ಬೆಂಗಳೂರು: ಬೆಂಗಳೂರಿನಲ್ಲಿ ಸರಿಯಾಗಿ ಫುಟ್ ಪಾತ್ ನಲ್ಲಿ ನಡೆಯೋದೇ ಕಷ್ಟ. ಅತ್ತೊಂದ್ರಲ್ಲಿ ಫುಟ್ಪಾತ್ಗಳ ಮೇಲೆ ಯಮರೂಪಿ ಟ್ರಾನ್ಸ್ ಫಾರ್ಮರ್ ಗಳು ಜನರ ಪಾಲಿಗೆ ಕಂಟಕ ತಂದಿವೆ.ಇವುಗಳ ಬಳಿ ಸ್ವಲ್ಪ ಯಾಮಾರಿದ್ರೂ ಯಮನ ಪಾದ ಸೇರೋದು ಗ್ಯಾರಂಟಿ.ಆದ್ರೂ ಬೆಸ್ಕಾಂ ಮಾತ್ರ ತಲೆನೇ ಕೆಡಿಸಿಕೊಳ್ತಿಲ್ಲ. ನಗದ ಗಲ್ಲಿ ಗಲ್ಲಿಯಲ್ಲೂ ಡೆಡ್ಲಿ ಟ್ರಾನ್ಸ್ ಫಾರ್ಮರ್ ಗಳು ಜನರ ಬಲಿಗಾಗಿ ಕಾಯ್ತಿವೆ. ಹಾಗಾದ್ರೆ ನಿಗದಲ್ಲಿ ಇನ್ನೂ ಎಷ್ಟಿವೆ ಡೆಡ್ಲಿ ಟಾನ್ಸ್ ಫಾರ್ಮಸ್ಸ್ ಬನ್ನಿ ಹೇಳ್ತಿವೆ.
ಬೆಸ್ಕಾಂ ಇದು. ಮನೆ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಸರ್ಕಾರಿ ಇಲಾಖೆ. ಆದ್ರೆ ಇತ್ತೀಚಿಗೆ ಈ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಬೇಜವಾಬ್ದಾರಿ ಎದ್ದು ಕಾಣ್ತಿದೆ. ಇವರು ಮಾಡ್ತಿರೋ ಎಡವಟ್ಟುಗಳಿಂದ ಜನನ ಬೀದಿ ಹೆಣವಾಗ್ತಿದ್ದಾರೆ. ಇತ್ತೀಚಿಗೆ ಕಾಡುಗೋಡಿ ಬಳಿ ವಿದ್ಯುತ್ ಅವಘಡದಿಂದ ದೊಡ್ಡ ಅನಾಹುತವೇ ನಡೆದುಹೋಗಿದೆ. ಆದ್ರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಡೇಜರ್ ಟ್ರಾನ್ಸ್ ಫಾರ್ಮರ್ ಗಳನ್ನು ದುಸಸ್ಥಿ ಮಾಡುವ ಯತ್ನಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ನಗರದಲ್ಲಿ ಇನ್ನೂ ಸಾವಿರಾರು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಜನರ ಬಲಿಗಾಗಿ ಕಾಯ್ತಿವೆ..
ಹೌದು.. ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ಕೂಡ ಸೇಫಲ್ಲ ಅನ್ನೋದು ಆಗಾಗ ನಡೆಯೋ ದುರ್ಘಟನೆಗಳೇ ಸಾಕ್ಷಿ.. ಪಾದಚಾರಿ ಮಾರ್ಗದಲ್ಲಿರೋ ಟ್ರಾನ್ಸ್ ಫಾರ್ಮರ್ ಗಳು ಜನರ ಜೀವ ನುಂಗಲು ಕಾದು ಕುಳಿತಿವೆ. ಕಳೆದ ಎರಡು ಮೂರು ವರ್ಷಗಳಲ್ಲಿ ನಗರ ವ್ಯಾಪ್ತಿಯಲ್ಲಿ 70 ಕ್ಕೂ ಹೆಚ್ಚು ಮಂದಿ ವಿದ್ಯುತ್ ಅವಘಡಗಳಿಂದ ಜೀವ ಕಳೆದುಕೊಂಡಿದ್ದಾರೆ.
ಜನರ ಓಡಾಟಕ್ಕೆ ತೊಂದರೆಯಾಗಿರುವ ಟ್ರಾನ್ಸ್ ಫಾರ್ಮರ್ಗಳನ್ನು ಹೈಕೋರ್ಟ್ ಆದೇಶದ ಮೇರೆಗೆ ಅವುಗಳ ವಿನ್ಯಾಸ ಬದಲಾಯಿಸಿ ಸ್ಥಳಾಂತರಿಸುವ ಕೆಲಸವನ್ನು ಮಾಡಬೇಕು .ಅಂದರೆ ಈ ಬಗ್ಗೆ ಬೆಸ್ಕಾಂ ನಿರ್ಲಕ್ಷ್ಯ ವಹಿಸಿರೋ ಜನರ ಕೆಂಗಣ್ಣಿಗೆ ಕಾರಣವಾಗಿದೆ.ನಗರದಲ್ಲಿ ಇನ್ನೂ 4818 ಟ್ರಾನ್ಸ್ ಫಾರ್ಮರ್ ಗಳು ಡೆಡ್ಲಿಯಾಗಿತ್ತು. ಜನ ಆತಂಕದಲ್ಲಿ ಓಡಾಟ ಮಾಡ್ತಿದ್ದಾರೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನ ಕೇಳಿದ್ರೆ ಅವರು ಹೇಳೋದೆ ಬೇರೆ.
ಮೂರು ಕಂಬಗಳ ಬದಲಾಗಿ ಹೊಸ ವಿನ್ಯಾಸದಲ್ಲಿ ಒಂದೇ ಕಂಬದಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗುತ್ತಿದೆ. ನೆಲಮಟ್ಟದಲ್ಲಿದ್ದ ಹಾಕಲಾಗುತ್ತಿದ್ದ ಟ್ರಾನ್ಸ್ ಫಾರ್ಮರ್ಗಳನ್ನು 21 ಮೀಟರ್ ಎತ್ತರದ ಸಿಂಗಲ್ ಪೋಲ್ನಲ್ಲಿ ಎತ್ತರದಲ್ಲಿ ಅಳವಡಿಸಬೇಕು . ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರೋ ಕಾರಣ ಜನರಿಗೆ ಕಂಟಕವಾಗಿದೆ. ಇವುಗಳಿಗೆ ಹಾಕಲಾದ ವೈರ್ ಮತ್ತು ಕಂಬಿಗಳುಫುಟ್ ಪಾತ್ನಲ್ಲಿ ನಡೆದುಕೊಂಡು ಹೋಗುವವರಿಗೆ ಯಮಸ್ವರೂಪಿಯಾಗಿವೆ.
ನಗರದಲ್ಲಿ ಬೆಸ್ಕಾಂಗೆ ಸೇರಿದ 49 ಸಾವಿರ ಟ್ರಾನ್ಸ್ ಫಾರ್ಮರ್ ಗಳು ರಸ್ತೆ ಬದಿ, ಫುಟ್ ಪಾತ್ ಮೇಲೆ ಹಾಕಲಾಗಿದೆ. ಆದ್ರೆ ಆ ಪೈಕಿ 4 ಸಾವಿರಕ್ಕೂ ಹೆಚ್ಚು ಟ್ರಾನ್ಸ್ ಫಾರ್ಮರ್ ಗಳು ಪಾದಚಾರಿಗಳ ಓಡಾಟಕ್ಕೆ ಅಡಚಣೆ ಮಾಡೋದಲ್ಲದೆ ಅಪಾಯಕಾರಿ ಸ್ಥಿತಿಯಲ್ಲಿದೆ. ಸದ್ಯ ಹೊಸ ವಿನ್ಯಾಸದ ಬದಲಾಯಿಸಿ ನೆಲಮಟ್ಟದಿಂದ ಎತ್ತರಿಸಿದ ಮಾರ್ಗಕ್ಕೆ ಹಾಕುವ ಪ್ರಯತ್ನ ಆಗ್ತಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಜನರ ಜೀವ ಹಿಂಡಲು ಟ್ರಾನ್ಸ್ ಫಾರ್ಮರ್ ಗಳು ಕಾದು ಕುಳಿತಿವೆ.ಹೀಗಾಗಿ ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ವಿದ್ಯುತ್ ತಂತಿಗಳು ಕಡೆಯಿಂದ ದೂರ ಇರೋದೇ ಒಳ್ಳೇದು.