ಬೆಂಗಳೂರು: ಅಕ್ರಮವಾಗಿ ತಂಬಾಕು ತರಿಸಿ ಶೇಖರಿಸಿಟ್ಟಿದ್ದ ಗೋದಾಮಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ 45 ಲಕ್ಷ ಮೌಲ್ಯದ 4 ಲಕ್ಷದ 21 ಸಾವಿರ ಪ್ಯಾಕೆಟ್ ತಂಬಾಕು ಸೀಜ್ ಮಾಡಲಾಗಿದೆ. ಗಣೇಶ್, ಹನ್ಸ್ ಕಂಪನಿಯ ತಂಬಾಕು ಶೇಖರಿಸಿಟ್ಟಿದ್ದ ಆರೋಪಿಯಾಗಿದ್ದು,
ದಿಲೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭೂವಲ್ ಮ್ಯಾನ್ಶನ್ ಗೋದಾಮಿನಲ್ಲಿ ಬಿಲ್ ಇಲ್ಲದೇ ಅಕ್ರಮವಾಗಿ ತಂಬಾಕು ವಸ್ತುಗಳನ್ನು ಶೇಖರಿಸಿಟ್ಟಿದ್ದರು.
ಬ್ಯಾಂಕ್ ಲಾಕರ್ʼಗಳಲ್ಲಿ ಚಿನ್ನವನ್ನು ಇಡುವುದು ಸುರಕ್ಷಿತವೇ? ನೀವು ಈ RBI ನಿಯಮಗಳ ಬಗ್ಗೆ ತಿಳಿದಿರಲೇಬೇಕು
ಸರ್ಕಾರದ ನಿಯಮದ ಪ್ರಕಾರ ತಂಬಾಕು ಆರೋಗ್ಯಕ್ಕೆ ಅಂತಾ ಕಾಣಿಸುವ ಹಾಗೆ ತಂಬಾಕು ಪ್ಯಾಕೆಟ್ ಮೇಲೆ ಹಾಕಬೇಕು. ಆದರೆ ಪ್ಯಾಕೆಟ್ ಗಳ ಮೇಲೆ ಸರಿಯಾಗಿ ನಮೂದಿಸದೇ ಮಾರಾಟ ಮಾಡುತ್ತಿದ್ದರು. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.