ಚಿತ್ರದುರ್ಗ, ಅ.10 -ಮೈಸೂರು ದಸರಾ,ಹಂಪಿ ಉತ್ಸವ ಸೇರಿದಂತೆ, ಇತರೆ ಜಿಲ್ಲೆಗಳಲ್ಲಿ ಸರ್ಕಾರಿದಿಂದ ಆಚರಿಸುವ ಉತ್ಸವಗಳ ರೀತಿ ಚಿತ್ರದುರ್ಗದ ದುರ್ಗೋತ್ಸವವನ್ನು ಆಚರಿಸಬೇಕು ಎಂದು ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ ಶಿವಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು. ಇಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಕೋಟೆ ನಾಡು ಎಂದೇ ಪ್ರಸಿದ್ಧವಾಗಿದೆ,
ಅಲ್ಲದೆ, ಚಿತ್ರದುರ್ಗ ಐತಿಹಾಸಿಕ ಜಿಲ್ಲೆಯಾಗಿದ್ದು, ರಾಜ ವೀರ ಮದಕರಿ ನಾಯಕ ಒನಕೆ ಓಬವ್ವ, ಸೇರಿದಂತೆ ಹಲವಾರು ರಾಜ ಮಹಾರಾಜರು ಆಳಿ ಹೋಗಿದ್ದಾರೆ. ಚಿತ್ರದುರ್ಗದ ಕಲ್ಲಿನಕೋಟೆ, ಜೋಗಿಮಟ್ಟಿ, ಆಡು ಮಲ್ಲೇಶ್ವರ, ಚಂದ್ರವಳ್ಳಿ ಮುರುಘಾ ಮಠ, ಸೇರಿದಂತೆ,ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳನ್ನು ನೋಡಲು ದೇಶ,ವಿದೇಶ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿದಿನ ಸಾವಿರಾರು ಜನ ಬರುತ್ತಾರೆ. ಆದರೆ, ಇಲ್ಲಿನ ಯಾವುದೇ ರಾಜಕಾರಣಿಗಳು ದುರ್ಗೋ ತ್ಸವ ಆಚರಿಸಲು ಕಾಳಜಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
Ratan Tata: ಭಾರತೀಯನಾಗಿರುವುದು ನನ್ನ ಅದೃಷ್ಟ, ಅಭಿಯಾನ ಹಿಂಪಡೆಯಿರಿ ಎಂದಿದ್ದ ರತನ್ ಟಾಟಾ!
ಮೈಸೂರು ದಸರಾ, ಹಂಪಿ ಉತ್ಸವ, ಕೊಡಗು, ಕಿತ್ತೂರು ಉತ್ಸವ, ಹೀಗೆ ಕೆಲವು ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರವೇ ಆಚರಣೆ ಮಾಡುತ್ತಾ ಬಂದಿದೆ. ಆದರೆ, ಸರ್ಕಾರ ಚಿತ್ರದುರ್ಗದ ದುರ್ಗೋತ್ಸವ ವನ್ನು ಆಚರಿಸಲು ಏಕೆ ತಾರತಮ್ಯ ಎಂದು ಪ್ರಶ್ನಿಸಿದರು. ಈ ಹಿಂದೆ ಶಿವಮೂರ್ತಿ ನಾಯಕ ಹಾಗೂ ಹೆಚ್ ಆಂಜನೇಯ ಅವರನ್ನು ಹೊರತುಪಡಿಸಿ, ಉಳಿದ ಯಾವುದೇ ರಾಜಕಾರಣಿಗಳಾಗಲಿ ದುರ್ಗೋತ್ಸವ ಆಚರಣೆಗೆ ಆಸಕ್ತಿ ತೋರಿಸಿಲ್ಲ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಹಾಗೂ ನಮ್ಮ ಜಿಲ್ಲೆಯ ರಾಜಕಾರಣಿಗಳು, ಡಿಸೆಂಬರ್ ಅಂತ್ಯದ ಒಳಗೆ ದುರ್ಗವೋತ್ಸವ ಆಚರಣೆಗೆ ದಿನಾಂಕವನ್ನು ಪ್ರಕಟಿಸದಿದ್ದರೆ ನಮ್ಮ ಕರ್ನಾಟಕ ವಿಜಯ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ಕೆ.ಟಿ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ,ಕರುನಾಡ ವಿಜಯ ಸೇನೆ ಜಿಲ್ಲಾ ಮಹಿಳಾಧ್ಯಕ್ಷೆ, ವೀಣಾ ಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ರಾಜ್ಯ ಸಮಿತಿಯ ನಿಸಾರ್ ಅಹಮದ್, ನಗರ ಅಧ್ಯಕ್ಷ ಅವಿನಾಶ್, ನಾಗೇಶ್ ಇದ್ದರು.
ವರದಿ: ಹನುಮಂತರಾಜು ಚಿತ್ರದುರ್ಗ