ಬೆಳಗಾವಿ:- ಕುಂದಾನಗರಿ ಬೆಳಗಾವಿಯಲ್ಲಿ ಕಾಡಾನೆ ಪ್ರತ್ಯೇಕತಾವಾಗಿದ್ದು, ಹರಸಾಹಸಪಟ್ಟು ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗಟ್ಟಿದ್ದಾರೆ.
ಇತ್ತ ಪೊಲೀಸರು ತಕ್ಷಣ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಬರುವುದರಲ್ಲಿ ಒಂಟಿ ಸಲಗ ಶಾಹು ನಗರದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಅಲ್ಲಿಂದ ಆನೆ ನಡೆದಿದ್ದೇ ದಾರಿ ಎಂಬಂತೆ ಹೋಲಗದ್ದೆ, ನಗರ ಪ್ರದೇಶದಲ್ಲಿ ಹೆಜ್ಜೆ ಹಾಕುತ್ತಾ ಸಾಗಿದ್ದಾನೆ. ಯಾವಾಗ ಕಾಡಾನೆ ಮತ್ತೆ ಸಾರ್ವಜನಿಕ ಪ್ರದೇಶದತ್ತ ಮುಖ ಮಾಡಿತೋ, ಅವಾಗ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಸರಿದಾರಿಗೆ ತಂದಿದ್ದಾರೆ.
ದಾರಿ ಮಧ್ಯೆ ಬಂದ ಬೈಕ್, ವಾಟರ್ ಟ್ಯಾಂಕ್, ಹೋದಲ್ಲಿನ ಬೆಳೆಗಳನ್ನ ನಾಶ ಮಾಡುತ್ತಾ ಸಾಗಿದ್ದಾನೆ. ಕಂಗ್ರಾಳಿ ಅಲತಗಾ ಮಧ್ಯೆ ಬರುತ್ತಿದ್ದಂತೆ ಕೆರಳಿದ ಗಜರಾಜ್, ಅರಣ್ಯ ಇಲಾಖೆ ಸಿಬ್ಬಂದಿಯನ್ನ ಬೆನ್ನಟ್ಟಿ ಹಿಮ್ಮೆಟ್ಟಿಸಿದ್ದಾನೆ. ಇತ್ತ ಆನೆ ಬಂದ ಸುದ್ದಿ ಹರಡುತ್ತಿದ್ದಂತೆ ನಗರದ ಜನ ಸೇರಿ ಗ್ರಾಮೀಣ ಭಾಗದ ಜನರು ಆನೆ ನೋಡಲು ಅದನ್ನ ಹಿಂಬಾಲಿಸಿಕೊಂಡು ಹೊರಟರು. ತಕ್ಷಣ ಅಲರ್ಟ್ ಆದ ಪೊಲೀಸರು ಜನರು ಆನೆ ಬಳಿ ಹೋಗದಂತೆ ನೋಡಿಕೊಂಡಿದ್ದಾರೆ.
ಇನ್ನು ಕಾಡಿನಿಂದ ನಾಡಿಗೆ ಬಂದ ಕಾಡಾನೆ ನೀರಿಗಾಗಿ ಆರಂಭದಲ್ಲಿ ಪರದಾಡಿತು. ಜಮೀನೊಂದರಲ್ಲಿದ್ದ ನೀರಿನ ಸಿಂಟೆಕ್ಸ್ ಉರುಳಿಸಿ ನೀರು ಕುಡಿಯಲು ಯತ್ನಿಸಿತು. ನೀರು ಸಿಗದಿದ್ದಾಗ ಅಲ್ಲಿಂದ ಮತ್ತೆ ಜಮೀನಿನತ್ತ ಮುಖ ಮಾಡಿತು. ಒಂಟಿ ಸಲಗ ಹೋಗುವುದನ್ನ ಕಂಡ ಕೆಲವರು ಭಯಭೀತಿಯಿಂದ ಮನೆಯಿಂದ ಹೊರಗೆ ಬರಲಿಲ್ಲ. ಈ ಮಧ್ಯೆ ಕಂಗ್ರಾಳಿ ಬಳಿ ಗಜರಾಜ ಸ್ನಾನ ಮಾಡೋ ದೃಶ್ಯಗಳು ಅಂತೂ ಮನಹೋಕವಾಗಿತ್ತು.