ಬೆಂಗಳೂರು:- ಕರ್ನಾಟಕ ವಿಧಾನಪರಿಷತ್ ನ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಫೆಬ್ರವರಿ 14ರ ಸಂಜೆ 5ರಿಂದ 16ರ ಮಧ್ಯರಾತ್ರಿ 12 ಗಂಟೆವರೆಗೂ ಹಾಗೂ, ಫೆಬ್ರವರಿ 20ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ ಮಧ್ಯ ನಿಷೇಧ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಪೊಲೀಸ್ ಆಯುಕ್ತರ ಆದೇಶದ ವಿರುದ್ಧ ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘ ಅಸಮಾಧಾನ ಹೊರ ಹಾಕಿದೆ. ನಾಲ್ಕು ದಿನ ಉದ್ಯಮ ಮುಚ್ಚಿದ್ದರೆ ಸುಮಾರು 450 ಕೋಟಿ ರೂಪಾಯಿ ಲಾಸ್ ಆಗಲಿದೆ. 14ರಂದು ಪ್ರೇಮಿಗಳ ದಿನ ಹಿನ್ನೆಲೆ ಈಗಾಗಲೇ ಸಕಲ ತಯಾರಿ ನಡೆದಿದೆ. ಕಾರ್ಮಿಕರ ಸಂಬಳ, ಕಟ್ಟಡ ಬಾಡಿಗೆ ಮುಂತಾದ ಖರ್ಚು ವೆಚ್ಚ ಸರಿದೂಗಿಸಲು ಕಷ್ಟವಾಗಲಿದೆ. ಅಂದಾಜು ಕೇವಲ 16 ಸಾವಿರ ಮತ ಚಲಾವಣೆ ಆಗುವ ಒಂದು ಕ್ಷೇತ್ರಕ್ಕೆ ನಾಲ್ಕು ದಿನ ಉದ್ಯಮ ಸ್ಥಗಿತ ಆದರೆ ಹೇಗೆ..? ಎಂದು ಪ್ರಶ್ನಿಸಿದ್ದಾರೆ.
ಹೀಗಾಗಿ ಆದೇಶ ಪುನರ್ ಪರಿಶೀಲನೆ ಮಾಡುವಂತೆ ಪೊಲೀಸ್ ಆಯುಕ್ತರಿಗೆ ಹೋಟೆಲ್ ಗಳ ಸಂಘ ಪತ್ರ ಬರೆದಿದೆ.