ಬೆಂಗಳೂರು: ಪೆನ್ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ಅವರ ಕುಟುಂಬದವರೇ ಶಾಸಕ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಸಿಎಂ ಅಥವಾ ಡಿಸಿಎಂ ಯಾಕೆ ರಾಜೀನಾಮೆ ಕೊಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಚುನಾವಣೆ ಬಂದಾಗೆಲ್ಲ ಪಾಕಿಸ್ತಾನದ ವಿಚಾರ ಬಿಜೆಪಿ ಮಾತನಾಡುತ್ತದೆ. ಬಿಜೆಪಿಯವರು ಕೇವಲ ವಾಟ್ಸಪ್ ಫೇಸ್ಬುಕ್ನಲ್ಲಿ ಸ್ಟ್ರಾಂಗ್ ಲೀಡರ್ಗಳು.
ಪೆನ್ಡ್ರೈವ್ ಪ್ರಕರಣದಲ್ಲಿ ಆರೋಪ ಮಾಡುತ್ತಿರುವುದು ಯಾರು? ತಪ್ಪಿತಸ್ಥರೇ ಎಲ್ಲದಕ್ಕೂ ಡಿಕೆಶಿ ರಾಜೀನಾಮೆ ನೀಡಬೇಕು, ಪರಮೇಶ್ವರ್ ರಾಜೀನಾಮೆ ನೀಡಬೇಕು ಅಂತಾರೆ. ಇದುವರೆಗೆ ಒಮ್ಮೆಯೂ ತಪ್ಪು ಮಾಡಿದವರು ರಾಜೀನಾಮೆ ನೀಡಬೇಕು ಅಂತಾ ಜೆಡಿಎಸ್ ನಾಯಕರು ಹೇಳುತ್ತಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಹೀನಿಯಸ್ ಕ್ರೈಂ, ಹಾರರ್ ಕ್ರೈಂ ನಮ್ಮ ಮನೆ ಮಗ ಮಾಡಿದ್ದಾನೆ. ಅದು ತಪ್ಪು ಅಂತಾ ಒಮ್ಮೆಯಾದರೂ ಜೆಡಿಎಸ್ ನಾಯಕರ ಬಾಯಲ್ಲಿ ಬಂದಿದೆಯಾ? ತಪ್ಪು ಮಾಡಿದ್ದಕ್ಕೆ ನಾವು ರಾಜೀನಾಮೆ ಕೊಡ್ತೇವೆ ಅಂತಾ ಒಮ್ಮೆಯಾದರೂ ಇವರ ಬಾಯಲ್ಲಿ ಬಂತಾ? ಇವರ ಮನೆಯಲ್ಲಿ ಎಂಎಲ್ಎ ಇದಾರೆ, ಎಂಪಿ ಇದಾರೆ, ಕೊಡಲಿ ಅವರ ಮನೆಯವರೇ ರಾಜೀನಾಮೆ. ಶಿವಕುಮಾರ್, ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.