ಬೆಂಗಳೂರು: ಮಲ್ಲೇಶ್ವರ ಬಿಬಿಎಂಪಿ ಆಟದ ಮೈದಾನದ ಗೇಟ್ ಬಿದ್ದು ಬಾಲಕ ಸಾವು ಪ್ರಕರಣ ಘಟನೆ ಸಂಬಂಧ ಬಿಬಿಎಂಪಿಗೆ ಆಂತರಿಕ ತನಿಖಾ ವರದಿ ಸಲ್ಲಿಕೆಯಾಗಿದ್ದು ಮೂವರು ಚೀಫ್ ಇಂಜಿನಿಯರ್ ಒಳಗೊಂಡ ಸಮಿತಿ ರಚಿಸಿ ವರದಿಗೆ ಸೂಚಿಸಿದ್ದ ತುಷಾರ್ ಗಿರಿನಾಥ್
ಬಿಬಿಎಂಪಿ ವರದಿಯಲ್ಲಿ ಅಧಿಕಾರಿಗಳ ಹಾಗೂ ಗುತ್ತಿಗೆ ಸಂಸ್ಥೆಯ ಕಳಪೆ ಕಾಮಗಾರಿ ಬಹಿರಂಗ ಹಾಗೆ ಹಲವು ಅಂಶಗಳನ್ನು ಪ್ರಮುಖವಾಗಿ ಉಲ್ಲೇಖಿಸಿರುವ ತನಿಖಾ ಸಮಿತಿ
Tomato Price Hike: ಈರುಳ್ಳಿ, ಬೆಳ್ಳುಳ್ಳಿ ಬಳಿಕ ಈಗ ದಿಢೀರ್ ಟೊಮೆಟೊ ದರ ಭಾರೀ ಏರಿಕೆ
* ಅತಿ ತೂಕದ ಗೇಟ್ ಅಳವಡಿಕೆ
* 216 kg ತೂಕದ ಗೇಟ್ ಅಳವಡಿಕೆ
* ಇಷ್ಟು ತೂಕ ಹೊರುವ ಕ್ಲಾಂಪ್ ಅಳವಡಿಕೆ ಮಾಡಿಲ್ಲ
* ಇಷ್ಟೊಂದು ತೂಕದ ಗೇಟ್ ಮೈದಾನಕ್ಕೆ ಬೇಕಾಗಿರಲಿಲ್ಲ
* Non Distractive Method ನಲ್ಲಿ ವೆಲ್ಡಿಂಗ್ ಮಾಡಿಲ್ಲ
* ನಿರ್ವಹಣೆ ಇಲ್ಲದೆ ಕ್ಲಾಂಪ್ ಗಳು ಸಂಪೂರ್ಣ ತುಕ್ಕು ಹಿಡಿದಿದೆ
* ಸಾರ್ವಜನಿಕರು ದೂರು ಕೊಟ್ಟರೂ ಸ್ಪಂದಿಸಿದ ವಾರ್ಡ್ ಇಂಜಿನಿಯರ್ ಗಳು
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 10 ವರ್ಷದ ಬಾಲಕ ನಿರಂಜನ್ ಮೃತಪಟ್ಟಿದ್ದಾನೆ. ಸೆಪ್ಟಂಬರ್ 22ರಂದು ಭಾನುವಾರ ಸಂಜೆ 4 ಘಂಟೆ ಸುಮಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ರಾಜಾಶಂಕರ್ ಆಟದ ಮೈದಾನದಲ್ಲಿ, ಕಬ್ಬಿಣದ ಗೇಟ್ ಬಾಲಕನ ತಲೆ ಮೇಲೆ ಬಿದ್ದು ಮೃತಪಟ್ಟಿದ್ದಾನೆ. ಗದಗ ಮೂಲದವರಾಗಿರುವ ಮೃತ ನಿರಂಜನ್ ಪೋಷಕರು ಬೆಂಗಳೂರಿನಲ್ಲಿ ಪ್ಯಾಲೇಸ್ ಗುಟ್ಟಹಳ್ಳಿಯ ವಿವೇಕಾನಂದ ಬ್ಲಾಕ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.