ಬಳ್ಳಾರಿ:- ಬೆಳಗಾವಿ ಅಧಿವೇಶನದಲ್ಲಿ ಮತ್ತೆ ಮುಂದುವರೆದ ಬಳ್ಳಾರಿ ರೆಡ್ಡಿ ವರ್ಸ್ಸ್ ರೆಡ್ಡಿ ಕಾಳಗ. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಹಲವು ಸಭೆ ಸಮಾರಂಭಗಳಲ್ಲಿ ಗಂಗಾವತಿ ಶಾಸಕ ಜನಾರ್ಧನ್ ರೆಡ್ಡಿ ಹಾಗೂ ನಗರ ಶಾಸಕ ಭರತ್ ರೆಡ್ಡಿ ಅವರ ನಡುವೆ ಆರೋಪ ಮತ್ತು ಪ್ರತ್ಯಾರೋಪ ಮಾಡುತ್ತಿದ್ದರು.ಇದೇ ಆರೋಪ-ಪ್ರತ್ಯಾರೋಪ ಬೆಳಗಾವಿ ಅಧಿವೇಶನದಲ್ಲಿ ಮುಂದುವರೆದಿದೆ.
ಈ ಕುರಿತು ಜಿಲ್ಲೆಯ ಜನರು ಪ್ರತಿಕ್ರಿಯಿಸಿ ಬಳ್ಳಾರಿ ಅಭಿವೃದ್ದಿಯ ವಿಚಾರವಾಗಿ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರು ಮಾತನಾಡಿದ ವಿಷಯಕ್ಕೆ ಸಂಬಂಧಿಸಿದಂತೆ, ಮಾತು ಪ್ರಾರಂಭಿಸಿದ ಭರತ್ ರೆಡ್ಡಿ ಬಳ್ಳಾರಿ ಅಭಿವೃದಿಯ ಕುರಿತು ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಜನಾರ್ಧನ ರೆಡ್ಡಿ ಅವರು ಬಳ್ಳಾರಿಯನ್ನು ಅಭಿವೃದ್ದಿ ಮಾಡಿರುವುದಕ್ಕಿಂತ, ಅಕ್ರಮ ಗಣಿಗಾರಿಕೆಯ ಮೂಲಕ ಸಂಪಾದಿಸಿಕೊಂಡು ಜಿಲ್ಲೆಗೆ ಕುಖ್ಯಾತಿಯನ್ನು ತಂದಿದ್ದಾರೆ.ಅಷ್ಟೇ ಅಲ್ಲದೇ ಅವರ ಬಳ್ಳಾರಿಯನ್ನು ರಿ ಪಬ್ಲಿಕ್ ಬಳ್ಳಾರಿ ಮಾಡ ಹೊರಟಿದ್ದರು. ಅದನ್ನು ತಪ್ಪಿಸಿ ಬಳ್ಳಾರಿಯನ್ನು, ಮತ್ತೆ ನೈಜಸ್ಥಿತಿಗೆ ತಂದವರು ಕಾಂಗ್ರೇಸ್ ಅವರು ಎಂದು ಕುರುಗೋಡು ಪಟ್ಟಣ ಪಂಚಾಯಿತಿಯ ಸದಸ್ಯರಾದ ಚನ್ನಪಟ್ನ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.