ಬೆಂಗಳೂರು: ಬಂಧನ ಭೀತಿಯಿಂದ ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಇಂಟರ್ಪೋಲ್ ಅಧಿಕಾರಿಗಳು ಜಾಗತಿಕವಾಗಿ 196 ರಾಷ್ಟ್ರಗಳಿಗೆ ಫೋಟೊ ಸಮೇತ ಮಾಹಿತಿ ರವಾನಿಸಿದ್ದು, ಪ್ರಜ್ವಲ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಲೈಂಗಿಕ ದೌರ್ಜನ್ಯದ ವಿಡಿಯೊಗಳು ಬಹಿರಂಗವಾದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದರು. ಹೀಗಾಗಿ, ಎಸ್ಐಟಿ ಅಧಿಕಾರಿಗಳು ಅವರ ಪತ್ತೆಗೆ ಸಿಬಿಐ ಹಾಗೂ ಇಂಟರ್ಪೋಲ್ನ ನೆರವು ಕೋರಿದ್ದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಇಂಟರ್ಪೋಲ್, ಪ್ರಜ್ವಲ್ರ ಪತ್ತೆಗೆ ಬ್ಲೂಕಾರ್ನರ್ ನೋಟಿಸ್ ಹೊರಡಿಸಿತ್ತು.
ರೈತರೇ ಗಮನಿಸಿ.. ಸಪೋಟ ಹಣ್ಣಿನ ಕೃಷಿಯಿಂದ ಗಳಿಸಬಹುದು ಲಕ್ಷಗಟ್ಟಲೇ ಆದಾಯ..!
25 ಸಾವಿರ ಪೆನ್ಡ್ರೈವ್ ಹಂಚಿಕೆಯಾಗಿದೆ!
”ಹಾಸನ ನಗರದಾದ್ಯಂತ ಸುಮಾರು 25,000 ಪೆನ್ಡ್ರೈವ್ ಹಂಚಲಾಗಿದೆ ಎಂದು ವರದಿಯಾಗಿದೆ. ದೂರು ದಾಖಲಿಸಿದ ನಂತರವೂ ಜಿಲ್ಲಾಧಿಕಾರಿ, ಜಿಲ್ಲಾಪೊಲೀಸ್ವರಿಷ್ಠಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣದಲ್ಲಿಸರಕಾರ ಮತ್ತು ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ,” ಎಂದು ಎಚ್.ಡಿ. ಕುಮಾರಸ್ವಾಮಿ ದೂರಿದರು.
ಪೆನ್ಡ್ರೈವ್ ಮೂಲ ಹಾಗೂ ದೇವರಾಜೇಗೌಡ ಆರೋಪದ ಬಗ್ಗೆಯೂ ಎಸ್ಐಟಿ ಗಮನ ಹರಿಸಲಿದೆ. ಪೆನ್ಡ್ರೈವ್ ವಿತರಣೆಯಲ್ಲಿ ಒಂದು ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಪಾತ್ರವಿದ್ದರೆ ಅದು ಎಸ್ಐಟಿ ತನಿಖೆಯಿಂದ ಹೊರಬರಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.