ಮಂಡ್ಯ:- ಕಬ್ಬು ಅರೆಯಲು ಮಂಡ್ಯ ಮೈಶುಗರ್ ಸಜ್ಜಾಗಿದೆ. ನಷ್ಟದಿಂದಾಗಿ ಕೆಲ ವರ್ಷಗಳ ಕಾಲ ಕೂಡ ಬಂದ್ ಆಗಿತ್ತು. ಆ ನಂತರ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಕಾರ್ಖಾನೆ ಪುನಾರಾಂಭವಾಗಿತ್ತು.
ದೇವ್ರೆ ನಮ್ಮ ಬಾಸ್ ನ ನೀನೇ ಕಾಪಾಡ್ಬೇಕು… ದೇವರ ಮೊರೆ ಹೋದ ದರ್ಶನ್ ಫ್ಯಾನ್ಸ್..!
ಈ ವರ್ಷ ಮತ್ತೆ ಕಬ್ಬು ಅರೆಯುವಿಕೆಗೆ ಸಜ್ಜಾಗಿದೆ. ರಾಜ್ಯದ ಏಕೈಕ ಸರ್ಕಾರಿ ಸಾಮ್ಯದ ಸಕ್ಕರೆ ಕಾರ್ಖಾನೆ 2024-25ನೇ ಸಾಲಿನ ಕಬ್ಬು ಅರೆಯುವಿಕೆಗೆ ಸಜ್ಜಾಗಿದೆ. ಜೂನ್ 23 ರಿಂದ ಬಾಯ್ಲರ್ ಕಾರ್ಯಾಚರಣೆ ಆರಂಭವಾಗಲಿದೆ. ಅಂದಹಾಗೆ ಸಾಕಷ್ಟು ವಿವಾದ, ನಷ್ಟ, ಆಕ್ರಮ ಹೀಗೆ ಹಲವು ವಿಚಾರಗಳಿಂದ ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆ ಸಾಕಷ್ಟು ಹೆಸರುಗಳಿಸಿತ್ತು. ನಷ್ಟದಿಂದಾಗಿ ಕೆಲ ವರ್ಷಗಳ ಕಾಲ ಕೂಡ ಬಂದ್ ಆಗಿತ್ತು. ಆ ನಂತರ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಕಾರ್ಖಾನೆ ಪುನಾರಾಂಭವಾಗಿತ್ತು
ಕಳೆದ ಸಾಲಿನಲ್ಲಿ ನಾಲ್ಕು ಲಕ್ಷ ಟನ್ ಕಬ್ಬು ಅರೆಯುವಿಕೆ ಕೆಲಸ ಕೂಡ ನಡೆದಿತ್ತು. ಅದರಂತೆ ಈ ಬಾರಿ ಕೂಡ ಜೂನ್ ತಿಂಗಳಲ್ಲಿಯೇ ಈ ಬಾರಿಯ ಕಬ್ಬು ಅರೆಯುವಿಕೆಗೆ ಸಜ್ಜಾಗಿದೆ.
ಅಂದಹಾಗೆ 1932ರಲ್ಲಿ ಸ್ಥಾಪನೆಯಾಗಿರೋ ಮೈಶುಗರ್ ಸಕ್ಕರೆ ಕಾರ್ಖಾನೆ ಸಾಕಷ್ಟು ಹಳೆಯದಾಗಿದೆ. ಕಾರ್ಖಾನೆಯಲ್ಲಿ ಹಳೆಯದಾದ ಯಂತ್ರೋಪಕರಣಗಳು ಕೂಡ ಇವೆ. ಅಲ್ಲದೆ ಆಗಾದ ಸಾಕಷ್ಟು ನಷ್ಟು ಕೂಡ ಉಂಟಾಗುತ್ತಿದೆ. ಹೀಗಾಗಿ ಸುಮಾರು 500 ರೂ ಕೋಟಿ ರೂ ವೆಚ್ಚದಲ್ಲಿ ಮಂಡ್ಯದ ಹೊರವಲಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ.