ಬೆಂಗಳೂರು: ಅವರೆಲ್ಲಾ ವಿದ್ಯುತ್ ಬಿಲ್ ಕಲೆಕ್ಟ್ ಮಾಡೋ ಸಿಬ್ಬಂದಿ. ದುಬಾರಿ ದುನಿಯಾದಲ್ಲಿ ಕಡಿಮೆ ವೇತನ ಪಡೆದು ಜೀವನ ಮಾಡೋ ಗುತ್ತಿಗೆ ನೌಕರರು. ಆದ್ರೆ ಸರ್ಕಾರದ ಆ ಮಹತ್ವಾಕಾಂಕ್ಷೆ ಯೋಜನೆ ಅವರ ಸಂಬಳಕ್ಕೆ ಕತ್ತರಿ ಹಾಕಿದೆ. ಆ ಯೋಜನೆ ಜಾರಿಯಾದ ಬಳಿಕ ಆ ಸಿಬ್ಬಂದಿಗೆ ಸಮರ್ಪವಾಗಿ ವೇತನವೇ ಸಿಗದ ಪರದಾಡ್ತಿದ್ದಾರೆ.ವೇತನ ನೀಡಿ ಅಂತ ಸರ್ಕಾರದ ಕದ ತಟ್ಟಿದ್ರೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಸರ್ಕಾರದ ವಿರುದ್ದ ಸಮರ ಸಾರಲು ಸಿಬ್ಬಂದಿ ಮುಂದಾಗಿದ್ದಾರೆ.
ಸರ್ಕಾರ ಪಂಚ ಗ್ಯಾರಂಟಿಗಳನ್ನ ಜಾರಿ ಮಾಡಿದೆ. ಆದ್ರೆ ಗ್ಯಾರಂಟಿಗಳು ಜಾರಿ ಬಳಿಕ ಕೆಲ ಇಲಾಖೆಗಳಲ್ಲಿ ಸಿಬ್ಬಂದಿಗೆ ಸಂಕಟ ಎದುರಾಗಿದೆ. ಹೌದು ಗೃಹಜ್ಯೋತಿ.. ಸರ್ಕಾರದ ಮಹತ್ವಕಾಂಕ್ಷೆ ಯೋಜನೆ.. ಪ್ರತಿ ಮನೆಗೆ 200 ಯೂನಿಟ್ ವರಿಗೂ ಫ್ರೀ ವಿದ್ಯುತ್ ಕಲ್ಪಿಸಲಾಗ್ತಿದೆ. ಆದ್ರೆ ಗೃಹಜ್ಯೋತಿ ಜಾರಿ ಬಳಿಕ ಬೆಸ್ಕಾಂ ವ್ಯಾಪ್ತಿಯಲ್ಲಿ ಕೆಲಸ ಮಾಡ್ತಿರೋ ಮೀಟರ್ ರೀಟರ್ಗಳಿಗೆ ಬಾರಿ ಸಂಕಟ ಎದುರಾಗಿದೆ, ಗೃಹಜ್ಯೋತಿ ಜಾರಿ ಬಳಿಕ ಸಿಬ್ಬಂದಿಗೆ ಸಮರ್ಪಕವಾಗಿ ವೇತನ ಆಗ್ತಿಲ್ವಾಂತೆ. ಜೊತೆಗೆ ನೀಡ್ತಿರೋ ವೇತನದಲ್ಲಿ ಕಡಿತ ಮಾಡಿ ಹಣ ಬಿಡುಗಡೆ ಮಾಡ್ತಿರೋ ಆರೋಪ ಕೇಳಿಬಂದಿದೆ.
ಗೃಹಜ್ಯೋತಿ ಜಾರಿಯಾಗಿ ಕೆಲ ಸಿಬ್ಬಂದಿಗೆ ಬಿಸಿ ತಟ್ಟುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ದಿಢೀರ್ ಅಂತ ಮೀಟರ್ ಗಳ 5 ಸಾವಿರ ಸಂಬಳ ಕಡಿತಗೊಳಿಸಲಾಗ್ತಿದೆ. ಗೃಹಜ್ಯೋತಿ ಜಾರಿ ಮುನ್ನ ಮೀಟರ್ ರೀಡರ್ ಗಳಿಗೆ 21,291 ರೂ ವೇತನ ನೀಡಲಾಗ್ತಿತ್ತು. ಬೆಸ್ಕಾಂ ಆದ್ರೆ ಇದೀಗ ದಿಢೀರ್ ಅಂತ 17,385 ರೊ ಮಾತ್ರ ವೇತನ ಬಿಡುಗಡೆ ಮಾಡಲಾಗ್ತಿದೆ..ಬೆಸ್ಕಾಂ ನಿರ್ಧಾರಕ್ಕೆ ಬೇಸತ್ತು ಸರ್ಕಾರದ ಕದ ತಟ್ಟಿರೋ ಸಿಬ್ಬಂದಿ ಕೂಡಲೇ ಹಣ ಪಾವತಿಸುವಂತೆ ಆಗ್ರಹಿಸಿದ್ದಾರೆ. ಆದ್ರೂ ಸರ್ಕಾರ ಹಾಗೂ ಬೆಸ್ಕಾಂ ವೇತನ ನೀಡ್ತಿಲ್ಲ. ಹೀಗಾಗಿ ಸರ್ಕಾರ ಹಾಗೂ ಬೆಸ್ಕಾಂ ನಿರ್ಧಾರ ಖಂಡಿಸಿ ನಾಳೆ ಬೀದಿಗಿಳಿಯಲು ನಿರ್ಧಾರ ಮಾಡಿದ್ದಾರೆ
ಇಷ್ಟೇ ಅಲ್ಲದೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಆಗದೆ ಮೀಟರ್ ರೀಡರ್ ಸಿಬ್ಬಂದಿ ಪರದಾಡುತ್ತಿದ್ದಾರೆ. ಗೃಹಜ್ಯೋತಿ ಮುನ್ನ ಮನೆಮನೆಗೆ ತೆರಳಿ ಮೀಟರ್ ಬಿಲ್ ಕಲೆಕ್ಟ್ ಮಾಡುತ್ತಿದ್ರು. ಗೃಹಜ್ಯೋತಿ ಜಾರಿ ಬಳಿಕ ಉಚಿತ ವಿದ್ಯುತ್ ಪೂರೈಕೆ ಮಾಡ್ತಿರೋ ಕಾರಣದಿಂದ ಸಿಬ್ಬಂದಿ ಮನೆ ಮನೆಗೆ ತೆರಳಿ ಮೀಡರ್ ರೀಡರ್ ಗಳು ಹಣ ಕಲೆಕ್ಟ್ ಮಾಡ್ತಿಲ್ಲ. ಹೀಗಾಗಿ ಮೀಡರ್ ರೀಡರ್ ಗಳ ವೇತವನ್ನ ಕಡಿತ ಮಾಡಲಾಗಿದೆ.ಇದು ಮೀಟರ್ ರೀಟರ್ ಗಳ ಆಕ್ರೋಶಕ್ಕೆ ಕಾರಣವಾಗಿದೆ
ಒಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಗೃಹಜ್ಯೋತಿ ಮೀಟರ್ ರೀಟರ್ ಗಳಿಗೆ ಸಂಕಷ್ಟ ತಂದಿದೆ. ಇದರಿಂದ ಬೇಸತ್ತಿರೋ ಸಿಬ್ಬಂದಿ ಬೀದಿಗಿಳಿಯಲು ನಿರ್ಧಾರ ಮಾಡಿದೆ. ಇವರ ಹೋರಾಟಕ್ಕೆ ಸರ್ಕಾರ ಹಾಗೂ ಬೆಸ್ಕಾಂ ಮಣಿಯುಯತ್ತಾ ಅನ್ನೋದನ್ನ ಕಾದುನೋಡಬೇಕಿದೆ