ಬೆಂಗಳೂರು: ಕಳೆದ ಎರಡ್ಮೂರು ತಿಂಗಳಗಳ ಹಿಂದೆ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿತ್ತು.. ಕೆಲ ದಿನಗಳಿಂದ ಮಳೆಗಾಲ ಪ್ರಾರಂಭವಾದ್ರೂ ಬೆಂಗಳೂರಿಗರಿಗೆ ನೀರಿನ ಹಸಿವು ತಣಿಸುತ್ತಿಲ್ಲ.. ಆಗಾಗಿ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವಂತೆ ನಿವಾಸಿಗಳು ಜಲಮಂಡಳಿ ಕಚೇರಿಗೆ ಹಾಕಿದ್ದಾರೆ..
ಬೆಂಗಳೂರಿನ ಕೆಆರ್ ಪುರ ಕ್ಷೇತ್ರದ ಹೊರಮಾವು ವಾರ್ಡಿನ ಚಳ್ಳಿಕೆರೆ, ನಗರೇಶ್ವರ ನಾಗೇನಹಳ್ಳಿ, ಹೊರಮಾವು, ಆಗರ ನಿವಾಸಿಗಳು ಕಾವೇರಿ ನೀರಿನ ಸಂಪರ್ಕ ಕಲ್ಪಿಸುವಂತೆ ಹೆಚ್.ಬಿ.ಆರ್.ಬಡಾವಣೆಯಲ್ಲಿ ಇರುವ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಿಮಗೆ ಮೃದುವಾದ ಚಪಾತಿ ಬೇಕೇ? ಈ ಟಿಪ್ಸ್ ಫಾಲೋ ಮಾಡಿ – ಬೆಣ್ಣೆಯಂತ ಚಪಾತಿ ರೆಡಿ.!
ಈ ಭಾಗಗಳಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿನ ಹಾಹಾಕಾರವಿದ್ದು, ನೀರಿನ ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.. ಕಾವೇರಿ ಪೈಪ್ ಲೈನ್ ಹಾಗೂ ಅವುಗಳಿಗೆ ಮೀಟರ್ ಅಳವಡಿಸಿ ವರ್ಷಗಳೇ ಕಳೆದರೂ ನೀರು ಮಾತ್ರ ದೊರೆತ್ತಿಲ್ಲ ಎಂದು ನಿವಾಸಿಗಳು ಕಿಡಿಕಾರಿದರು. ಶೀಘ್ರವಾಗಿ ಕಾವೇರಿ ನೀರು ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು..