ಬಾಗಲಕೋಟೆ:- ನಗರದ ಕೆನಾಲನಲ್ಲಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ಚಾಲಕನನ್ನು ಮಲ್ಲಪ್ಪ ಪರಮಾನಂದ ಜಕ್ಕನ್ನವರ ಎಂದು ಗುರುತಿಸಲಾಗಿದ್ದು ಮುಧೋಳ ತಾಲೂಕಿನ ಶಿರೋಳ ಗ್ರಾಮದವನಾಗಿದ್ದು ಸಿದ್ದಾಪುರು ಗ್ರಾಮದ ತಮ್ಮ ತೋಟಕ್ಕೆ ವ್ಯವಸಾಯ ಮಾಡಲು ತಮ್ಮ ಸ್ವಂತ ಟ್ರ್ಯಾಕ್ಟರ ಚಲಾಯಿಸಿ ಕೂಂಡು ಹೂಗುವ ಸಂಧರ್ಭದಲ್ಲಿ ಟ್ರ್ಯಾಕ್ಟರ್ ಕೆನಾಲನಲ್ಲಿ ಪಲ್ಟಿಯಾಗಿ ಚಾಲಕ ಮದ್ಯ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಜಮಖಂಡಿ ಗ್ರಾಮಿಣ ಪೋಲಿಸ ಠಾಣೆಯ ಪಿ.ಎಸ್.ಐ ಮಹೇಶ ಸಂಖ ಹಾಗೂ ಪೋಲಿಸ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಜಮಖಂಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲೆ ಮಾಡಲಾಗಿದೆ.
ಜಮಖಂಡಿ ಗ್ರಾಮಿಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕಾಶ ಕುಂಬಾರ
ಬಾಗಲಕೋಟೆ