ಬೆಂಗಳೂರು: ದೇಶದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ರೋಚಕ ಟ್ವಿಸ್ಟ್ ಗಳನ್ನು ಪಡೆದುಕೊಳ್ತಿದೆ.ಪ್ರಕರಣದ ತನಿಖೆಯನ್ನು ಎಸ್ ಐ ಟಿ ಚುರುಕುಗೊಳಿಸಿದೆ. ಇತ್ತ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಅಜ್ಞಾತ ಸ್ಥಳದಿಂದ ವಿಡೀಯೋ ಮಾಡಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಡ್ರೈವರ್ ಕಾರ್ತಿಕೆ ಹೇಳಿಕೆಗೆ ಬಿಜೆಪಿ ಮುಖಂಡ ದೇವರಾಜೇಗೌಡ ತಿರುಗೇಟು ನೀಡಿದ್ದಾರೆ. ಪೆನ್ ಡ್ರೈವ್ ಪ್ರಕರಣದ ಇಂದಿನ ಕಂಪ್ಲೀಟ್ ಡೀಟೇಲ್ಸ್ ತೋರಿಸ್ತೀವಿ ನೋಡಿ
ದೇಶದಲ್ಲೇ ಭಾರೀ ಸದ್ದು ಮಾಡಿರುವ, ಸಾಮಾಜಿಕ ಜಾಲತಾಣಗಳಲ್ಲಿ ಮೊದಲ ಸ್ಥಾನದ ಟ್ರೆಂಡಿಂಗ್ ನಲ್ಲಿರುವ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯಗಳ ಪೆನ್ ಡ್ರೈವ್ ಪ್ರಕರಣ ಕೈಗೆತ್ತಿಕೊಂಡಿರುವ ಎಸ್ ಐ ಟಿ ತಂಡ ತನಿಖೆಯನ್ನು ಚುರುಕುಗೊಳಿಸಿದೆ. ಪ್ರಕರಣದ ತನಿಖೆಗಾಗಿ ಎಸ್ ಐ ಟಿ ತನ್ನ ತಂಡಕ್ಕೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಣಿತ 18 ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದೆ. ಸೀಮಾಲಟ್ಕರ್ ನೇತೃತ್ವದಲ್ಲಿ ಒಂದು ತಂಡ ,ಸುಮನ್ ಡಿ ಪನ್ನೇರ್ ನೇತೃತ್ವದಲ್ಲಿ ಒಂದು ತಂಡ ಹಾಗು ತಾಂತ್ರಿಕ ನಿಪುಣರ ಒಂದು ತಂಡವನ್ನು ರಚನೆ ಮಾಡಿ ತನಿಖೆಯನ್ನು ಚುರುಕುಗೊಳಿಸಿದೆ.
ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪ್ರಜ್ಚಲ್ ರೇವಣ್ಣ ಅವರಿಗೆ ಸೇರಿದೆ ಎನ್ನಲಾದ ಆಶ್ಲೀಲ ವಿಡಿಯೊ ಸಂಬಂಧ ಎಸ್ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ಮತ್ತೊಂದು ಕಡೆ ಪೆನ್ ಡ್ರೈವ್ ಮೂಲಕ ವಿಡಿಯೊ ಲೀಕ್ ಮಾಡಿದ್ದು ಯಾರು ಅನ್ನುವ ಚರ್ಚೆ ಶುರುವಾಗಿದೆ. ಈ ವಿಚಾರಕ್ಕೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹಾಗೂ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಪೆನ್ ಡ್ರೈವ್ ಲೀಕ್ ವಿಚಾರವಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ.
Bank holidays 2024 May: ಮೇ ತಿಂಗಳಲ್ಲಿ 11 ದಿನ ಬ್ಯಾಂಕ್ ಕ್ಲೋಸ್.! RBI ರಜಾಪಟ್ಟಿ ಹೀಗಿದೆ ನೋಡಿ
ಧಿಡೀರ್ ಎಂದು ಅಜ್ಞಾತ ಸ್ಥಳದಿಂದ 6 ನಿಮಿಷಗಳ ವಿಡೀಯೋ ಮಾಡಿ ಸ್ಪಷ್ಟನೆ ನೀಡಿರುವ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಗೌಡ, ನನಗೆ ನ್ಯಾಯ ಕೊಡಿಸಿ ಎಂದು ಪೆನ್ ಡ್ರೈವ್ ಅನ್ನು ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡರಿಗೆ ಕೊಟ್ಟಿದ್ದೆ . ವಕೀಲ ದೇವರಾಜೇಗೌಡರಿಗೆ ಬಿಟ್ಟರೆ ನಾನು ಕಾಂಗ್ರೆಸ್ ನ ಯಾರೋಬ್ಬರಿಗೂ ಪೆನ್ ಡ್ರೈವ್ ಕೊಟ್ಟಿಲ್ಲ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹೀಗೆ ನಾನು ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಮಾತ್ರ ವಿಡಿಯೊವಿರುವ ಪೆನ್ ಡ್ರೈವ್ ನ ಕಾಪಿ ಕೊಟ್ಟಿದ್ದೆ ಎಂದು ಹೇಳಿರುವ ಕಾರ್ತಿಕ್ ಗೆ ದೇವರಾಜೇಗೌಡ ತಿರುಗೇಟು ನೀಡಿದ್ದಾರೆ.. ಕಾರ್ತಿಕ್ ನನಗೆ ಪೆನ್ ಡ್ರೈವ್ ನೀಡಲಿಲ್ಲ ಅವರ ಬಳಿ ಇದ್ದ ವೀಡೀಯೋಗಳನ್ನು ಕಾಪಿ ಮಾಡಿಕೊಟ್ಟಿದ್ದು ನಿಜ. ಆದ್ರೆ ಈ ವೀಡಿಯೋಗಳನ್ನು ನೀಡುವ ಮೊದಲೇ ಕಾರ್ತಿಕ್ ಕಾಂಗ್ರೆಸ್ ನಾಯಕರನ್ನ ಸಂಪರ್ಕ ಬೆಳೆಸಿಕೊಂಡಿದ್ದ ಎಂದು ದೇವರಾಜಗೌಡ ಹೇಳಿದ್ದಾರೆ.
ನನಗೆ ಎಸ್ಐಟಿ ನೋಟಿಸ್ ನೀಡಿದರೆ ವಿಚಾರಣೆಗೆ ಹಾಜರಾಗಿ ತಮ್ಮ ಬಳಿಯಿರುವ ಎಲ್ಲಾ ದಾಖಲೆಗಳನ್ನು ನೀಡುತ್ತೇನೆ. ಕಾಂಗ್ರೆಸ್ ನವರು ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ. ನನ್ನ ಬಳಿ ಇನ್ನು ಕಾರ್ತಿಕ್ ಹಾಗು ಕಾಂಗ್ರೆಸ್ ಮುಖಂಡರ ಹಲವು ಆಡಿಯೋಗಳಿವೆ ಆ ಎಲ್ಲವನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಕಾಂಗ್ರೆಸ್ ನವರ ವಿರುದ್ದ ವಾಗ್ದಾಳಿ ಮಾಡಿದ್ರು… ಈ ಮಧ್ಯೆ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಆಶ್ಲೀಲ ವಿಡಿಯೊ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ.
ದಿನೇ ದಿನೇ ಪ್ರಜ್ವಲ್ ವಿರುದ್ಧ ವ್ಯಾಪಕ ಅಕ್ರೋಶ ವ್ಯಕ್ತವಾಗುತ್ತಿದ್ದಂತೆ ಗಂಭೀರವಾಗಿ ಪರಿಗಣಿಸಿರುವ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣದ ತನಿಖೆಯ ಪ್ರಗತಿ ಹಾಗೂ ಇದಕ್ಕೆ ಪೂರಕವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ನೀಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಆಯೋಗ ಪತ್ರ ಬರೆದಿದೆ. ಒಟ್ಟಿನಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳ ಪೆನ್ ಡ್ರೈವ್ ಪ್ರಕರಣ ಕಾಂಗ್ರಸ್ ಜೆಡಿಎಸ್ ಬಿಜೆಪಿಯವರು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ…ಈಗ ಎಸ್ ಐಟಿ ಸಂತ್ರಸ್ಥ ಮಹಿಳೆ ನೀಡಿರುವ ದೂರಿನ ತನಿಖೆ ಜೊತೆಗೆ ವಿಡಿಯೊ ಲೀಕ್ ಮಾಡಿದವರ ಮೂಲವನ್ನು ಶೋಧಿಸಬೇಕಿದೆ…