ಗದಗ: ಲೋಕಸಭೆ ಚುನಾವಣೆ ದಿನಾಂಕ ಹತ್ತಿರ ಬರ್ತಿದ್ದಂತೆ ಹಾವೇರಿ-ಗದಗ ಲೋಕಸಭಾ ಕಣ ರಂಗೇರ್ತಾ ಇದೆ. ಬಿಜೆಪಿ ಅಬ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನ ನಡೆಸ್ತಿದ್ದಾರೆ. ಗದಗನ ಅವಳಿ ನಗರವಾದ ಬೆಟಗೇರಿಯಲ್ಲಿ ಭರ್ಜರಿ ರೋಡ್ ಶೋ ಮಾಡೋ ಮೂಲಕ ಮತಬೇಟೆಯನ್ನ ಮಾಡಿದ್ದಾರೆ.
Breaking: ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಕೊಲೆ ಆರೋಪಿಗೆ ಗುಂಡೇಟು.. !
ಇದೇ ವೇಳೆ ಮಾತನಾಡಿದ ಅವರು ದೆಶದ ಭದ್ರತೆ ಹಾಗೂ ರಕ್ಷಣೆಗಾಗಿ ಬಿಜೆಪಿಗೆ ಮತ ಹಾಕಿ ನನ್ನನ್ನು ಗೆಲ್ಲಿಸಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಅಂದ್ರು. ಬೊಮ್ಮಾಯಿ ಅವರಿಗಾಗಿ ಮತಯಾಚನೆಗೆ ಸಂಸದ ಪ್ರತಾಪ್ ಸಿಂಹ, ನಟಿ ತಾರಾ ಅನುರಾಧಾ, ಮಾಜಿ ಸಚಿವ ಸಿ ಸಿ ಪಾಟೀಲ್, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಆಗಮಿಸಿ ಮತ ಯಾಚನೆಯನ್ನ ಮಾಡಿದ್ರು. ರೋಡ್ ಶೋನಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ತು.
![](https://ainlivenews.com/wp-content/uploads/2024/01/Ad-Banner-copy-scaled.jpg)