ಬಳ್ಳಾರಿ:– ಇಂದು ನಾಡಿನಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಂತೆ ಬಳ್ಳಾರಿ ಜಿಲ್ಲೆಯಾದ್ಯಂತ ಇಂದು ಸಡಗರ, ಸಂಭ್ರಮದಿಂದ ಮುಸ್ಲಿಂ ಬಾಂದವರು ರಂಜಾನ್ ಆಚರಣೆಯನ್ನು ನೆರವೇರಿಸಿದ್ದಾರೆ.
MP Election: ಕೊಳ್ಳೇಗಾಲದಲ್ಲಿ ಭರ್ಜರಿ ಪ್ರಚಾರ ಕೈಗೊಂಡ BY ವಿಜಯೇಂದ್ರ!
ಮುಸ್ಲಿಂ ಸಮುದಾಯದ ಜನರು ರಂಜಾನ್ ಆಚರಣೆ ಅಂಗವಾಗಿ ಹೊಸ ಹೊಸ ಉಡುಪುಗಳನ್ನು ಧರಿಸಿ
ವಿವಿಧ ದರ್ಗಾಗಳಿಗೆ ತೆರಳಿ ಪವಿತ್ರ ಪ್ರಾರ್ಥನೆ ಕೈಗೊಂಡರು. ಧರ್ಮ ಬೋಧನೆ ನಂತರ ಪರಸ್ಪರ
ಶುಭಾಷಯ ವಿನಿಮಯ ಮಾಡಿಕೊಂಡರು. ಕಂಪ್ಲಿ ನಗರದ ವಿವಿಧ ದರ್ಗಾಗಳು ಸೇರಿದಂತೆ ಜಿಲ್ಲೆಯ
ಹಲವೆಡೆ ಬೆಳಗ್ಗೆಯಿಂದಲೇ ಪ್ರಾರ್ಥನೆ ಆರಂಭವಾಯಿತು. ಅದರಂತೆ ಜಿಲ್ಲೆಯಲ್ಲಿ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿತ್ತು.