ಬೆಂಗಳೂರು- ನಿನ್ನೆ ಲೀಕ್ ಆದ ಫೋಟೋ ,ವಿಡಿಯೋ ಇಡೀ ವ್ಯವಸ್ಥೆಯನ್ನೇ ಶೇಕ್ ಆಗೋ ತರ ಮಾಡಿದೆ. ಹೇಗೋ ಮರೆಯಲ್ಲಿ ಎಂಜಾಯ್ ಮಾಡ್ತಿದ್ದ ದರ್ಶನ್ ಗೆ ಸಂಕಷ್ಟ ಎದುರಾಗಿದ್ದು ಮತ್ತೆ ದಾಸನ ವಿರುದ್ಧ ಎರಡು FIR ದಾಖಲಾಗಿದೆ. ತನಿಖೆಗೆ ಎರಡು ಪ್ರತ್ಯೇಕ ತನಿಖಾ ತಂಡಗಳನ್ನ ರಚನೆ ಮಾಡಲಾಗಿದೆ. ಇನ್ನೂ ದರ್ಶನ್ ಗೆ ವಿಲ್ಸನ್ ಗಾರ್ಡನ್ ನಾಗ ಎಲ್ಲಾ ಫೆಸಿಲಿಟಿ ಮಾಡಿಕೊಟ್ಟಿದ್ದ ಎಂಬುದು ಬಟಬಯಲಾಗಿದೆ.
ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಪವರ್ ಕಟ್: ಯಾವ್ಯಾವ ಏರಿಯಾ ಗೊತ್ತಾ!?
ಪರಪ್ಪನ ಅಗ್ರಹಾರ ಜೈಲಿನಲ್ಲಿ ರೆಸಾರ್ಟ್ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದ ಫೋಟೋ ವೈರಲ್ ಆದ ಹಿನ್ನೆಲೆ ದರ್ಶನ್ ಗೆ ಸಂಕಷ್ಟ ಎದುರಾಗಿದೆ. ಜೈಲ್ ನಲ್ಲಿ ಚೇರ್ ಹಾಕಿಕೊಂಡು ಕೈಯಲ್ಲಿ ಸಿಗರೇಟ್, ಕಾಫಿ ಮಗ್ ಹಿಡಿದುಕೊಂಡಿರೋ ಫೋಟೋ ಹೊರಬಂದಿತ್ತು. ಇದರಲ್ಲಿ ವಿಲ್ಸನ್ ಗಾರ್ಡನ್ ನಾಗ, ರೌಡಿ ಶೀಟರ್ ಕುಳ್ಳ ಸೀನಾ,ದರ್ಶನ್ ಮ್ಯಾನೇಜರ್ ನಾಗರಾಜ್ ಇದ್ದರು. ಇದೆ ವಿಚಾರವಾಗಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು FIR ಗಳು ದಾಖಲಾಗಿವೆ.
ತನಿಖೆಗಾಗಿ ಮೂರು ಪ್ರತ್ಯೇಕ ತಂಡಗಳನ್ನ ರಚನೆ ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.
ಜೈಲ್ ನಲ್ಲಿ ಚೇರ್ ವ್ಯವಸ್ಥೆ ಮಾಡಿದ್ದು ಯಾರು, ನಿಷೇಧಿತ ಸಿಗರೇಟ್ ಕೊಟ್ಟವರು ಯಾರು ಅನ್ನೋದರ ಬಗ್ಗೆ ತನಿಖೆ ಮಾಡಲು ಬೇಗೂರು ಠಾಣೆಯ ಇನ್ಸ್ಪೆಕ್ಟರ್ ಕೃಷ್ಣ ಕುಮಾರ್ ತನಿಖೆ ಮಾಡಿದ್ರೆ ವಿಡಿಯೋ ಕಾಲ್ ಮಾಡಿದ್ದು ಯಾರು, ಪೋನ್ ಕೊಟ್ಟಿದ್ದು ಯಾರು ಒಳಗಡೆ ಜಾಮಾರ್ ಇದ್ರು ವ್ಯವಸ್ಥೆ ಮಾಡಿದ್ದು ಯಾರು ಅನ್ನೋದರ ಬಗ್ಗೆ ಹುಳಿಮಾವು ಠಾಣೆಯ ಇನ್ಸ್ಪೆಕ್ಟರ್ ಕುಮಾರಸ್ವಾಮಿ, ಹಾಗೂ ಜೈಲಿನಲ್ಲಿ ಆಗಿರುವ ಕರ್ತವ್ಯ ಲೋಪದ ತನಿಖೆ ಮಾಡಲು ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಮಂಜುನಾಥ್ ತನಿಖೆ ನಡೆಸುತ್ತಿದ್ದಾರೆ.
ಇನ್ನೂ ಆರೋಪಿ ದರ್ಶನ್ ಗೆ ಪರಪ್ಪನ ಜೈಲಿನಲ್ಲೇ ಎಲ್ಲಾ ಸೌಲಭ್ಯ ಸಿಗುತ್ತಿತ್ತು ಎಂಬುದು ಗೊತ್ತಾಗಿದೆ. ನಾಮಾಕವಸ್ಥೆಗಷ್ಟೇ ಜೈಲಿನಲ್ಲಿ ಆರೋಪಿ ದರ್ಶನ್ ಇರುವುದು ಸಾಬೀತಾಗುತ್ತಿದೆ.
ಜೈಲಿನ ಅಧಿಕಾರಿಗಳು, ರೌಡಿಗಳಿಂದಲೇ ದರ್ಶನ್ ಗೆ ಎಲ್ಲಾ ರೀತಿ ವ್ಯವಸ್ಥೆ ಮಾಡಲಾಗುತ್ತಿತ್ತು.
ಸಿಗರೇಟ್ ಮಾತ್ರವಲ್ಲ
ಬನಶಂಕರಿಯ ಶಿವಾಜಿ ಮಿಲ್ಟ್ರಿ ಹೋಟೆಲ್ ನಿಂದಲೇ ದರ್ಶನ್ ಗೆ ಬಿರಿಯಾನಿ ಸಪ್ಲೈ ಆಗುತ್ತಿತ್ತು. ಬಿರಿಯಾನಿ ಜೊತೆ ಕಿಕ್ಕೇರಿಸಿಕೊಳ್ಳಲು ಎಣ್ಣೆಯೂ ಸಹ ಸಿಗ್ತಿತ್ತು. ಅದು ಕೂಡ ಜೈಲಿನಲ್ಲಿರೋ ನಟೋರಿಯಸ್ ಗಳ ಜೊತೆಯೇ ದರ್ಶನ್ ಇರುವ ಹೈ ಸೆಕ್ಯೂರಿಟಿ ಬ್ಯಾರೇಕ್ ನಲ್ಲೇ ನಡೀತಿತ್ತು. ಈ ಪಾರ್ಟಿಯಲ್ಲಿ ರೌಡಿಶೀಟರ್ ಗಳಾದ ವಿಲ್ಸನ್ ಗಾರ್ಡನ್ ನಾಗ, ಬೇಕರಿ ರಘು, ಆಪ್ತ ನಾಗರಾಜ್, ಪವನ್ ಭಾಗಿಯಾಗಿರುವುದು ಕನ್ಫರ್ಮ್ ಆಗಿದೆ.
ಈ ಎಲ್ಲಾ ವಿಚಾರ ಹೊರ ಬರುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ಬೆಳಗಾವಿ ಹಿಂಡಲಗಾ ಜೈಲಿಗೆ ದರ್ಶನ್ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ದರ್ಶನ್ ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಿದ್ರೆ ಈಗ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಗೆ ಕಷ್ಟವಾಗಬಹುದು. ಇನ್ನೂ ಇಡೀ ರಾಜ್ಯದಲ್ಲಿ ಪರಪ್ಪನ ಅಗ್ರಹಾರ ಹೈ ಸೆಕ್ಯುರಿಟಿ ಹೊಂದಿರುವ ಜೈಲಾಗಿದೆ. ಹೀಗಾಗಿ ದಾಸನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಬೇಕಾ ಬೇಡವಾ ಎಂದು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಒಟ್ಟಾರೆಯಾಗಿ ಪ್ರಭಾವಿಗಳು,ಹಣವಂತರಿಗೆ ಪರಪ್ಪನ ಅಗ್ರಹಾರ ಜೈಲು ರೆಸಾರ್ಟ್ ಆಗಿದೆ ಎಂಬುದಂತು ಸುಳ್ಳಲ್ಲ.