ಬೆಂಗಳೂರಿನಲ್ಲಿ ಒಂದೊಂದು ಇಂಚು ಭೂಮಿಗೆ ಬಂಗಾರದ ಬೆಲೆ ಇದೆ.ಇದರಿಂದ ಭೂಗಳ್ಳರ ಹಾವಳಿ ಜಾಸ್ತಿಯಾಗಿದೆ.ನಗರದೆಲ್ಲಡೆ ಸರ್ಕಾರದ ಸ್ವತ್ತಿಗೆ ಭೂಗಳ್ಳರು ಕಂಡ ಕಂಡಲ್ಲಿ ಬೇಲಿ ಹಾಕ್ತಿದ್ದಾರೆ..ಅಂತಹವರಿಗೆ ಚಳಿ ಬಿಡಿಸಬೇಕಾದ ಅಧಿಕಾರಿಗಳು ನಿದ್ರೆಯಲ್ಲಿದ್ದಾರೆ..ಕೋಟಿ ಕೋಟಿ ಮೌಲ್ಯದ ವಿವಿ ಪ್ರಾಪರ್ಟಿ ಒತ್ತುವರಿಯಾಗಿದ್ರೂ ಅಧಿಕಾರಿಗಳು ಕ್ರಮನೇ ಕೈಗೊಳ್ಳುತ್ತಿಲ್ಲ. ಹೀಗಾಗಿ ಬೆಂಗಳೂರು ವಿವಿ ಭೂಗಳ್ಳರ ಪರ ನಿಂತಿರೋದು ವಿವಿ ಆವರಣದಲ್ಲಿ ಆಕ್ರೋಶ ಭಗಿಲೆದ್ದಿದೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ ಮಾಡಿದ್ರೆ ಒಳ್ಳೆಯದು: ಡಿ.ವಿ.ಸದಾನಂದಗೌಡ
ಬೆಂಗಳೂರು ಬೆಳೆದಂತೆ ಒಂದೊಂದು ಅಡಿ ಜಾಗಕ್ಕೂ ಚಿನ್ನದಂತಹ ಬೆಲೆ ಇದೆ. ಒಂದು ಅಡಿ ಜಾಗ ಖಾಲಿ ಇದ್ರೂ ಜನ ನಮ್ದು ಅಂತ ಬೇಲಿ ಹಾಕ್ತಾರೆ.ಸರ್ಕಾರಿ ಜಾಗ ಇರಲಿ, ಖಾಸಗಿ ಜಾಗವಾಗಲಿದೆ ನಮ್ದೆ ಅಂತ ಬೋಡರ್ ಹಾಕಿಕೊಳ್ತಾರೆ. ಇಷ್ಟು ಆದ್ರೂ ನಗರದಲ್ಲಿ ಭೂಗಳ್ಳರ ಆಟಕ್ಕೆ ಕಡಿವಾಣ ಹಾಕುವರೇ ಇಲ್ಲದಂತಾಗಿದೆ. ಭೂಗಳ್ಳರ ಭೂ ಧಾಹಕ್ಕೆ ಸರ್ಕಾರಿ ಸ್ವತ್ತು ಕೂಡ ಕಂಡಕಂಡವರು ಪಾಲಾಗ್ತಿದೆ..ಬೆಂಗಳೂರು ವಿವಿಯ ಜ್ಝಾನಭಾರತಿ ಕ್ಯಾಂಪಸ್ ಕೂಡ ಭೂಗಳ್ಳರ ಕಪಿಮುಷ್ಟಿಯಲ್ಲಿ ಸಿಲುಕಿದೆ.ಆಸ್ತಿ ರಕ್ಷಣೆ ಮಾಡಬೇಕಾದ ವಿವಿ ಅಧಿಕಾರಿಗಳು ಭೂಗಳ್ಳರ ಜೊತೆ ಶಾಮೀಲಾಗಿ ಭಕ್ಷಕರು ಆಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.ವಿವಿಯ ಎಕರೆಗಟ್ಟಲೆ ಜಾಗ ಒತ್ತುವರಿದಾರರು ಬೇಲಿ ಹಾಕಿಕೊಂಡಿದ್ರೂ ತೆರವು ಮಾಡದೆ ನಿರ್ಲಕ್ಷ್ಯ ವಹಿಸಿದೆ.
ಹೌದು ವಿವಿ ಜಾಗದಲದ್ಲಿ ಭೂಗಳ್ಳರು,ಎಲ್ಲೆಂದರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ರೂ ಕೇಳೋರಿಲ್ಲ ಕೇಳೋರೇಇಲ್ಲದಂತಾಗಿದೆ. ಸ್ವತ್ತಿನ ಹೆಸರಲ್ಲಿ ಅಧಿಕಾರಿಗಳು ಹಣ ವಸೂಲಿಗೆ ಇಳಿದಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ..ಒತ್ತುವರಿದಾರರ ಕೈಯಲ್ಲಿಟ್ಟಿರುವ ಅಧಿಕಾರಿಗಳು ನೂರಾರು ಕೋಟಿ ಬೆಲೆ ಬಾಳುವ ಪ್ರಾಪರ್ಟಿಯನ್ನ ಮಾರಿಕೊಳ್ಳುವದಕ್ಕೆ ಫ್ಲ್ಯಾನ್ ರೂಪಿಸಿದ್ದಾರೆ… ಕೋಟಿ ಬೆಲೆ ಬಾಳುವ ಪ್ರಾಪರ್ಟಿ ಒತ್ತುವರಿಯಾಗಿದ್ರು ವಿವಿಗೆ ಬೇಡವಾಗಿದೆ.
ಪಹಣಿಯಲ್ಲಿ ಗೋಮಾಳ ಜಾಗ ಅಂತ ಇದ್ರೂ ಭೂಗಳ್ಳರು ಮನೆ,ಹಾಗೂ ಕಾಂಪೌಂಡ್ ನಿರ್ಮಿಸೋಕೆ ಪ್ಲಾನ್ ರೂಪಿಸಿದ್ದಾರೆ.ಜ್ಞಾನಭಾರತಿ ಕ್ಯಾಂಪಸ್ 1200 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈಗಾಗಲೇ ಬೆಂಗಳೂರು ವಿವಿ ವ್ಯಾಪ್ತಿಯ ಪಂತರಾಪಾಳ್ಯ, ನಾಯಂಡಹಳ್ಳಿ, ಕೆಂಚೇನಹಳ್ಳಿ, , ಮಲ್ಲತ್ತಹಳ್ಳಿ, ಮತ್ತು ನಾಗರಭಾವಿ ಗ್ರಾಮಗಳಲ್ಲಿ ಅತಿಕ್ರಮಣವಾಗಿದೆ.ಆದ್ರೂ ವಿವಿ ಕುಲಪತಿ ಹಾಗೂ ಕುಲಸಚಿವರು ಕ್ರಮವಹಿಸುತ್ತಿಲ್ಲ. ಕೂಡಲೇ ವಿವಿ ಕ್ಯಾಂಪಸ್ ಜಾಗವನ್ನ ಸರ್ವೆ ಮಾಡಬೇಕು. ಆಸ್ತಿ ರಕ್ಷಣೆಗೆ ಒತ್ತು ನೀಡಬೇಕೆಂದು ವಿವಿ ವಿದ್ಯಾರ್ಥಿಗಳು ಒತ್ತಾಯ ಮಾಡ್ತಿದ್ದಾರೆ.
1200 ಎಕರೆ ಇರೋ ವಿವಿ ಸ್ವತ್ತಿಗೆ ನಮ್ಮದು ಅಂತ ಇಲ್ಲಿಯವರಿಗೆ ಬೋರ್ಡ್ ಕೂಡ ಹಾಕಿಲ್ಲ. ಹೀಗಾಗಿ ಕೋಟ್ಯಾಂತರ ರೂಪಾಯಿ ಜಾಗ ಈಗ ಇತರರ ಪಾಲಾಗಿದೆ. ಒತ್ತುವರಿದಾರರಿಗೆ ವಿವಿಯ ಹಲವು ಅಧಿಕಾರಿಗಳು ಸಪೋರ್ಟ್ ಕೊಟ್ಟಿದ್ಧಾರೆ. ಬಡವರ ಮನೆ ಒಡೆಯುವ ಅಧಿಕಾರಿಗಳು ಪ್ರಭಾವಿಗಳ ಮುಂದೆ ಕೈಕಟ್ಟಿಕುಳಿತುಕೊಂಡಿದ್ದಾರೆ ಅನ್ನೋ ಆರೋಪ ದೆ.. ಒಟ್ನಲ್ಲಿ ವಿವಿಗೆ ಸೇರಬೇಕಾದ ಬಹುತೇಕ ಜಾಗ ಕಂಡವರ ಪಾಲಾಗಿದೆ..ಅಂತಹವರ ಬಳಿಯಿಂದ ಅಧಿಕಾರಿಗಳು ದುಡ್ಡಿಗೆ ಡಿಮ್ಯಾಂಡ್ ಇಟ್ಟು ಸೆಟ್ಲ್ ಮಾಡಿಕೊಳ್ತಿದ್ದಾರೆ.ಶಿಕ್ಷಣ ಇಲಾಖೆಗೆ ಪಾಲಾಗಬೇಕಾದ ಭೂಮಿ ಭೂ ಗಳ್ಳರ ಪಾಲಾಗ್ತಿರೋದು ದುರಂತವೇ ಸರಿ.