ಬಳ್ಳಾರಿ: AIN ವರದಿ ಹಿನ್ನೆಲೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರೂರಿನ ಅಂಬೇಡ್ಕರ್ ವಸತಿ ಶಾಲೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕಳೆದ ತಿಂಗಳು ಈ ಶಾಲೆಯ ದುಸ್ಥಿತಿಯ ಬಗ್ಗೆ AIN ಸವಿಸ್ತಾರವಾಗಿ ವರದಿ ಮಾಡಿತ್ತು. ಹಲವು ವರ್ಷಗಳಿಂದ ಎಪಿಎಂಸಿ ಗೋದಾಮಿನಲ್ಲಿ ಈ ಶಾಲೆ ಇದ್ದು, ವರದಿಗೆ ಎಚ್ಚೆತ್ತು ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ವಸತಿ ಶಾಲೆಯ ಅವ್ಯವಸ್ಥೆ ಕಂಡು ಆಯೋಗದ ಸದಸ್ಯರು ಬೇಸರ ಹೊರ ಹಾಕಿದ್ದಾರೆ.
ಕನಿಷ್ಠ ಮೂಲಭೂತ ಸೌಲಭ್ಯಗಳ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆದ ಶಶಿಧರ್ ಕೊಸಂಬೆ, ಶೌಚಾಲಯ, ಕುಡಿಯುವ ನೀರು, ಆಹಾರದ ಗುಣಮಟ್ಟ ಪರಿಶೀಲನೆ ಮಾಡಿದ್ದಾರೆ.
ಎಪಿಎಂಸಿ ಧೂಳಿನಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಮಕ್ಕಳು ಕಂಪ್ಲೆಂಟ್ ಮಾಡಿದ್ದು, ಮಕ್ಕಳ ಮೇಲೆ ಆರೋಗ್ಯ ಸಮಸ್ಯೆಯಿದ್ರೂ ಕ್ರಮ ಕೈಗೊಳ್ಳದ ವಾರ್ಡನ್ ವಿರುದ್ಧ ಕೊಸಂಬೆ ಅಸಮಾಧಾನ ಹೊರ ಹಾಕಿದ್ದಾರೆ. ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸತೀಶ್’ಗೆ ಸೂಚನೆ ನೀಡಿದ್ದಾರೆ.
ಒಂದು ವಾರದೊಳಗೆ ಸುಸಜ್ಜಿತ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರ ಮಾಡುವಂತೆ ಸಮಾಜ ಕಲ್ಯಾಣಯ ಇಲಾಖೆ ಡಿಡಿಗೆ ಸೂಚನೆ ನೀಡಿದ್ದಾರೆ.