ಗದಗ:-ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಆಸ್ತಿಗಾಗಿ ಸಹೋದರನನ್ನೇ ನಡು ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಕಿರಾತಕರು ಎಸ್ಕೇಪ್ ಆಗಿರುವ ಘಟನೆ ಜರುಗಿದೆ.
ಗ್ಯಾರಂಟಿ ಯೋಜನೆಗೆ ಕತ್ತರಿ ಹಾಕುವಂತೆ ಸ್ವಪಕ್ಷದವರಿಂದಲೇ ಒತ್ತಡ: ಹೈಕಮಾಂಡ್ ಮೊರೆ ಹೋದ ಸಚಿವರು, ಶಾಸಕರು..!
ಕಾಶಿಮಸಾಬ್ ಗಫಾರಸಾಬ ಹಮಸಾಗರ ಕೊಲೆಯಾದ ದುರ್ಧೈವಿ ಎಂದು ತಿಳಿದು ಬಂದಿದೆ. ಬೈಕ್ ಅಡ್ಡಗಟ್ಟಿ ಐವರು ಆರೋಪಿಗಳಿಂದ ದಾಳಿ ನಡೆದಿದೆ. ಆರೋಪಿಗಳಲ್ಲಿ ಇಬ್ಬರು ಮೃತನ ಸಹೋದರರು, ಇಬ್ಬರು ಸಹೋದರನ ಮಕ್ಕಳು ಹಾಗೂ ಅಳಿಯ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿ ಕಾಶಿಮಸಾಬ ಪ್ರಾಣ ಬಿಟ್ಟಿದ್ದಾನೆ. ಇನ್ನೂ ಕೊಲೆ ನೋಡಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಸಹೋದರರಾದ ಖಾಜಾಹುಸೇನ ಗಫಾರಸಾಬ ಹಮಸಾಗರ, ಶೌಕತ್ಅಲಿ ಗಫಾರಸಾಬ ಹಮಸಾಗರ, ಮಕ್ಕಳಾದ ಜಾವೇದ್ ಶೌಕತ್ಅಲಿ ಹಮಸಾಗರ, ಸಮೀರ್ ಖಾಜಾಹುಸೇನ ಹಮಸಾಗರ ಹಾಗೂ ಅಳಿಯ ಬಾಸುಸಾಬ ಅಕಬರಸಾಬ ಬೆಳವಗಿ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ.
ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.