ಬೆಂಗಳೂರು:- ಬಿಜೆಪಿ- ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ ನಿನ್ನೆ ದಳಪತಿಗಳು ಆಕ್ರೋಶ ಹೊರಹಾಕಿ ಹೋರಾಟದ ಕಣದಿಂದ ಹಿಂದೆ ಸರಿದಿದ್ರು. ಇಂದು ಕುಮಾರಸ್ವಾಮಿ ಜೊತೆ ಕಮಲ ನಾಯಕರು ನಡೆಸಿದ ಸಂಧಾನ ಸಕ್ಸಸ್ ಆಗಿದ್ದು ಮೈತ್ರಿ ಪಾದಯಾತ್ರೆಗೆ ದಳಪತಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪ್ರೀತಂ ಗೌಡರನ್ನ ಬಿಜೆಪಿ ಕಿಕ್ ಔಟ್ ಮಾಡಿದ್ದು HDK ಯ ಎಲ್ಲಾ ಬೇಡಿಕೆಗಳಿಗೆ ಕೇಸರಿ ಟೀಂ ಓಕೆ ಅಂದಿದೆ. ಇಬ್ಬರು ಮಾಜಿ ಸಿಎಂಗಳು ಶನಿವಾರ ಪಾದಯಾತ್ರೆ ಉದ್ಘಾಟನೆ ಮಾಡ್ತಿದ್ದು ಹಳೇ ಮೈಸೂರು ಭಾಗದಲ್ಲಿ ಒಂದು ವಾರ ಮೈತ್ರಿಯ ರಣಕಹಳೆ ಮೊಳಗಲಿದೆ. ಈ ಮಧ್ಯೆ ಬಿಜೆಪಿ ಅತೃಪ್ತರು ಬಳ್ಳಾರಿ ಪಾದಯಾತ್ರೆಗೆ ಪ್ಲಾನ್ ಮಾಡ್ತಿದ್ದಾರೆ….
Breaking: ಕೈಯಲ್ಲಿದ್ದಾಗಲೇ ಮೊಬೈಲ್ ಬ್ಲಾಸ್ಟ್; ಯುವಕರು ಜಸ್ಟ್ ಮಿಸ್!
ಬಿಜೆಪಿ- ಜೆಡಿಎಸ್ ನ ಮೈಸೂರು ಚಲೋ ಪಾದಯಾತ್ರೆಯಲ್ಲಿ ನಿನ್ನೆ ಭಿನ್ನಮತ ಸ್ಪೋಟಗೊಂಡಿತ್ತು, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರೀತಂ ಗೌಡ ವಿರುದ್ಧ ಆಕ್ರೋಶ ಹೊರಹಾಕಿ, ಪ್ರತಿಭಟನೆಯಲ್ಲಿ ತಮ್ಮನ್ನು ಕಡೆಗಣನೆ ಮಾಡಲಾಗ್ತಿದೆ ಅಂತ ಕಿಡಿಕಾರಿದ್ರು. ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ ಅಂತ ಘೋಷಣೆ ಮಾಡಿ ಬಿಜೆಪಿಯ ಮಾಸ್ಟರ್ ಪ್ಲಾನ್ ಗೆ ಠಕ್ಕರ್ ಕೊಟ್ಟಿದ್ರು. ಇದ್ರಿಂದ ತೀವ್ರ ಕಳವಳಕ್ಕೊಳಗಾದ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರನ್ನ ಕೂಲ್ ಮಾಡುವ ಪ್ಲಾನ್ ಮಾಡಿದ್ರು…
ಪಾದಯಾತ್ರೆ ಕಣದಿಂದ ಹಿಂದೆ ಸರಿದಿದ್ದ ಕುಮಾರಸ್ವಾಮಿ ಅವರ ಮನವೊಲಿಸುವ ಕೆಲಸಕ್ಕೆ ಕಮಲ ನಾಯಕರು ಮುಂದಾದ್ರು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನಿವಾಸದಲ್ಲಿ ಜೋಷಿ, ವಿಜಯೇಂದ್ರ ನೇತೃತ್ವದಲ್ಲಿ ಕುಮಾರಸ್ವಾಮಿ ಜೊತೆ ಸಂಧಾನ ಸಭೆ ನಡೆಸಲಾಯ್ತು. ಸುಮಾರು ಒಂದು ಗಂಟೆಗಳ ಕಾಲ ನಡೆದ ಸಭೆಯಲ್ಲಿ HDK ಅವರ ಮನವೊಲಿಸುವಲ್ಲಿ ಕಮಲ ನಾಯಕರು ಸಕ್ಸಸ್ ಆದ್ರು. ಕುಮಾರಸ್ವಾಮಿ ಪಟ್ಟಿಗೆ ಕೇಸರಿ ಟೀಂ ಮಣಿದಿದ್ದು ಎಲ್ಲಾ ಬೇಡಿಕೆಗಳಿಗೆ ಓಕೆ ಎಂದಿದೆ….
ಸಂಧಾನ ಸಭೆ ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಶನಿವಾರದಿಂದ ಪಾದಯಾತ್ರೆ ಆರಂಭವಾಗಲಿದೆ. ಪಾದಯಾತ್ರೆಯಲ್ಲಿ ಬಿಜೆಪಿ- ಜೆಡಿಎಸ್ ಎರಡೂ ಪಕ್ಷದ ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಸಂವಹನದ ಕೊರತೆಯಿಂದ ಒಂದಷ್ಟು ಗೊಂದಲಗಳಾಗಿತ್ತು ಈಗ ಎಲ್ಲರೂ ಕೂತು ಮಾನಾಡಿ ಬಗೆಹರಿಸಿಕೊಂಡಿದ್ದೀವಿ. ಯಾವುದೇ ಗೊಂದಲವಿಲ್ಲದೆ ಪಾದಯಾತ್ರೆ ನಿಗಧಿಯಂತೆ ನಡೆಯಲಿದೆ, ಪಾದಯಾತ್ರೆ ಸಂಘಟಿಸುವುದು ಒಬ್ಬ ವ್ಯಕ್ತಿಯಲ್ಲ ಪಕ್ಷ. ಪ್ರೀತಂಗೌಡ ಅಥವಾ ಯಾರೆ ಆಗಲಿ ವ್ಯಕ್ತಿ ಮುಖ್ಯವಲ್ಲ ಪ್ರೀತಂರನ್ನ ನಾವು ಆಹ್ವಾನಿಸಲ್ಲ ಅಂತ ಪಾದಯಾತ್ರೆಯಿಂದ ಪ್ರೀತಂಗೌಡಗೆ ಗೇಟ್ ಪಾಸ್ ಕೊಟ್ಟಿದ್ದಾರೆ ಜೋಷಿ….
ಪಾದಯಾತ್ರೆ ಬಗ್ಗೆ ಮಾತನಾಡಿದ ವಿಜಯೇಂದ್ರ
ಸಣ್ಣಪುಟ್ಟ ಗೊಂದಲ ಇದ್ದರೂ ಕೂಡ ಪಾದಯಾತ್ರೆ ನಡೆಯಲಿದೆ. ಶನಿವಾರ ಬೆಳಗ್ಗೆ 8-30ಕ್ಕೆ ಪಾದಯಾತ್ರೆ ಆರಂಭವಾಗಲಿದೆ ಕುಮಾರಸ್ವಾಮಿ, ಯಡಿಯೂರಪ್ಪ ನವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. 7 ದಿನಗಳ ಕಾಲ ನಾವು ಪ್ಲಾನ್ ಮಾಡಿದ ರೂಟ್ ಮ್ಯಾಪ್ ನಂತೆಯೇ ಮೈಸೂರು ಚಲೋ ನಡೆಯುತ್ತೆ ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವೆಲ್ಲರೂ ಒಟ್ಟಾಗಿದ್ದೀವಿ ಎಲ್ಲರೂ ಜತೆಗೂಡಿ ಕೆಲಸ ಮಾಡ್ತೀವಿ ಪಾದಯಾತ್ರೆ ಸಕ್ಸಸ್ ಆಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು ವಿಜಯೇಂದ್ರ….
ಈ ಮಧ್ಯೆ ಬಿಜೆಪಿ ಅತೃಪ್ತರ ಟೀಮ್ ಫುಲ್ ಆಕ್ಟೀವ್ ಆಗಿದ್ದು ಅತೃಪ್ತ ಸಮಾನಮನಸ್ಕರೆಲ್ಲಾ ಒಂದಾಗುವ ಪ್ರಯತ್ನ ಮಾಡ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಟೀಂ ರೆಡಿಯಾಗ್ತಿದ್ದು ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ ಜೊತೆ ಚರ್ಚೆ ನಡೆಸಿದ್ರು.
ವಿಜಯೇಂದ್ರ ನಾಯಕತ್ವಕ್ಕೆ ಸೆಡ್ಡು ಹೊಡದು ಪ್ರತ್ಯೇಕ ಪಾದಯಾತ್ರೆಗೆ ಸಿದ್ದತೆ ನಡೆಸ್ತಿದ್ದಾರೆ. ಬಿಜೆಪಿಯಲ್ಲಿ ಯತ್ನಾಳ್ ,ರಮೇಶ್ ಜಾರಕಿಹೊಳಿ ಪ್ರತ್ಯೇಕವಾದ ತಂಡ ಕಟ್ಟಿ ಬಳ್ಳಾರಿ ಪಾದಯತ್ರೆ ನಡೆಸಲು ತಯಾರಿ ನಡೆಸ್ತಿದ್ದಾರೆ….
ಒಟ್ನಲ್ಲಿ ಕುಮಾರಸ್ವಾಮಿ ಆಕ್ರೋಶದಿಂದ ಮೈತ್ರಿ ನಾಯಕರಲ್ಲಿ ಮೂಡಿದ್ದ ಭಿನ್ನಮತ ಜೋಷಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಿಂದ ಸುಖಾಂತ್ಯವಾಗಿದೆ. ಪ್ರೀತಂ ಕಿಕ್ ಔಟ್ ನಿಂದ HDK ಕೂಲ್ ಆಗಿದ್ದು ಶನಿವಾರ ದಿಂದ 7 ದಿನ ಮೈಸೂರು ಪಾದಯಾತ್ರೆ ಯತಾ ಪ್ರಕಾರ ನಡೆಯಲಿದೆ. ಈ ಮಧ್ಯೆ ಅತೃಪ್ತ ನಾಯಕರ ಪ್ರತ್ಯೇಕ ಹೋರಟವನ್ನು ಕೇಸರಿ ಟೀಂ ಯಾವ ರೀತಿ ಹ್ಯಾಂಡಲ್ ಮಾಡುತ್ತೆ ಎಂಬುದನ್ನು ಕಾದುನೋಡಬೇಕಿದೆ…..