ತುಮಕೂರು:- 2024 ರ ಲೋಕ ಸಭಾ ಚುನಾವಣಾ ಹೊತ್ತಲ್ಲಿ ಕಾಂಗ್ರೆಸ್ ಗೆ ಶಾಕ್ ಎದುರಾಗಿದೆ. ಕಾಂಗ್ರೆಸ್ ನಾಯಕನಿಗೆ ಜೆಡಿಎಸ್ ನಾಯಕರು ಗಾಳ ಹಾಕಿದ್ದಾರೆ.
ಕೆಆರ್ ಪುರದಲ್ಲಿ ಜೆಮಿನಿ ಸರ್ಕಸ್ ಪ್ರಾರಂಭ, ಬೇಸಿಗೆಯಲ್ಲಿ ಮಕ್ಕಳಿಗೆ ಮನರಂಜನೆ
ಲೋಕ ಗೆಲ್ಲಲು ಮೈತ್ರಿ ನಾಯಕರು ಮಾಸ್ಟರ್ ಪ್ಲಾನ್ ಮಾಡಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾಯಕನಿಲ್ಲದೇ ಜೆಡಿಎಸ್ ಸೊರಗುತ್ತಿದೆ. ಈ ಹಿನ್ನೆಲೆ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ನಿಂಗಪ್ಪನನ್ನ ಕೆರೆತರಲು ಕಸರತ್ತು ನಡೆದಿದೆ.
ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಕರೆತರಲು ತೆರೆಮರೆ ಕಸರತ್ತು ನಡೆದಿದ್ದು, ಮಾಜಿ ಶಾಸಕ ನಿಂಗಪ್ಪನನ್ನ ಜೆಡಿಎಸ್ ಕರೆತರಲು ಮಾತುಕತೆ ನಡೆದಿದೆ ಎನ್ನಲಾಗಿದೆ. ತುಮಕೂರು ಜಿಲ್ಲಾ ಜೆಡಿಎಸ್ ನಾಯಕರಿಂದ ಮಾತುಕತೆ ನಡೆದಿದೆ.
MLC ತಿಪ್ಪೇಸ್ವಾಮಿ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ನೇತೃತ್ವದಲ್ಲಿ ಮಾತುಕತೆ ನಡೆದಿದ್ದು, JDSಜಿಲ್ಲಾಧ್ಯಕ್ಷ ಅಂಜಿನಪ್ಪ,ಮಾಜಿ ಶಾಸಕ ಸುಧಕಾರ್ ಲಾಲ್ ಸೇರಿದಂತೆ ಹಲವು JDSನಾಯಕರು ಭೇಟಿ ಮಾಡಿದ್ದಾರೆ. ತುಮಕೂರುನಗರದ ಸರಸ್ವತಿ ಪುರಂನಲ್ಲಿರುವ ನಿಂಗಪ್ಪ ಮನೆಗೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದು, ಮಾಜಿ ಶಾಸಕ ಡಿಸಿ ಗೌರಿಶಂಕರ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆದ ಬಳಿಕ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾಯಕ ಸ್ಥಾನ ಖಾಲಿಯಾಗಿದೆ.
ಲೋಕಸಭಾ ಚುನಾವಣಾ ವೇಳೆ ನಿಂಗಪ್ಪ ಜೆಡಿಎಸ್ ಪಕ್ಷ ಸೇರ್ಪಡೆ ಆದ್ರೆ, ತುಮಕೂರು ಗ್ರಾಮಾಂತರ ಕ್ಷೇತ್ರದ ಒಕ್ಕಲಿಗ ಮತಗಳನ್ನ ತಮ್ಮತ್ತ ಸೆಳೆಯಬಹುದೆಂಬ ಲೆಕ್ಕಚಾರದಲ್ಲಿರುವ ಮೈತ್ರಿ ನಾಯಕರು ಇದ್ದಾರೆ.