ಬಾಗಲಕೋಟೆ:- ಪ್ರತಿ ವರ್ಷ ಕಡಿಪಾಡೆ ದಿನ ಜರುಗುಲಿರುವ ಎರಡು ನೂರು ವರ್ಷಗಳ ಇತಿಹಾಸವಿರುವ ಬಸವೇಶ್ವರ ರಥೋತ್ಸವವನ್ನು ಬರುವ ನವಂಬರ್ ಆರು ಮತ್ತು ಏಳು ರಂದು ಅತಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಗಟ್ಟಗಿ ಬಸವೇಶ್ವರ ದೇವಸ್ಥಾನದ
ಸಭಾಭವನದಲ್ಲಿ ಜರುಗಿದ.
ಪೂರ್ವಭಾವಿ ಸಭೆಯಲ್ಲಿ ತಿರಮಾ ನಿಸಲಾಯಿತು .ರಥೋತ್ಸವದ ಅಂಗವಾಗಿ ನವಂಬರ್ 3 ರಿಂದ ಮೂರು ದಿನಗಳ ಕಾಲ ಪ್ರತಿದಿನ ಸಾಯಂಕಾಲ 6 ಗಂಟೆಗೆ ರಬಕವಿ ಗುರುದೇವ ಬ್ರಹ್ಮಾನoದ ಆಶ್ರಮದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿಗಳಿಂದ ಪ್ರವಚನ ಮತ್ತು ದಾನಿಗಳಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಡಿಪಾದ್ಯದಿನ ದಿನಾಂಕ ಆರರಂದು ಪ್ರಾತಃಕಾಲ ಬಸವೇಶ್ವರ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಅಲಂಕೃತ ಪೂಜೆ ಮತ್ತು ಮುತ್ತೈದೆಯರಿಗೆ ಉಡಿತುಂಬು ಕಾರ್ಯಕ್ರಮ ಹಾಗೂ ಅನ್ನಪ್ರಸಾದ ಇಟ್ಟುಕೊಳ್ಳಲಾಗಿದೆ. ಸಾಯಂಕಾಲ 6:00 ರಿoದ ಕರಡಿ ಮಜಲು ವಿವಿಧ ಜನಪದ ವಾದ್ಯ ಹಾಗೂ ಡೊಳ್ಳು ಕುಣಿತ ಗೊಂಬೆಕುಣಿತ
ಗಳೊಂದಿಗೆ ರಥೋತ್ಸವ ಜರುಗಲಿದೆ.
ಹಾಗೂ ರಾತ್ರಿ 10 ಗಂಟೆಗೆ ನಾಡಿನ ಪ್ರಸಿದ್ಧ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ. ದಿನಾಂಕ7ರಂದು ಸಾಯಂಕಾಲ 6:00 ರಿoದ ಮರು ರಥೋತ್ಸವ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ದೇವಸ್ಥಾನದ ಟ್ರಸ್ಟ್ ಸಮಿತಿ ಅಧ್ಯಕ್ಷ ಬಸವರಾಜ ಎಂಡಿಗೇರಿ ತಿಳಿಸಿದ್ದಾರೆ.
ಪ್ರಕಾಶ ಕುಂಬಾರ
ಬಾಗಲಕೋಟೆ