ಬಾಗಲಕೋಟೆ: ಬಾಗಲಕೋಟ ಜಿಲ್ಲೆಯಲ್ಲಿ ಈ ಭಾರಿ ಬರಗಾಲ ಆವರಿಸಿದ್ದು ಹಿನ್ನಲೆ ಜೀವನ ನಡೆಸುವದು ಕಷ್ಟಕರವಾದ್ದರಿಂದ ಇಲ್ಲೊಬ್ಬರು ದಾನಿಗಳು ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ ವಿತರಣೆ ಮಾಡಲು ಮುಂದಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಸಿ ಕೆ ಚಿಂಚಲಿ ಶಾಲೆ ವತಿಯಿಂದ ಸರ್ಕಾರಿ ಶಾಲೆಗಳಿಗೆ 800 ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಬರುವ ಅನುದಾನವನ್ನು ಮಾತ್ರ ಸಾಲುತ್ತಿಲ್ಲ ಎಂದು, ಮಕ್ಕಳು ಸಂತೆ ಚೀಲವನ್ನು ಹಿಡಿದುಕೊಂಡು ಬರುವ ದೃಶ್ಯವನ್ನು ಕಂಡು ಮನಗೊಂಡ ಚಿಂಚಲಿ ಶಾಲೆಯ ಮುಖ್ಯಸ್ಥರು ಸರ್ಕಾರಿ ಶಾಲೆಗಳಿಗೆ ಬ್ಯಾಗ್ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಚಿಂಚಲಿ ಶಾಲೆ ಮಾಲೀಕರು ಶ್ರೀ ಸಿದ್ದು ಚಿಂಚಲಿ. ಮಹಾಂತೇಶ ಚಿಂಚಲಿ. ಶಾಲೆಯ ಮುಖ್ಯ ಗುರುಗಳು ಸುರೇಶರೆಡ್ಡಿ ಗೊರಭಾಳ. ಲಕ್ಷ್ಮಿಕಾಂತ ಮೊಖಾಶಿ. ಎಸ್ ಡಿ ಎಮ್ ಸಿ ಅಧ್ಯಕ್ಷ ಮುತ್ತಪ್ಪ ಹನಗಂಡಿ. ಶಾಲೆ ಮುಖ್ಯ ಗುರುಗಳು ಚವ್ವಾಣ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ