ಬೆಂಗಳೂರು: ಅದು ಬೆಂಗಳೂರಿನ ಮೊಟ್ಟ ಮೊದಲ ಸ್ಕೈ ವಾಕ್. ಆದರೆ ಅದರ ಪರಿಸ್ಥಿತಿ ಅದ್ವಾನವಾಗಿದೆ. ಅದು ಕುಡುಕರ ಅಡ್ಡೆಯಾಗಿದೆ. ಯಾವಾಗ ಬೇಕಿದ್ದರೂ ನೆಲಕ್ಕಚ್ಚುವ ಭೀತಿ ಹುಟ್ಟಿಸಿದೆ. ಆ ಪಾದಾಚಾರಿ ಮೇಲ್ಸೇತುವೆಯ ದಾರುಣ ಚಿತ್ರಣದ ವರದಿ ಇಲ್ಲಿದೆ. ಅದು ಮೆಜೆಸ್ಟಿಕ್ ಸಂತೋಷ್ ಚಿತ್ರಂಮದಿರದ ಬಳಿ ಡಾ. ರಾಜ್ ಕುಮಾರ್ ಅವರ ಪುತ್ಥಳಿ ಇರುವ ಜಾಗ. ವರನಟನ ತಲೆಯ ಮೇಲೆ ಇರುವ ಈ ಸ್ಕೈವಾಕ್ ಈಗ ಶಿಥಲಗೊಂಡಿದೆ.
ಹೇಳಿ ಕೇಳಿ ಇದು ಬಿಬಿಎಂಪಿ ಮೊಟ್ಟ ಮೊದಲು ನಿರ್ಮಿಸಿದ ಸ್ಕೈ ವಾಕ್ ಬೇರೆ. ಈ ಸ್ಕೈ ವಾಕ್ ಈಗ ಕುಡುಕರ ಅಡ್ಡೆಯಾಗಿ ಹೋಗಿದೆ. ರಸ್ತೆ ದಾಟಲು ಸ್ಕೈ ವಾಕ್ ಹತ್ತುವ ಪಾದಾಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಇದರ ಕಟ್ಟಡ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ಜನರು ಜೀವ ಕೈಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ.
Ginger Side Effects: ಅತಿಯಾದ ಶುಂಠಿ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳಾಗುತ್ತೆ ಗೊತ್ತಾ..?
ಗಾಂಧಿನಗರ, ಉಪ್ಪಾರಪೇಟೆ, ಮೆಜೆಸ್ಟಿಕ್ ಬಸ್ ನಿಲ್ದಾಣದ ಕಡೆಗೆ ಈ ಜಂಕ್ಷನ್ ಸಂಪರ್ಕ ಕಲ್ಪಿಸುತ್ತದೆ. ಪ್ರತಿ ಕ್ಷಣವೂ ಈ ಸಿಗ್ನಲ್ ಹಾದು ನೂರಾರು ವಾಹನಗಳು ಹೋಗುತ್ತದೆ. ಆದರೆ ವಾಹನ ಸವಾರರ ತಲೆಯ ಮೇಲೆ ತೂಗುಗತ್ತಿಯಂತೆ ಬಿರುಕು ಬಿಟ್ಟ ಈ ಸ್ಕೈವಾಕ್ ಇದೆ. ಮೆಟ್ಟಿಲುಗಳು, ಪಿಲ್ಲರ್ ಗಳು ಸಂಪೂರ್ಣ ಶಿಥಿಲಗೊಂಡು ರಾಡ್ ಗಳು ಹೊರ ಬಂದಿವೆ.
ಅಕ್ಕಪಕ್ಕದಲ್ಲಿ ಸಿಟಿ ಸೆಂಟರ್ ಮಾರುಕಟ್ಟೆಯೂ ಇದೆ. ಇಲ್ಲಿಗೂ ಸಾವಿರಾರು ಮಂದಿ ಖರೀದಿಗೆ ಆಗಮಿಸುತ್ತಾರೆ. ಅದರ ನಡುವೆ ಈ ಪಾದಚಾರಿ ಮೇಲ್ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದೆ. ಇತ್ತ ಬಿಬಿಎಂಪಿ ಅಯುಕ್ತರು ಸ್ಕೈವಾಕ್ ಬಗೆ ವರದಿ ತರಿದಿ ಸ್ಕೈವಾಕ್ ಅನ್ನು ತೆರವು ಮಾಡೋದಕ್ಕೆ ಅದೇಶ ನೀಡಿದ್ರು.. ಬಿಬಿಎಂಪಿ ಇಂಜಿನಿಯರ್ ಗಳಿಗೆ ಸ್ಥಳೀಯರು ಹಲವು ಬಾರಿ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಳ್ಳದ ಪಾಲಿಕೆ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ರು..