರದ ಪ್ರತಿಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಪ್ರತಿ ಮನೆಯಲ್ಲೂ ಗೋಪೂಜೆಗೆ ಅದ್ಯತೆ ನೀಡಲಾಗುತ್ತದೆ. ಮನೆ ದೇವರಾದ ಕೃಷ್ಣ ಈ ಸಮುದಾಯದ ಆರಾಧ್ಯದೈವವಾಗಿದ್ದಾನೆ. ಗ್ರಾಮದಲ್ಲಿ ನೆಲೆಸಿರುವ ವೇಣುಗೋಪಾಲ ಸ್ವಾಮಿಗೆ ವಿಶೇಷ ಪೂಜೆ ಮಾಡಿ ವಿವಿಧ ಬಗೆಯ ಹೂಗಳಿಂದ ಅಲಂಕರ ಮಾಡಲಾಯಿತು.
ಜನ್ಮಾಷ್ಟಮಿ ಅಂಗವಾಗಿ ದೇವಸಂದ್ರದಲ್ಲಿರುವ 40 ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ
ನಡೆಯಿತು. ಜತೆಗೆ ಯಾದವ ಸಮುದಾಯದ ಕುಟುಂಬದಿಂದ ಸಾವಿರಾರು ಮಂದಿಗೆ ಅನ್ನದಾನದ ವ್ಯವಸ್ಥೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡ, ಯುವ ನಾಯಕರಾದ ಭರತ್ ಯಾದವ್, ನಿತಿನ್ ಮೋಹನ್
ಮತ್ತಿತರು ಇದ್ದರು.