ಬೆಂಗಳೂರು:- ಸದ್ಯದಲ್ಲೇ ಬಿಜೆಪಿ ಅವಧಿಯ ಹಗರಣ ಬಿಚ್ಚಿಡ್ತೀವಿ ಎಂದು DCM ಡಿಕೆಶಿ ಹೇಳಿದ್ದಾರೆ.
ಇಂದು ಈ ಭಾಗದಲ್ಲಿ ಭಾರೀ ಮಳೆ: ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ!
ವಾಲ್ಮೀಕಿ ನಿಗಮದ ಹಗರಣ ವಿಚಾರವಾಗಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಿಎಂ ಹಾಗೂ ಡಿಸಿಎಂ ಯಾರ ಬುಡಕ್ಕೆ ಬರುತ್ತೋ ನೋಡೋಣ. ಯಾರೋ ಅಯೋಗ್ಯ ನನ್ನ ಮಕ್ಕಳು ಅಧಿಕಾರಿಗಳು ಮಾಡಿರೋದು. ನಮಗೇನು 10 ರೂಪಾಯಿ ಸಿಕ್ಕಿಲ್ಲ. ನಾವೇನು ಮಾಡಬಾರದ್ದು ಮಾಡಿದ್ದೇವೆ? ನಾವೇನು ಹಗರಣದಲ್ಲಿ ಭಾಗಿಯಾಗಿದ್ದೇವೆಯೇ? ಎಂದರು.
ನಾವು ರಾಜಕಾರಣ ಗಮನದಲ್ಲಿಟ್ಟುಕೊಳ್ಳದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ಕೊಟ್ಟಿದ್ದೇವೆ. ತನಿಖೆ ನಡೆಯುವ ಸಂದರ್ಭದಲ್ಲಿ ಚರ್ಚೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ನಾವೇ ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ನಾವು ಏನು ಉತ್ತರ ಹೇಳಿಲ್ಲ. ನಾವು ಉತ್ತರ ಕೊಟ್ಟರೇ ಅವರದ್ದೂ ಹೊರಗಡೆ ಬರಲಿದೆ. ಇದಕ್ಕೇ ಬಿಜೆಪಿಗರು ಉತ್ತರ ಕೊಡಲು ಬಿಡುತ್ತಿಲ್ಲ. ನಮ್ಮ ಹತ್ತಿರ ಬಿಜೆಪಿಯವರ ಅವಧಿಯ ನಿಗಮದ ದಾಖಲೆಗಳಿವೆ. ಯರ್ಯಾರ ಕಾಲದಲ್ಲಿ ಏನೇನೂ ಆಗಿದೆ ಎಲ್ಲಾ ಬಿಚ್ಚಿಡ್ತೀವಿ ಎಂದು ಅವರು ಕಿಡಿಕಾರಿದ್ದಾರೆ.
ಬಿಜೆಪಿ ಅವರು ಏನು ಬೇಕಾದರೂ ಮಾಡಲಿ. ಇನ್ನೂ ಮುಂದೆ ಏನು ಬೇಕಾದರೂ ರಾಜಕಾರಣ ಮಾಡಲಿ, ನಾವು ಸಂವಿಧಾನದ ಪ್ರಕಾರ ಗೌರವಕೊಟ್ಟು ರಾಜಕಾರಣ ಮಾಡ್ತೀವಿ ಎಂದು ಅವರು ಹೇಳಿದ್ದಾರೆ.