ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಅಭೂತಪೂರ್ವ ಗೆಲುವು ಸಾಧಿಸಿದೆ. ಬರೋಬ್ಬರಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ (BJP), ಜೆಡಿಎಸ್ (JDS) ಹಾಗೂ ಇತರರಿಗೂ ಬಿಸಿ ಮುಟ್ಟಿಸಿದೆ. ಈ ಅದ್ಭುತ ಗೆಲುವಿಗೆ ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿಗಳನ್ನ ಘೋಷಿಸಿತ್ತು
ಹೌದು .. ಇದೀಗ ರಾಜ್ಯ ಕಾಂಗ್ರೆಸ್ ನ ಐದು ಗ್ಯಾರಂಟಿಯ ಬೆಂಗಳೂರು ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ ಸಮಿತಿ ಬಿಬಿಎಂಪಿ ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ವರದಿ ಬಿಡುಗಡೆ ಮಾಡಲಾಗಿದೆ.
ನಗರದಲ್ಲಿ ಈವರೆಗೆ ಎಷ್ಟೆಷ್ಟು ಜನರಿಗೆ ಯೋಜನೆಯ ಲಾಭ ಸಿಕ್ಕಿದೆ ಗೊತ್ತಾ!?
* ಶಕ್ತಿ ಯೋಜನೆ
93.72 ಕೋಟಿ ಜನರು ಪ್ರಯಾಣ
ಒಟ್ಟು 1287 ಕೋಟಿ ಖರ್ಚು
* ಅನ್ನ ಭಾಗ್ಯ ಯೋಜನೆ
3.9 ಕೋಟಿ ಫಲಾನುಭವಿಗಳು – 652 ಕೋಟಿ ವ್ಯಯ
* ಗೃಹಜ್ಯೋತಿ ಯೋಜನೆ
40 ಲಕ್ಷ ಫಲಾನುಭವಿಗಳು – 2825 ಕೋಟಿ ವೆಚ್ಚ
* ಗೃಹಲಕ್ಷ್ಮಿ ಯೋಜನೆ
8.67 ಲಕ್ಷ ಫಲಾನುಭವಿಗಳು – 173 ಕೋಟಿ ಖರ್ಚು
* ಯುವನಿಧಿ ಯೋಜನೆ
12,410 ಜನ ಫಲಾನುಭವಿಗಳು – 7.41 ಕೋಟಿ ವ್ಯಯ