ಬೆಂಗಳೂರು:- ಬ್ಯಾಟರಾಯನಪುರ ಕ್ಷೇತ್ರದ ರಾಜೀವ್ ಗಾಂಧಿ ನಗರದಲ್ಲಿ ಬೆಸ್ಕಾಂ ಕಂಬಕ್ಕೆ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಜರುಗಿದೆ.
IPL 2024: ಜಾಕ್ಸ್ ಅಬ್ಬರಕ್ಕೆ ದಾಖಲೆಗಳೆಲ್ಲಾ ಉಡೀಸ್..! ಅಬ್ಬಬ್ಬಾ ಏನ್ ಬ್ಯಾಟಿಂಗ್ ಗುರು..!
ವಿದ್ಯುತ್ ಕಂಬದ ಫ್ಯೂಸ್ ಸ್ಫೋಟಗೊಂಡು ಪಕ್ಕದ ಶೆಡ್ಗಳಿಗೆ ಬೆಂಕಿ ಆವರಿಸಿದೆ. ಶೆಡ್ಗಳಲ್ಲಿ ವಲಸೆ ಕಾರ್ಮಿಕರು ವಾಸಿಸುತ್ತಿದ್ದರು. ಬೆಂಕಿ ಆವರಿಸಿದ ಸಂದರ್ಭ ಕಾರ್ಮಿಕರು ಬೆಂಕಿ ನಂದಿಸಲು ಹೋಗಿದ್ದಾರೆ. ಈ ವೇಳೆ ನಾಲ್ವರಿಗೆ ಬೆಂಕಿ ತಗುಲಿದೆ.
ಘಟನೆಯಿಂದ ಕಾರ್ಮಿಕರ ಮುಖ, ಕೆನ್ನೆ ಹಾಗೂ ಕೈ ಭಾಗಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಎರಡು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.