ಹುಬ್ಬಳ್ಳಿ: ಮುಂದೆ ನನ್ನ ಕೊಲೆ ಮಾಡಬಹುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಹಾಗೂ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿ, ಯಾಕೆ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ ಗೊತ್ತಿಲ್ಲ ಆದ್ದರಿಂದ ಸಾರ್ವಜನಿಕರು ನ್ಯಾಯ ಕೊಡಿಸಬೇಕು ಮುಂದೆ ನನ್ನ ಕೊಲೆ ಯಾರಾದರೂ ಮಾಡಲು ಬಹುದು ಎಂದ ಅವರು ಸುಮ್ಮನೆ ನನ್ನ ಮೇಲೆ ವಿನಾಕಾರಣ ಆರೋಪ ಮಾಡತಾ ಇದ್ದಾರೆ ಎಂದರು.
ಆಕಾಶ್ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ ಸಹ ಇಂದು ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಪುತ್ರನ ಕೊಲೆ ನಡೆದ ನಂತರ ನ್ಯಾಯಕ್ಕಾಗಿ ಹೋರಾಟ ನಡೆಸಲು ಬಂದಾಗ ಪೊಲೀಸರು ಅನಗತ್ಯವಾಗಿ ನನ್ನ ಹೋರಾಟ ತಡೆಯಲು ಬಂದರು ಎಂದ ಅವರು ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಗಾಂಜಾ, ಸಾರಾಯಿ ಮಾರಾಟವಾಗುತ್ತಿದೆ.
ತೂಕ ಕಡಿಮೆ ಮಾಡಿಕೊಳ್ಳುವಾಗ ಮೀನು ಮತ್ತು ಚಿಕನ್ʼಗಳಲ್ಲಿ ಯಾವುದು ಒಳ್ಳೆಯದು..? ಇಲ್ಲಿದೆ ನೋಡಿ
ಕಾನೂನು ಸುವ್ಯವಸ್ಥೆ ಸರಿಪಡಿಸುವಂತೆ ಹೋರಾಟ ಮಾಡಿದ್ದೇವು. ಈ ಹಿಂದೆ ನನ್ನ ಪುತ್ರಿ ನೇಹಾ ಕೊಲೆಯಾದಾಗ ಹೋರಾಟ ಮಾಡಿದ್ವಿ. ಆದರೂ ಪೊಲೀಸರು ಇನ್ನೂ ಎಚ್ಚೆತ್ತಿಲ್ಲ. ನೇಹಾ ಆಯ್ತು, ಅಂಜಲಿ ಆಯ್ತು, ಇದೀಗ ಆಕಾಶ್ ಮಠಪತಿ ಕೊಲೆಯಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು. ಗೃಹ ಸಚಿವರು, ಸಿಎಂ ಭೇಟಿ ನೀಡಿದರೂ ಏನೂ ಬದಲಾವಣೆ ಆಗಿಲ್ಲ. ಕೊಲೆಯಾದ ಆಕಾಶ್ ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಹೋರಾಟ ಮಾಡುತ್ತೇವೆ. ಹುಬ್ಬಳ್ಳಿ ಬಂದ್ ಆದರೂ ಅಚ್ಚರಿ ಇಲ್ಲ ಎಂದರು.