ಹೊಸಕೋಟೆ:- ಇಲ್ಲಿ ಶಕ್ತಿ ಪ್ರದರ್ಶನ ಮಾಡಿದ ಬಿಜೆಪಿ ಮಹಿಳಾ ಸಮಾವೇಶದ ಮೂಲಕ ಮಹಿಳೆಯರು. ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ಹೊಸಕೋಟೆ ಪಟ್ಟದ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ಏರ್ಪಡಿಸಿದ್ದ ನಾರಿ ಶಕ್ತಿ ಮಹಿಳಾ ಸಮಾವೇಶದ ಮೂಲಕ ಎಲ್ಲಾ ಮಹಿಳೆಯರು ಈ ಭಾರಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಕೆ ಸುಧಾಕರ್ ಅವರ ಪರವಾಗಿ ಮಾತಯಾಚನೆ ನಡೆಸಿದ್ದಾರೆ.
ಮಂಡ್ಯದಲ್ಲಿ “ಕೈ” ಅಭ್ಯರ್ಥಿಪರ ದರ್ಶನ್ ಪ್ರಚಾರ – ಮಾನಸ ಪುತ್ರನ ಬಗ್ಗೆ ಸುಮಲತಾ ಹೇಳಿದ್ದೇನು!?
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಂಟಿಬಿ ನಾಗರಾಜ್ ಅವರು, ಇದು ದೇಶದ ಚುನಾವಣೆ, ದೇಶವನ್ನು ಸಮಗ್ರ ಅಭಿವೃದ್ಧಿ ಮಾಡಿ ಉನ್ನತ ಸ್ಥಾನಕ್ಕೆ ಏರಿಸಲು ಮೋದಿ ಅವರಿಗೆ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ 3 ಭಾರಿ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿ ಈಗ 3ನೇ ಭಾರಿ ಪ್ರಧಾನಿ ಆಗುತ್ತಿರುವ ದೇಶದ ಉತ್ತಮ ನಾಯಕ ನರೇಂದ್ರ ಮೋದಿ ಅವರು. ಎಲ್ಲಾ ಮಹಿಳೆಯರಿಗೆ ಕಾಂಗ್ರೆಸ್ ಸರಕಾರ ನೀಡಿರುವ ಗ್ಯಾರಂಟಿ ಯೋಜನೆನನ್ನು ನಂಬಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿರಬಹುದು ಆದರೆ ಈಗ ಗ್ಯಾರಂಟಿ ಯೋಜನೆ ಯಾವ ದಿಕ್ಕಿಗೆ ತಲುಪಿದೆ ಎಂಬುದನ್ನು ಎಲ್ಲರೂ ಅರೀತಿದ್ದಾರೆ.ಆದ್ದರಿಂದ ದೇಶದ ಭವಿಷ್ಯಕ್ಕಾಗಿ ಮೋದಿ ಆವರ ಆಡಳಿತ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ.