ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಅಪಪ್ರಚಾರದ ರಾಜಕೀಯ ಶುರುವಾಗಿದೆ. ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ವಿರುದ್ದ ಅಪಪ್ರಚಾರ ಆರೋಪ ಬಂದಿದ್ದು, ಎಸ್. ಬಾಲರಾಜು ಮಣಿಸಲು ಸುಳ್ಳು ಹೇಳಿಕೆ ಪೋಸ್ಟರ್ ಗಳು ವೈರಲ್ ಆಗಿವೆ. ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಸಂಸದ ವಿ. ಶ್ರೀನಿವಾಸ ಪ್ರಸಾದ್ ಬಗ್ಗೆ ಕೀಳಾಗಿ ಮಾತನಾಡಿದ್ದಾರೆಂದು ಸುಳ್ಳು ಪೋಸ್ಟ್ ಕಿಡಿಗೇಡಿಗಳು ಹರಿಬಿಡುತ್ತಿದ್ದಾರೆ. ಹಿರಿಯ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಬಗ್ಗೆ ತಪ್ಪಾಗಿ ಮಾತನಾಡಿದರೆ ದಲಿತರು ಅದನ್ನ ಸಹಿಸುವುದಿಲ್ಲ, ಬಿಜೆಪಿ ಗೆ ಮತ ನೀಡಲ್ಲ ಎಂದು ಕಿಡಿಗೇಡಿಗಳು ಬಿಜೆಪಿಯ ದಲಿತ ಮತಗಳನ್ನು ಒಡೆಯುವ ಪ್ರಯತ್ನಕ್ಕೆ ಮುಂದಾಗಿರುವ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಪೋಸ್ಟರ್ ವೈರಲ್ ಆಗಿವೆ.
PUC ಪಾಸಾದವರಿಗೆ ಉದ್ಯೋಗವಕಾಶ! ಪರೀಕ್ಷೆ ಇಲ್ಲದೆ ನೇರ ನೇಮಕಾತಿ – ತಿಂಗಳಿಗೆ ₹63,000 ಸಂಬಳ.!
ಈ ಬಗ್ಗೆ ನವಾಜ್ ಹಾಗು ರವಿ ಎಂಬುವವರ ವಿರುದ್ದ ಯಳಂದೂರು, ಕೊಳ್ಳೇಗಾಲ ಪೊಲೀಸ್ ಠಾಣೆ ಹಾಗು ಚುನಾವಣಾಧಿಕಾರಿಗಳಿಗೆ ಬಿಜೆಪಿ ದೂರು ನೀಡಲಾಗಿದೆ. ಇನ್ನೂ ಪೋಸ್ಟರ್ ಬೆನ್ನಲ್ಲೇ ನಾನು ಯಾವುದೇ ತರದ ಹೇಳಿಕೆ ನೀಡಿಲ್ಲ ಎಂದು ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾನು ಯಾರನ್ನು ಬೈದಿಲ್ಲ, ಶ್ರೀನಿವಾಸ ಪ್ರಸಾದ್ ಬಗ್ಗೆ ಅಪಾರ ಗೌರವ ಇದೆ. ಹಿರಿಯರನ್ನು ಅವಹೇಳನ ಮಾಡೋದು ನನ್ನ ಸಂಸ್ಕೃತಿ ಅಲ್ಲ, ಆದರೆ ಕಿಡಿಗೇಡಿಗಳು ಸುಳ್ಳು ಪೋಸ್ಟ್ ಕ್ರಿಯೇಟ್ ಮಾಡಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅಂತಹವರನ್ನು ಆ ಮಹದೇಶ್ವರ, ಬಿಳಿಗಿರಿರಂಗನಾಥ ನೋಡಿಕೊಳ್ತಾನೆ. ಸುಳ್ಳು ಸುದ್ದಿ ಹಬ್ಬಿಸುತ್ತಿರುವವರೆಗೆ ಆ ದೇವರು ಸದ್ಬುದ್ಧಿ ಕೊಡಲಿ ಎಂದು ಬಾಲರಾಜ್ ಹೇಳಿದ್ದಾರೆ.