ಕಲಬುರ್ಗಿ:- ಯುವ ಸಮೂಹದ ಮೂಲಕ ಪಕ್ಷವನ್ನ ಬಲಗೊಳಿಸಲು ಮುಂದಾಗಿರುವ ಜೆಡಿಎಸ್ ಇದೀಗ ಯುವನಾಯಕ ಬಾಲರಾಜ್ ಗುತ್ತೇದಾರ್ ಗೆ ಕಲಬುರಗಿ ಜಿಲ್ಲಾಧ್ಯಕ್ಷ ಸ್ಥಾನ ನೀಡಿ ಮಾಜಿ ಸಿಎಂ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಕಳೆದ ಬಾರಿ ಸೇಡಂ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಬಾಲರಾಜ್ ಗೆ ಇದೀಗ ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕಿದ್ದು ಯುವಜನತೆಯಲ್ಲಿ ಹುರುಪು ತಂದಿದೆ.ಹೀಗಾಗಿ ಪಕ್ಷ ಸಂಘಟನೆ ಮಾಡಲು ನನಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಅಂತ ಬಾಲರಾಜ್ ಗುತ್ತೇದಾರ್ ತಿಳಿಸಿದ್ದಾರೆ…