ಹೊಸಕೋಟೆ, ಇತಿಹಾಸ ಪ್ರಸಿದ್ದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ದಲ್ಲಿ ಕರುಣೆಯ ಗೋಡೆ ಹಾಗೂ ಚೇತನ್ ಗೆಳೆಯರ ಬಳಗದ ವತಿಯಿಂದ ಅನ್ನಸಂತರ್ಪಣೆ ಹಾಗೂ ಪಾನಕ, ಮಜ್ಜಿಗೆ ವಿತರಣೆ ಮಾಡಲಾಯಿತು.ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಪ್ರತೀ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ದ ದಿನದಂದು ಸಾವಿರಾರು ಜನರಿಗೆ ಹೊಸಕೋಟೆ ತಾಲ್ಲೂಕು ಕಚೇರಿ ಮುಂಭಾಗ ಅನ್ನಸಂತರ್ಪಣೆ ಹಾಗೂ ಮಜ್ಜಿಗೆ ಪಾನಕ ವಿತರಣೆ ಮಾಡುತ್ತಾ ಬಂದಿದ್ದಾರೆ
ಹರ್ಯಾಣದಲ್ಲಿ ಅಪಘಾತ.. ಮಿನಿ ಬಸ್ಗೆ ಲಾರಿ ಡಿಕ್ಕಿ, 7 ಮಂದಿ ಸಾವು, 25 ಜನ ಗಂಭೀರ!
ಇನ್ನೂ 11. 30 ಕ್ಕೆ ಶುರುವಾದ ರಥೋತ್ಸವ ಸಂಜೆವರೆಗೂ ಹೊಸಕೋಟೆ ನಗರದ ಪ್ರಮುಖ ಬೀದಿಗಳಲ್ಲಿ ನಾಲ್ಕು ಕಿಲೂ ಮೀಟರ್ಗೂ ಅಧಿಕ ದೂರ ಸಂಚರಿಸಿತು. ಜತೆಗೆ ದೂರದ ಊರುಗಳಿಂದೆಲ್ಲ ಸಾವಿರಾರು ಜನ ಭಕ್ತಾದೀಗಳು ಒಮ್ಮೆಲೆ ರಥೋತ್ಸವದಲ್ಲಿ ಬಂದು ಭಾಗವಹಿಸಿದ್ದ ಕಾರಣ ಇಂದು ಪಟ್ಟಣದ ಸಂಪೂರ್ಣ ಜನರಿಂದ ತುಂಬಿ ತುಳುಕುತ್ತಿತ್ತು. ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾಸ ಪಾಣಕ ಸೇವೆಯನ್ನ ಭಕ್ತರು ಮಾಡಿದ್ರು. ಅಲ್ಲದೆ ಜಾತ್ರೆಗೆ ಆಗಮಿಸಿದ ಭಕ್ತರು ರಥಕ್ಕೆ ದವಳ ಬಾಳೆಹಣ್ಣು ಹಾಕಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದ್ರು. ಬಂದಂತಹ ಭಕ್ತರಿಗೆ ಅನ್ನದಾನ, ಪಾಣಕ ಸೇರಿದಂತೆ ಹೆಸರು ಬೆಳೆ ನೀಡಲಾಯ್ತು. ಇನ್ನೂ ನಗರದ ತಾಲೂಕು ಕಛೇರಿ ವೃತ್ತವನ್ನ ಸಂಫೂರ್ಣವಾಗಿ ಜಾತ್ರೆಗಾಗಿ ಮೀಸಲಿಟ್ಟಿದ್ದ ಕಾರಣ ಅಂಗಡಿ ಮುಂಗಟ್ಟುಗಳು ಜಾತ್ರೆಯಲ್ಲಿ ತಲೆ ಎತ್ತಿದ್ದು ಯುವಕ ಯುವತಿಯರು ಸೇರಿದಂತೆ ಕುಟುಂಬಸ್ಥರೆಲ್ಲ ಜಾತ್ರೆಯಲ್ಲಿ ಭರ್ಜರಿ ರೌಂಡ್ ಹೊಡೆದು ಎಂಜಾಯ್ ಮಾಡಿದ್ರು.
ಒಟ್ಟಾರೇ ಸಿಲಿಕಾನ್ ಸಿಟಿ ಪಕ್ಕದ ಹೊಸಕೋಟೆಯಲ್ಲಿ ಇಂದು ಜಾತ್ರೆ ಸಂಭ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾದ್ರು. ಜೊತೆಗೆ ಭ್ರಹ್ಮರತೋತ್ಸವದಲ್ಲಿ ಪಾಲ್ಗೊಂಡು, ರಾತ್ರಿ ನಡೆಯಲಿರೋ ಕರಗ ಮಹೋತ್ಸವಕ್ಕೆ ಎಲ್ಲರೂ ಕಣ್ತುಂಬಿಕೊಳ್ಳಲು
ಕಾತುರದಿಂದ ಕಾಯುತ್ತಿರುವ ಹೊಸಕೋಟೆ ನಾಗರಿಕರು