ಗದಗ:- ಹಗರಣ ಹೊರ ತೆಗೆಯುತ್ತಾರೆ ಎಂಬ ಭಯ ಬಿಜೆಪಿ ಅವರಿಗಿದೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ಭಾನುವಾರ ನೀವೇನಾದರೂ ಹೊಸ ಬಟ್ಟೆ ಖರೀದಿಸೋ ಪ್ಲ್ಯಾನ್ ಇದ್ಯಾ!? ಹಾಗಿದ್ರೆ ಈ ಸ್ಟೋರಿ ನೋಡಿ!
ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಅವರೂ ಆರೋಪ ಮಾಡಲಿ. ಅವರು ಮಾಡುತ್ತಿರುವುದು ಏನು? ನಾವು ಎಲ್ಲಿ ಅವರು ಮಾಡಿರುವ ತಪ್ಪು, ಹಗರಣಗಳನ್ನ ಕೆದಕಿ ತೆಗೆಯುತ್ತೇವೋ ಎಂಬ ಭಯ ಶುರುವಾಗಿದೆ. ಅದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದರು.
ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮೇಲೆ ವಿಜಯ್ ಟಾಟಾ ದೂರು ಕೊಟ್ಟಿದ್ದಾರೆ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿ, ದೂರು ದಾಖಲಾದ ಮೇಲೆ ಪೊಲೀಸರು ಅವರ ಕೆಲಸ ಏನು? ಕಾನೂನಾತ್ಮಕವಾಗಿ ಏನು ಮಾಡಬೇಕು ಅದನ್ನು ಮಾಡಿದ್ದಾರೆ. ಎಫ್ಐಆರ್ ಮಾಡಿ ತನಿಖೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.