ಬೆಂಗಳೂರು: ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದ 3ನೇ ಹಂತದಲ್ಲಿ ನಡೆದಿದೆ.
ಸುಕನ್ಯಾ (48), ನಿಖಿತ್ (28), ನಿಶಿತ್ (28) ಸಾವಿಗೆ ಶರಣಾದವರು. ಘಟನಾ ಸ್ಥಳಕ್ಕೆ ಜೆ.ಪಿ.ನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಸ್ಥಳೀಯರು ಮತ್ತು ಸಂಬಂಧಿಕರಿಂದ ಮಾಹಿತಿ ಪಡೆಯುತ್ತಿದ್ದಾರೆ.
DV Sadananda Gowda: ಸಂಸದ ಡಿವಿ ಸದಾನಂದ ಗೌಡ ನಡೆ ನಿಗೂಢ: ಬೆಂಗಳೂರಿನಿಂದ ಸುಳ್ಯಕ್ಕೆ ತೆರಳಿದ DVS!
ಜೆಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಒಂದೇ ಮನೆಯಲ್ಲಿ ಮೂವರು ಸಾವು ಪ್ರಕರಣ ಸಂಬಂಧ ಪೊಲೀಸರಿಗೆ ಹಲವು ಅನುಮಾನ ಕ್ರೈಂ ಸೀನ್ ಪರಿಶೀಲನೆ ವೇಳೆ ಹಲವು ಅನುಮಾನ ಬಂದೋಗಿದ್ದು ಎಲೆಕ್ಟ್ರಿಕಲ್ ವೈಯರ್ ಹಿಡಿದುಕೊಂಡು ಕರೆಂಟ್ ಶಾಕ್ ನಿಂದ ಸಾವು ಕರೆಂಟ್ ಪಾಸ್ ಆಗಿ ಬೆಂಕಿ ಹೊತ್ತಿಕೊಂಡು ಸಾವು..
ರೂಮ್ ಲಾಕ್ ಮಾಡಿಕೊಂಡು ವೈಯರ್ ಹಿಡಿದುಕೊಂಡಿದ್ರು. ಮೂವರು ಶವಗಳ ಬಳಿ ವೈಯರ್ ಪತ್ತೆ ಹಿನ್ನೆಲೆ.. ಸಾಕಷ್ಟು ಅನುಮಾನ ಮೂಡಿಸಿದ ಮೂವರ ಸಾವು ಆತ್ಮಹತ್ಯೆ ನಾ ಅಥವಾ ಓರ್ವರಿಗೆ ಕರೆಂಟ್ ಆದಾಗ ಬಿಡಿಸೋಕೆ ಹೋಗಿ ಘಟನೆ ನಡೆದಿದ್ದಾ ಅನ್ನೋ ಅನುಮಾನ..
ಸದ್ಯ ಘಟನಾ ಸ್ಥಳ ಇನ್ಸ್ಪೆಕ್ಟ್ ಮಾಡ್ತಿರೋ ತನಿಖಾ ತಂಡ ಜೆಪಿ ನಗರ ಪೊಲೀಸರು, ಎಫ್ ಎಸ್ ಎಲ್, ಸೋಕೋ ಟೀಂನಿಂದ ಪರಿಶೀಲನೆ ಬೆಸ್ಕಾಂ ಅಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ಘಟನೆ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೂ ಪರಿಶೀಲನೆ ಮಾಡಿ ಮಾಹಿತಿ ನೀಡಲು ಸೂಚಿಸಿರೋ ಪೊಲೀಸರು.