ದೊಡ್ಡಬಳ್ಳಾಪುರ: ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದಲ್ಲಿ ಮೂರು ವರ್ಷಗಳಿಂದ ನಿಂತಿದ್ದ ದನಗಳ ಜಾತ್ರೆ ಆರಂಭವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಜೋಡಿ ಎತ್ತುಗಳು ಸೇರಿದ್ದು, ಜಾತ್ರೆಯಲ್ಲಿ ಇರುವ ಜಾನುವಾರುಗಳಿಗೆ ಬಿಜೆಪಿ ಪಕ್ಷದಿಂದ ಉಚಿತವಾಗಿ ಮೇವು ಹಾಗು ರೈತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದೆ ಸಂದರ್ಭದಲ್ಲಿ ವಕೀಲರು, ಬಿಜೆಪಿ ಮುಖಂಡ ಪ್ರತಾಪ್ ಮಾತನಾಡಿ ಕೊರೊನಾ ವೈರಸ್ ಹಾಗು ಗಂಟು ರೋಗದಿಂದ ಮೂರು ವರ್ಷಗಳ ಕಾಲ ದನಗಳ ಜಾತ್ರೆ ನಡೆದಿರಲಿಲ್ಲ.ಈ ಬಾರಿ ಅದ್ದೂರಿಯಾಗಿ ಜಾತ್ರೆ ನಡೆಯುತ್ತಿದ್ದು ಬಹಳಷ್ಟು ಸಂಖ್ಯೆಯಲ್ಲಿ ಎತ್ತುಗಳನ್ನು ಮಾರಾಟ ಮಾಡಲು ಬಂದಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಬಿಜೆಪಿ ಯುವ ಮೋರ್ಚಾದಿಂದ ಮೂರು ದಿವಸಗಳ ಕಾಲ ಜಾನುವಾರುಗಳಿಗೆ ಉಚಿತವಾಗಿ ಮೇವು ಮತ್ತು ರೈತರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ,ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದೆ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ, ಘಾಟಿ ಪಂಚಾಯ್ತಿ ಸದಸ್ಯ ವಾಸುದೇವ್, ,ತೂಬಗೆರೆ ಗ್ರಾಮ ಪಂ. ಸದಸ್ಯ ಕೃಷ್ಣಪ್ಪ,ಬಿಜೆಪಿ ಮುಖಂಡ ಗಂಗರಾಜು,ಲಗುಮಯ್ಯ,ಸುರೇಶ್,ಶರತ್,ಹರ್ಷ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)