ಬೀದರ್:- ನಡುರಸ್ತೆಯಲ್ಲೇ ಮಿನಿ ಟಿಪ್ಪರ್ ಹೊತ್ತಿ ಉರಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಚೆನ್ನಬಸವ ಆಶ್ರಮದ ಬಳಿ ಜರುಗಿದೆ.
ರಾಜಕೀಯ ನಾಯಕರು ಹಿಟ್ಲರ್ ನೀತಿ ಅನುಸರಿಸಬೇಡಿ: ಸುದೀಪ್ ಮ್ಯಾನೇಜರ್ ಕೆಂಡಾಮಂಡಲ!
ಕಿರಾಣಿ ಅಂಗಡಿಗಳಿಗೆ ಸಕ್ಕರೆ ಡೆಲಿವರಿ ಮಾಡುತ್ತಿದ್ದ ಚಂದು ಎಂಬುವವರಿಗೆ ಸೇರಿದ ಮಿನಿ ಟಿಪ್ಪರ್ ಇದ್ದಾಗಿದ್ದು, ಇಂದು ರೇಡಿಯಂ ಅಂಗಡಿ ಬಳಿ ನಿಲ್ಲಿಸಿದ್ದಾಗ ಮಿನಿ ಟಿಪ್ಪರ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಧಗಧಗನೆ ಹೊತ್ತಿ ಉರಿದಿದೆ.
ಚಾಲಕ ಅಗ್ನಿ ಅವಘಡದಿಂದ ಪಾರಾಗಿದ್ದು, ಮಿನಿ ಟಿಪ್ಪರ್ ಬಹುತೇಕ ಸುಟ್ಟು ಭಸ್ಮವಾಗಿದೆ.