ವಿಜಯನಗರ:- ಹಂಪಿ ಉತ್ಸವದ ನಿಮಿತ್ತವಾಗಿ ತುಂಗಭದ್ರಾ ತಟದಲ್ಲಿ ತುಂಗಭದ್ರಾ ಆರತಿ ಜರುಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಹಂಪಿಯಲ್ಲಿ ತುಂಗಭದ್ರಾ ನದಿಯ ದಡದಲ್ಲಿ ತುಂಗಭದ್ರಾ ಆರತಿ ನಡೆದಿದೆ.
ಹಂಪಿ ಉತ್ಸವದ ನಿಮಿತ್ತ ತುಂಗಭದ್ರಾ ಆರತಿ ಆಯೋಜನೆ ಮಾಡಲಾಗಿದೆ. ಶ್ರೀ ವಿರೂಪಾಕ್ಷ ದೇಗುಲದಿಂದ ಭುವನೇಶ್ವರ ದೇವಿಯ ಮೆರವಣಿಗೆ ನಡೆದಿದೆ.
ತುಂಗಾರಾತಿ ವೇಳೆಯಲ್ಲಿ ತಾಯಿ ಭುವನೇಶ್ವರ ದೇವಿಯ ಪೂಜೆ ಕೈಂಕಾರ್ಯಗಳು ಜರುಗಿದ್ದು, ತಂಗಾರತಿ ವೇಳೆ ಹಂಪಿಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳಿಂದ ಮೆರವಣಿಗೆ ನಡೆದಿದೆ. ತುಂಗಭದ್ರಾ ಆರತಿಯ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ತುಂಗಭದ್ರಾ ಆರತಿಯ ವೇಳೆ ವಿದೇಶಿ ಪ್ರವಾಸಿಗರು ಕುಣಿದು ಕುಪ್ಪಳಿಸಿದ್ದಾರೆ.
ವಿಜಯನಗರ ಕ್ಷೇತ್ರದ ಶಾಸಕ ಎಚ್.ಆರ್. ಗವಿಯಪ್ಪ, ಡಿಸಿ ದಿವಾಕರ್, ಎಸ್ಪಿ ಶ್ರೀಹರಿಬಾಬು ಬಿ.ಎಲ್, ಸಿಇಓ ಸದಾಶಿವ ಪ್ರಭು ತುಂಗಭದ್ರಾ ಆರತಿಯಲ್ಲಿ ಭಾಗಿಯಾಗಿದ್ದರು.