ಬೆಂಗಳೂರು: ರಾಹುಲ್ ಗಾಂಧಿ ವಿವಾದಾತ್ಮಕ ಭಾಷಣ, ಬಿಜೆಪಿ ವಿರೋಧ ವಿಚಾರ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ, ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡ್ಕೊಂಡಿಲ್ಲ ಅಂತ ಸ್ಪಷ್ಟ ಆಯ್ತು ಎಲ್ಲಿಯವರೆಗೆ ಬಿಜೆಪಿಯವರು ರಾಹುಲ್ ಆಚಾರ, ಮಾತು, ಮನಸು ಅರ್ಥ ಮಾಡ್ಕೊಳ್ಳಲ್ವೋ ಅಲ್ಲೀವರೆಗೂ ಗೊಂದಲ ಇರುತ್ತೆ ಎಂದು ಹೇಳಿದರು
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೊಸ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳಲ್ಲಿ ಕೆಲವು ಗೊಂದಲಗಳಿರು ವುದು ನಿಜ ನಮ್ಮ ರಾಜ್ಯದಲ್ಲಿ ನಿನ್ನೆ ರಾತ್ರಿವರೆಗೂ ಸುಮಾರು 66 ಕೇಸ್ ಗಳು ಹೊಸ ಕೇಸ್ ಗಳು ದಾಖಲಾಗಿವೆ ಬೆಂಗಳೂರಿನಲ್ಲೂ 20 ಕೇಸ್ ಗಳು ದಾಖಲಾಗಿವೆ ಹೊಸ ಕಾನೂನುಗಳಲ್ಲಿ ಕೆಲವು ಉತ್ತಮವಾಗಿವೆ, ಕೆಲವು ಸರಿಯಾಗಿಲ್ಲ ಹಿಂದೆ ಕೆಲವು ಸಂದರ್ಭಗಳಲ್ಲಿ ಕೇಸ್ಗಳನ್ನು ದಾಖಲು ಮಾಡುವಂಥದ್ದಿತ್ತು
![Demo](https://ainlivenews.com/wp-content/uploads/2023/12/spoorthi-1.jpg)
DKS Class: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ದಂಗಲ್: ವಿರೋಧಿಗಳಿಗೆ ಡಿಕೆಶಿ ಟಕ್ಕರ್…!
ಈಗ ಹೊಸ ಕಾನೂನುಗಳಲ್ಲಿ ಅವುಗಳನ್ನು ದಾಖಲು ಮಾಡುವ ಹಾಗಿಲ್ಲ ಹೀಗೆ ಕೆಲವು ಗೊಂದಲಗಳಿವೆ, ಅವುಗಳ ಬಗ್ಗೆ ಚರ್ಚೆ ಮಾಡಿ ಕೇಂದ್ರದ ಗಮನಕ್ಕೆ ತರ್ತೇವೆ ಎಂದು ಹೇಳಿದರು.
ಹಾಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬದಲಾವಣೆ ಕುರಿತು ಸಿಎಂ ಭೇಟಿ ಮಾಡಿದ್ದ ವಿಚಾರ ಬಗ್ಗೆಯೂ ಮಾತನಾಡಿ, ನಾನು ನನ್ನ ಇಲಾಖೆಯ ವಿಚಾರಗಳನ್ನು ಮಾತಾಡಲು ಸಿಎಂ ಭೇಟಿ ಮಾಡ್ತಿರ್ತೇನೆ ಆಡಳಿತದಲ್ಲಿ, ಸರ್ಕಾರದಲ್ಲೂ ಕೆಲವು ಸಲಹೆ ಸೂಚನೆಗಳನ್ನು ನಾವೂ ಕೊಡ್ತಿರ್ತೀವಿ ಆಡಳಿತದಲ್ಲಿ ಇದು ನಿತ್ಯ ನಡೆಯುವಂಥದ್ದು ಎಂದು ಹೇಳಿದರು.
Crazy Fan: ನಟ ದರ್ಶನ್ʼಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ಹುಚ್ಚು ಅಭಿಮಾನಿ! ಎಂತಹ ಕಾಲ ಬಂತು ಶಿವಾ…!
ಸಿಎಂ, ಡಿಸಿಎಂ ಕುರಿತು ಚರ್ಚೆ ಮಾಡುವವರಿಗೆ ಡಿಕೆಶಿ ವಾರ್ನಿಂಗ್ ವಿಚಾರ ಬಗ್ಗೆಯೂ ಮಾತನಾಡಿದ ಅವರು, ಅದು ಕೆಪಿಸಿಸಿ ಅಧ್ಯಕ್ಷರಿಗೆ ಸಂಬಂಧಿಸಿದ ವಿಚಾರ ನೊಟೀಸ್ ಕೊಡೋದು ಅಧ್ಯಕ್ಷರು ಮಾಡುವ ಕೆಲಸ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿ ಅಂತ ಅಧ್ಯಕ್ಷರು ಯಾರಿಗೇ ಆದರೂ ಹೇಳಬೇಕಾಗುತ್ತದೆ ಈಗಲೂ ಅದೇ ರೀತಿ ಅದ್ಯಕ್ಷರು ಹೇಳಿದ್ದಾರೆ ಅನ್ಸತ್ತೆ..ಅಧ್ಯಕ್ಷರು ಏನೇ ತೀರ್ಮಾನ ತಗೊಂಡ್ರೂ, ಏನೇ ಹೇಳಿದರೂ ಕೇಳ್ತೇವೆ ಯಾರಿಂದ ಯಾವ ಶಿಸ್ತು ಉಲ್ಲಂಘನೆ ಆಗಿದೆ ಅಂತ ಆ ವ್ಯಕ್ತಿಯನ್ನು ಕರೆದು ಸ್ಪಷ್ಟವಾಗಿ ಹೇಳಬೇಕು..ಆನಂತರ ಮುಂದಿನ ಬೆಳವಣಿಗೆ ಅಧ್ಯಕ್ಷರಿಗೆ ಬಿಟ್ಟಿದ್ದು ಎಂದರು.
ಮುಡಾದಲ್ಲಿ ಗೋಲ್ ಮಾಲ್ ವಿಚಾರ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ವರ್ಗಾವಣೆ ಮಾಡಿರುವ ವಿಚಾರದ ಬಗ್ಗೆ ಹೇಳಿದ ಅವರು, ಅವರನ್ನು ಅಲ್ಲಿಂದ ಸ್ಥಳಾಂತರ ಮಾಡಿದ್ದು, ಅಲ್ಲೇ ಇದ್ದರೆ ಸಾಕ್ಷ್ಯ ನಾಶ ಆಗಬಹುದು ಅಂತ ಮುಂದೆ ಯಾವ ತನಿಖೆ ನಡೆಸಬೇಕು ಅಂತ ತೀರ್ಮಾನ ಆಗುತ್ತದೆ ಪ್ರಕರಣದಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾತ್ರ ಇದೆ ಎಂಬ ಆರೋಪ ವಿಚಾರವನ್ನು ಕೆಲವರು ಹೇಳಿದ್ದನ್ನು ಒಪ್ಪಿಕೊಳ್ಳಲು ಆಗಲ್ಲ ಮುಂದೆ ತನಿಖೆ ಆಗುತ್ತೆ, ಅದರಿಂದ ಎಲ್ಲವೂ ಗೊತ್ತಾಗುತ್ತೆ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)