RR ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಯಶ್ ದಯಾಳ್ ಕೆಟ್ಟ ಬೌಲಿಂಗ್ ಮಾಡುವ ಮೂಲಕ ದುಬಾರಿಯಾಗಿದ್ದಕ್ಕೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಉಗ್ರರೂಪ ತಾಳಿದ ಘಟನೆ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.
ಪ್ರಜ್ವಲ್ಗೆ ದೇವೇಗೌಡ ವಾರ್ನಿಂಗ್… ಕೂಡಲೇ ಪೊಲೀಸರಿಗೆ ಶರಣಾಗು ಎಂದ ಗೌಡ್ರು!
ಇಷ್ಟು ವರ್ಷ ಸಾಧ್ಯವಾಗದೆ ಇರುವುದು ಈ ಐಪಿಎಲ್ ಸೀಸನ್ನಲ್ಲಿ ಸಾಧ್ಯವಾಗಬಹುದು ಎಂದು ಒಂದು ಕ್ಷಣ ಎಲ್ಲರಿಗೂ ಅನಿಸಿತು. ಆದರೆ ಆರ್ಸಿಬಿ ಆಟಗಾರರು ಮತ್ತು ಕೋಟ್ಯಂತರ ಆರ್ಸಿಬಿ ಅಭಿಮಾನಿಗಳು ತಮ್ಮ ಮನದಲ್ಲಿ ಮೂಡಿಸಿಕೊಂಡಿದ್ದ ಕನಸುಗಳು ಕನಸಾಗಿಯೇ ಉಳಿದಿದೆ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಆರ್ಸಿಬಿ ಹೀನಾಯ ಸೋಲು ಕಂಡಿದೆ. ಇದೇ ವೇಳೆ ನಿರ್ಣಾಯಕ ಹಂತದಲ್ಲಿ ಆರ್ಸಿಬಿ ವೇಗಿ ಯಶ್ ದಯಾಳ್ ಕೆಟ್ಟ ಬೌಲಿಂಗ್ ಮಾಡುವ ಮೂಲಕ ದುಬಾರಿಯಾಗಿದ್ದಕ್ಕೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಉಗ್ರರೂಪ ತಾಳಿದ ಘಟನೆ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.
ವಾಸ್ತವವಾಗಿ ರಾಜಸ್ಥಾನದ ಇನಿಂಗ್ಸ್ನ 17 ನೇ ಓವರ್ ಬೌಲ್ ಮಾಡುವ ಜವಬ್ದಾರಿಯನ್ನು ಯಶ್ ದಯಾಲ್ ಅವರಿಗೆ ನೀಡಲಾಯಿತು. ಮೊದಲ ಎರಡು ಎಸೆತಗಳಲ್ಲಿ ಕೇವಲ 2 ರನ್ ನೀಡಿದ್ದ ಯಶ್ ದಯಾಳ್ ಮತ್ತೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಇದರ ನಂತರ ಅವರು ಎರಡು ಕೆಟ್ಟ ಎಸೆತಗಳನ್ನು ಎಸೆದರು, ಅದರಲ್ಲಿ ಶಿಮ್ರಾನ್ ಹೆಟ್ಮೆಯರ್ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಮೂರನೇ ಎಸೆತದಲ್ಲಿ ಫುಲ್ ಟಾಸ್ ಬೌಲ್ ಮಾಡಿದ ದಯಾಳ್ ಮುಂದಿನ ಎಸೆತವನ್ನು ಆಫ್ ಸ್ಟಂಪ್ ಹೊರಗೆ ಬೌಲ್ ಮಾಡಿದರು. ಈ ಎರಡು ಕೆಟ್ಟ ಎಸೆತಗಳಲ್ಲಿ 8 ರನ್ ಬಂದವು.
ನಿರ್ಣಾಯಕ ಹಂತದಲ್ಲಿ ಕೆಟ್ಟ ಬೌಲಿಂಗ್ ಮಾಡಿದ ಯಶ್ ದಯಾಳ್ರನ್ನು ನೋಡಿ ಇನ್ನಿಲ್ಲದಂತೆ ಕೋಪ ಹೊರಹಾಕಿದ್ದಾರೆ. ಇಲ್ಲಿಗೆ ನಿಲ್ಲದ ಕೊಹ್ಲಿ, ಎನರ್ಜಿ ಡ್ರಿಂಕ್ ಕುಡಿದು ಬಾಟಲಿಯನ್ನು ಬೌಂಡರಿ ಲೈನ್ ಮೇಲೆ ಎಸೆದರು.
![](https://ainlivenews.com/wp-content/uploads/2024/01/Ad-Banner-copy-scaled.jpg)