ಬೆಂಗಳೂರು:- ಹೈಕಮಾಂಡ್ ನಾಯಕರನ್ನು DCM ಡಿಕೆಶಿ ಭೇಟಿ ಮಾಡಿರುವ ವಿಚಾರವಾಗಿ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/road-accident-a-fruit-trader-died-after-being-hit-by-a-lorry/ ಈ ಸಂಬಂಧ ಮಾತನಾಡಿದ ಅವರು, ಹೊಸ ವರ್ಷದ ಕಾರಣ ವಿಶ್ ಮಾಡಲು ಹೋಗಿದ್ದಾರೆ. ಹೈಕಮಾಂಡ್ ನಾಯಕರನ್ನು ಡಿಕೆಶಿ ಬೇಟಿ ಮಾಡುತ್ತಿದ್ದಾರೆ. ಸೋನಿಯಾ, ಖರ್ಗೆ,ರಾಹುಲ್ ಭೇಟಿ ಮಾಡುವುದು ಡಿಕೆಶಿ ಪದ್ದತಿ. ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರ ಭೇಟಿ ಮಾಡ್ತಾರೆ. ಮೂವತ್ತು ವರ್ಷಗಳಿಂದ ಇದನ್ನು ಡಿಕೆಶಿ ಪಾಲಿಸಿಕೊಂಡು ಬಂದಿದ್ದಾರೆ ಎಂದರು. ಇನ್ನೂ ಒನ್ ಮ್ಯಾನ್ ಒನ್ ಪೊಸ್ಟ್ ವಿಚಾರವಾಗಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಗೆ ಪಕ್ಷ ಕೊಟ್ಟಿರುವ ಹುದಗಳು. ಡಿ ಕೆ ಶಿವಕುಮಾರ್ ಏನು ಕಿತ್ತುಕೊಂಡಿಲ್ಲ. ಸೋನಿಯಾ ಗಾಂಧಿ, ಖರ್ಗೆ, ರಾಹುಲ್ ಗಾಂಧಿ ಹುದ್ದೆ ಕೊಟ್ಟಿದ್ದಾರೆ. ಹೈಕಮಾಂಡ್ ಬೇಡ ಅಂದ್ರೆ ಹುದ್ದೆ ಬಿಡಲು ರೆಡಿ ಇದ್ದಾರೆ. ಯಾವುದು ಶಾಸ್ವತವಾದ ಹುದ್ದೆಗಳೇನು ಅಲ್ಲ. ತೀರ್ಮಾನ ಹೈಕಮಾಂಡ್ ನಾಯಕರೆ ಮಾಡಬೇಕು. ಹೈಕಮಾಂಡ್ ನಾಯಕರನ್ನೇ ಪ್ರಶ್ನಿಸಿದಂತಾಗುತ್ತದೆ. ಮಾಧ್ಯಮಗಳ ಮುಂದೆ ಬೇಡಿಕೆ ಇಡುವುದು ಬೇಡ. ಹೈಕಮಾಂಡ್…
Author: AIN Author
ಮಾನ್ವಿ:- ವೇಗವಾಗಿ ಹಿಂಬದಿಯಿಂದ ಬಂದ ಲಾರಿಯೊಂದು ಹಣ್ಣಿನ ವ್ಯಾಪಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹೆಬೂಬ್ ಪಾಶ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಾನ್ವಿ ಪಟ್ಟಣದಲ್ಲಿ ಜರುಗಿದೆ. https://ainlivenews.com/plan-to-start-kaveri-aarti-at-krs-brindavan-agriculture-minister-inspected-the-place/ ಮಹೆಬೂಬ್ ಪಾಶ ಕಳೆದ ಹತ್ತಾರು ವರ್ಷದಿಂದ ತಳ್ಳುವ ಬಂಡಿಯಲ್ಲಿ ಹಣ್ಣಿನ ವ್ಯಾಪಾರಿ ಮಾಡುತ್ತಿದ್ದರು.ಮಹೆಬೂಬ್ ಪಾಶ ದುಡಿದು ತರುವ ಹಣದಲ್ಲಿಯೇ ಜೀವನ ನಡೆಯುತ್ತಿತ್ತು. ರಾಯಚೂರು ರಸ್ತೆಯಿಂದ ಮಾನ್ವಿ ಪಟ್ಟಣದ ಐಬಿ ವೃತ್ತದವರೆಗೂ ಬರುವ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮಾನ್ವಿ ಪಿಐ ವೀರಭದ್ರಯ್ಯ ಹಿರೇಮಠ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ. ಮಹೇಬೂಬ್ ಪಾಶ ವಯಸ್ಸು 50 ವರ್ಷ ಕೆಲಸ ಹಣ್ಣಿನ ವ್ಯಾಪಾರಿ ಊರು ಮಾನ್ವಿ ಹಣ್ಣಿನ ಪಂಡ್ಡಿ ತೆಗೆದುಕೊಂಡು ರೈಚೂರು ರಸ್ತೆಯಿಂದ ಬರುತ್ತಿರುವಾಗ ಲಾರಿ ವೇಗವಾಗಿ ಬೆನ್ನಿನ ಮೇಲೆ ಏರಿದ ಪರಿಣಾಮ ಸ್ಥಳದಲ್ಲೇ ಮೃತಾಪಟ್ಟಿದ್ದಾನೆ
ಮಂಡ್ಯ:- ಕಾವೇರಿ ಆರತಿಯನ್ನು ಕೆ.ಆರ್.ಎಸ್ ಬೃಂದಾವನದಲ್ಲಿ ಪ್ರಾರಂಭಿಸುವ ಸಂಬಂಧ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಸ್ಥಳ ಪರಿಶೀಲನೆ ನಡೆಸಿದರು. https://ainlivenews.com/dinner-politics-in-the-congress-the-high-command-broke-the-dinner-meeting-of-the-home-minister-tomorrow/ ಕಾವೇರಿ ಆರತಿ ಪ್ರಾರಂಭಿಸಲು ನೀಲಿ ನಕ್ಷೆ ಸಿದ್ಧಪಡಿಸಿ ನೀರಾವರಿ ಸಚಿವರಿಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಶಾಸಕ ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ,ಕಾನೀನಿನಿ ಅಧೀಕ್ಷಕ ಇಂಜಿನಿಯರ್ ರಘುರಾಂ, ಜಿಲ್ಲಾಧಿಕಾರಿ ಡಾ: ಕುಮಾರ ಎಸ್ ಪಿ.ಮಲ್ಲಿಕಾರ್ಜುನ ಬಾಲದಂಡಿ,ಸಿಇಒ ತನ್ವೀರ್ ಅಶಿಫ್ ಕಾವೇರಿ ನಿಗಮದ ಎಂ.ಡಿ. ಮಹೇಶ್ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು:- ಜನಾದೇಶದ ಮೂಲಕ 5 ವರ್ಷಗಳ ಅವಧಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. https://ainlivenews.com/siddaramaiah-here-is-your-khotti-guarantee-loot-sakshigudde/ ಇನ್ನೂ 135 ಸೀಟ್ಗಳನ್ನು ಗೆದ್ದು ಅಧಿಕಾರಕ್ಕೇರಿರೋ ಕಾಂಗ್ರೆಸ್ನಲ್ಲಿ ಡಿನ್ನರ್ ಪಾಲಿಟಿಕ್ಸ್ ಮತ್ತಷ್ಟು ತಾರಕಕ್ಕೇರಿದೆ. ಕಳೆದ ವಾರ ಸಚಿವ ಸತೀಶ್ ಜಾರಕಿಹೊಳಿ ಬೆಂಗಳೂರು ನಿವಾಸದಲ್ಲಿ ನಡೆದಿದ್ದ ಡಿನ್ನರ್ ಪಾರ್ಟಿಯ ಚರ್ಚೆ ಮತ್ತೊಂದು ಹಂತಕ್ಕೆ ತಲುಪಿದೆ. ವಿದೇಶದಿಂದ ದೆಹಲಿಗೆ ಬಂದಿಳಿದ ಡಿಸಿಎಂ ಡಿಕೆ ಶಿವಕುಮಾರ್, ಹೈಕಮಾಂಡ್ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. ಸಚಿವ ಪರಮೇಶ್ವರ್ ಕರೆದಿದ್ದ ಮತ್ತೊಂದು ಡಿನ್ನರ್ ಮೀಟಿಂಗ್ ರದ್ದಾಗಿದೆ. ಕರ್ನಾಟಕ ಕಾಂಗ್ರೆಸ್ನಲ್ಲಿ ಡಿನ್ನರ್ ಪಾಲಿಟಿಕ್ಸ್ ಸಂಚಲನಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿದೇಶ ಪ್ರವಾಸದಲ್ಲಿರುವಾಗಲೇ ಇತ್ತ ಸಿಎಂ ಸಿದ್ದರಾಮಯ್ಯ ಸೇರದಿಂತೆ ಇತರೆ ಸಚಿವರು ಡಿನ್ನರ್ ಸಭೆ ಮಾಡಿದ್ದು, ಡಿಕೆಶಿ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ವಿದೇಶದಿಂದ ವಾಪಸ್ ಬಂದ ಬಳಿಕ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಎಚ್ಚೆತ್ತ…
ಬೆಂಗಳೂರು:-ಸಚಿವ ಹೆಚ್ಡಿ ಕುಮಾರಸ್ವಾಮಿ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ 60 ಪರ್ಸೆಂಟ್ ಕಮಿಷನ್ ಆರೋಪ –ಪ್ರತ್ಯಾರೋಪ ಜೋರಾಗಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ಡಿ ಕುಮಾರಸ್ವಾಮಿ 60% ಕಮಿಷನ್ ಆರೋಪ ಮಾಡಿದ್ದರು. ಸುಮ್ಮನೆ ಆರೋಪ ಮಾಡುವುದಲ್ಲ, ದಾಖಲೆ ಕೊಡಿ ಅಂತ ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಸವಾಲು ಹಾಕಿದ್ದರು. https://ainlivenews.com/ramya-why-did-actress-ramya-suddenly-appear-in-the-court/ ಇದೀಗ 60% ಕಮಿಷನ್ ಆರೋಪಕ್ಕೆ ಗುತ್ತಿಗೆದಾರರ ಬಾಕಿ ಹಣದ ಪಟ್ಟಿಯನ್ನು ಮಾಜಿ ಸಿಎಂ HD ಕುಮಾರಸ್ವಾಮಿ ಅವರು, ರಿಲೀಸ್ ಮಾಡಿದರು. 60% ಕಮಿಷನ್ಗೆ ದಾಖಲೆ ಕೊಡಿ ಎಂದಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರಿಗೆ ತಿರುಗೇಟು ಕೊಟ್ಟಿರುವ ಕುಮಾರಸ್ವಾಮಿ, ಯಾವ ಯಾವ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ಹಣ ಬಾಕಿ ಇದೆ ಎಂದು ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ದಾಖಲೆ ಕೊಡಿ, ದಾಖಲೆ ಕೊಡಿ ಎನ್ನುತ್ತಿದ್ದೀರಿ ಇಲ್ನೋಡಿ ಸನ್ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ. ನಿಮ್ಮ ಸರ್ಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದೆ ಎನ್ನುವುದಕ್ಕೆ ಈ…
ಮೋಹಕ ತಾರೆ ರಮ್ಯಾ ಅವರು ಇಂದು ದಿಢೀರ್ ಕೋರ್ಟ್ ಗೆ ಹಾಜರಾಗಿದ್ದಾರೆ. https://ainlivenews.com/drink-this-fruit-juice-on-an-empty-stomach-to-make-your-hair-black/ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು. 1 ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಪ್ರಕರಣದ ವಿಚಾರಣೆಗೆ ಸಂಬಂಧ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್ಗೆ ರಮ್ಯಾ ಹಾಜರಾಗಿದ್ದಾರೆ. ಇನ್ನೂ 2024ರಲ್ಲಿ ರಿಲೀಸ್ ಆಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ವಿವಾದಕ್ಕೆ ಸಂಬಂಧಿಸಿದ ಕೇಸ್ ವಿಚಾರಣೆಗೆ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್ಗೆ ಇಂದು ನಟಿ ರಮ್ಯಾ ಹಾಜರಾಗಿ ವಿಚಾರಣೆಗೆ ಒಳಪಡಿಸಿದ್ದಾರೆ.
ಹೆಚ್ಚಿನವರು ಕೂದಲು ಉದುರುತ್ತೆ, ಬೆಳ್ಳಗಾಗುತ್ತೆ ಅಂತ ಸಾಕಷ್ಟು ಮನೆಮದ್ದು, ಹಾಸ್ಪಿಟಲ್ ಮದ್ದುಗಳನ್ನು ಬಳಸುತ್ತಾರೆ. ನೈಸರ್ಗಿಕವಾಗಿ ನೆಲ್ಲಿಕಾಯಿಯನ್ನು ಈ ಕೂದಲಿನ ಆರೈಕೆಗೆ ಬಳಸುತ್ತಾರೆ. ಇದರಲ್ಲಿ ವಿಟಮಿನ್ ಸಿ ತುಂಬಾನೇ ಸಮೃದ್ಧವಾಗಿದೆ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಇದು ಪ್ರಯೋಜನಕಾರಿಯಾಗಿದೆ. ಅದೇ ರೀತಿ ನಿಂಬೆ ರಸ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಕೂದಲಿನ ಹೊಳಪು ಮತ್ತು ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. https://ainlivenews.com/is-it-good-to-have-a-joint-eyebrow-is-it-bad-what-does-astrology-say/ ಆಮ್ಲಾ ಮತ್ತು ನಿಂಬೆ ರಸ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸುತ್ತವೆ. 2-3 ತಾಜಾ ನೆಲ್ಲಿಕಾಯಿ, ಒಂದು ನಿಂಬೆಹಣ್ಣು, 2 ಚಮಚ ತೆಂಗಿನ ಎಣ್ಣೆಯನ್ನು ಇಟ್ಟುಕೊಳ್ಳಿ. ಈಗ ತಾಜಾ ನೆಲ್ಲಿಕಾಯಿಯನ್ನು ಪುಡಿಮಾಡಿ ಮತ್ತು ಅವುಗಳನ್ನು ಪೇಸ್ಟ್ ಮಾಡಿ. ತಾಜಾ ನೆಲ್ಲಿಕಾಯಿ ಲಭ್ಯವಿಲ್ಲದಿದ್ದರೆ, ಒಣ ನೆಲ್ಲಿಕಾಯಿ ಪುಡಿಯನ್ನು ಸಹ ಬಳಸಬಹುದು. ಈ ಪೇಸ್ಟ್ಗೆ ಒಂದು ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣಕ್ಕೆ 2 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಬಹುದು. ಇದು ಕೂದಲಿಗೆ ಹೆಚ್ಚುವರಿ ಪೋಷಣೆಯನ್ನು ನೀಡುತ್ತದೆ. ಬೇರುಗಳಿಂದ ಕೂದಲಿನ ತುದಿಯವರೆಗೆ ಸಂಪೂರ್ಣವಾಗಿ…
ಹುಬ್ಬುಗಳಿಂದಲೇ ಒಬ್ಬ ವ್ಯಕ್ತಿ ಸುಂದರವಾಗಿ ಕಾಣುತ್ತಾರೆ. ಇನ್ನು ಕೆಲವೊಬ್ಬರ ಉಬ್ಬುಗಳು ಜಾಯಿಂಟ್ ಆಗಿರುತ್ತದೆ. ಈ ರೀತಿಯ ಹುಬ್ಬುಗಳನ್ನು ಯುನಿಬ್ರೋ ಎಂದೂ ಕರೆಯುತ್ತಾರೆ. ದಪ್ಪ, ಕಪ್ಪು ಮತ್ತು ಉದ್ದನೆಯ ಹುಬ್ಬುಗಳನ್ನು ಸೌಂದರ್ಯದ ಸಂಕೇತ ಎಂದೂ ಕರೆಯುತ್ತಾರೆ. https://ainlivenews.com/dharwad-abvp-protests-against-increase-in-bus-fares/ ಇನ್ನು ಈ ಹುಬ್ಬುಗಳ ಜಾಯಿಂಟ್ ಆಗೋದ್ರಿಂದ ಕೆಲವರ ವ್ಯಕ್ತಿತ್ವವನ್ನೂ ತಿಳಿಯಬಹುದು. ಕೆಲವರು ಈ ಹುಬ್ಬುಗಳಿಂದಲೂ ಶುಭ, ಅಶುಭಗಳನ್ನೂ ಪರಿಗಣಿಸುತ್ತಾರೆ. ಹುಬ್ಬುಗಳು ಜಾಯಿಂಟ್ ಆಗಿದ್ದರೆ ನಿಮ್ಮ ವ್ಯಕ್ತಿತ್ವ ಏನೆಂದು ತಿಳಿಯಬಹುದು. ಹಾಗಿದ್ರೆ ಜಾಯಿಂಟ್ ಹುಬ್ಬು ಹೊಂದಿರುವವ ವ್ಯಕ್ತಿತ್ವ ಹೇಗಿರುತ್ತದೆ? ಅವರ ಸ್ಪೆಷಾಲಿಟಿ ಏನು? ಸಮಸ್ಯೆಗಳೇನು? ಎಂಬುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ. ಹುಬ್ಬಿನ ಆಕಾರ ನೋಡಿಯೂ ನಮ್ಮ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ. ಬಹಳಷ್ಟು ಜನರಿಗೆ ಹುಬ್ಬುಗಳು ಒಂದಾಗಿರುತ್ತವೆ. ಕೆಲವರಿಗೆ ಮಾತ್ರ ಇವು ಬೇರೆ ಬೇರೆಯಾಗಿರುತ್ತವೆ. ಹುಬ್ಬುಗಳು ಒಂದಾದರೆ ಏನಾಗುತ್ತದೆ? ಇದರ ಆಧಾರದ ಮೇಲೆ ಒಬ್ಬ ವ್ಯಕ್ತಿ ಹೇಗಿರುತ್ತಾನೆ ಎಂದು ಜ್ಯೋತಿಷ್ಯ ತಿಳಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಒಂದಾದ ಹುಬ್ಬುಗಳು ಒಬ್ಬೊಬ್ಬರಿಗೆ…
ಅನ್ನವನ್ನು ಅತಿಯಾಗಿ ಪ್ರೀತಿಸುವ ದೇಶವೊಂದಿದ್ದರೆ, ಅದು ನಮ್ಮ ಭಾರತ. ಇಲ್ಲಿ ಎರಡು ಹೊತ್ತು ಕೂಡ ಅನ್ನ ಊಟ ಮಾಡಿ, ಆರೋಗ್ಯಕಾರಿ ಜೀವನ ನಡೆಸುತ್ತಿರುವ ಜನರು, ನಮ್ಮ ಕಣ್ಣ-ಮುಂದೆಯೇ ಇದ್ದಾರೆ. https://ainlivenews.com/cabinet-meeting-at-male-mahadeshwar-hill-on-feb-15-minister-k-venkatesh/ ದೇಶದ ಮೂಲೆ ಮೂಲೆಗಳಲ್ಲಿಯೂ ಕೂಡ ಅಂದರೆ ದಕ್ಷಿಣ, ಉತ್ತರ ಮತ್ತು ಪಶ್ಚಿಮ ಭಾಗದ ಜನರು ತಮ್ಮ ದಿನನಿತ್ಯದ ಆಹಾರದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅನ್ನದ ಬಳಕೆ ಮಾಡಿ ಕೊಂಡು ಬರುತ್ತಿರುವರು. ದೈಹಿಕ ಬೆಳವಣಿಗೆಗೆ ಹಾಗೂ ದೇಹಕ್ಕೆ ತಕ್ಷಣ ಶಕ್ತಿ ಒದಗಿಸುವಲ್ಲಿ ಅನ್ನದ ಮಹತ್ವ ಮರೆಯುವ ಹಾಗಿಲ್ಲ. ಹೀಗಾಗಿ ಮನುಷ್ಯನ ದೇಹದ ಆರೋಗ್ಯಕರ ಅಭಿವೃದ್ಧಿ ಯಲ್ಲಿ ಅನ್ನಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ದಿನದಲ್ಲಿ ಎರಡು ಹೊತ್ತು ಅನ್ನ ತಿಂದ್ರೆ ಏನೆಲ್ಲಾ ಸಮಸ್ಯೆಗಳಾಗಬಹುದು ಎಂದು ತಿಳಿಯೋಣ ಬನ್ನಿ. ಅನೇಕ ಮಂದಿ ಅನ್ನ ಎಂದರೆ ಇಷ್ಟ. ಆದರೆ ಇದನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಉದ್ದೇಶದಿಂದ ಅನ್ನವನ್ನು ತ್ಯಜಿಸುತ್ತಾರೆ. ವಾಸ್ತವವಾಗಿ ಅನ್ನವನ್ನು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಿದರೆ ದೇಹಕ್ಕೆ…
ತುಮಕೂರು:- ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಯುವಕನೋರ್ವ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಘಟನೆ ಜರುಗಿದೆ. https://ainlivenews.com/man-wanders-into-office-to-prove-im-alive-and-not-dead/ ಇಂದು ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಸಕಲ ಸಲಕರಣೆಗಳೊಂದಿಗೆ ಬಂದಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗದೇ ಕೈಚೆಲ್ಲಿ ಕುಳಿತರು. ಈ ವೇಳೆ ಗ್ರಾಮದ ಆನಂದ್ ಎಂಬವರು ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ್ದಾರೆ. 5 ವರ್ಷದ ಚಿರತೆಯನ್ನು ಯುವಕ ಸೆರೆಹಿಡಿದಿದ್ದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ.