ಬೆಂಗಳೂರು:- ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕವಡೆ ಕಾಸಿನ ಬೆಲೆ ಇಲ್ಲ ಎಂದು ಎನ್.ರವಿಕುಮಾರ್ ಹೇಳಿದ್ದಾರೆ. https://ainlivenews.com/ask-here-people-how-to-avoid-bp-in-the-summer/ ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಭದ್ರಾವತಿಯಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳಾ ಅಧಿಕಾರಿ ಜ್ಯೋತಿಯವರಿಗೆ ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ್ ಎಂಬವರು ಅತ್ಯಂತ ಕೆಳಮಟ್ಟದ ಭಾಷೆ ಉಪಯೋಗಿಸಿ ಬೈದಿದ್ದಾರೆ. ಆ ಭಾಷೆ ಉಪಯೋಗಿಸಲು ನನಗೂ ನಾಚಿಕೆ ಆಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯನವರು ಬಸವೇಶ್ ಅವರನ್ನು ಬಂಧಿಸಲು ಸೂಚಿಸಿ ಕಠಿಣ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಬೇಕು. ಇದುವರೆಗೆ ಯಾಕೆ ಅವರನ್ನು ಬಂಧಿಸಿಲ್ಲ? ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ? ಮಹಿಳೆಯರಿಗೆ ಹೇಗೆ ಬೇಕೋ ಹಾಗೆ ಬೈಯ್ಯುವುದೇ? ರಾಜ್ಯದಲ್ಲಿ ಏನು ನಡೆಯುತ್ತಿದೆ. ಸಿದ್ದರಾಮಯ್ಯರಂಥ ಒಬ್ಬ ಸಮರ್ಥ ಮುಖ್ಯಮಂತ್ರಿ ರಾಜ್ಯದಲ್ಲಿ ಇದ್ದರೂ ಕೂಡ ಹೀಗಾಗುತ್ತಿದೆ. ಎರಡನೇ ಬಾರಿ ಸಿಎಂ ಆದ ಬಳಿಕ ಅವರು ಸಂಪೂರ್ಣ ವಿಫಲವಾಗಿದ್ದಾರೆ…
Author: AIN Author
ಅಧಿಕ ರಕ್ತದೊತ್ತಡ ಹೃದ್ರೋಗದ ಅಪಾಯವನ್ನು ತಂದೊಡ್ಡಬಹುದು. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅಥವಾ ನಿಭಾಯಿಸಲು ವೈದ್ಯರು ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ. ಮೂಲಗಳ ಪ್ರಕಾರ, ಪ್ರಪಂಚದಾದ್ಯಂತ 1 ಶತಕೋಟಿಗೂ ಅಧಿಕ ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೊಂದಿದ್ದಾರೆ. https://ainlivenews.com/is-it-true-that-yatnal-received-a-show-cause-notice-did-vijayendra-form-the-rebel-team/ ಸಾಮಾನ್ಯವಾಗಿ 120/80 ರಕ್ತದೊತ್ತಡವನ್ನು ನಾರ್ಮಲ್ ಎಂದು ಪರಿಗಣಿಸಲಾಗುತ್ತದೆ. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ರಕ್ತದೊತ್ತಡದ ಸಮಸ್ಯೆಯನ್ನು ನೀವು ಹೊಂದಿರುತ್ತೀರಿ. ವೈದ್ಯರು ನೀಡುವ ಔಷಧಿಗಳ ಜೊತೆಗೆ ನೈಸರ್ಗಿಕವಾಗಿ ಬಿಪಿ ಕಡಿಮೆ ಮಾಡುವ ಆರೋಗ್ಯಕರ ಆಹಾರವನ್ನು ಸೇವಿಸಲು ಪ್ರಯತ್ನಿಸಿ. ಬಿಪಿಯಿಂದ ಬಳಲುತ್ತಿರುವವರು ವೈದ್ಯರು ಸೂಚಿಸಿರುವ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ, ಇವುಗಳ ಜೊತೆಗೆ ಆಹಾರ ಪದ್ಧತಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಅವಶ್ಯಕ. ಅಧಿಕ ರಕ್ತದೊತ್ತಡವು ಒಟ್ಟಾರೆ ಆರೋಗ್ಯದ ಮೇಲೆ, ವಿಶೇಷವಾಗಿ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ ಇದಲ್ಲದೇ, ಇದು ತಲೆನೋವು, ತಲೆ ತಿರುಗುವಿಕೆ ಮತ್ತು ದೃಷ್ಟಿಹೀನತೆಯಂತಹ ಸಮಸ್ಯೆಗಳನ್ನು ಸಹ ಉಂಟು ಮಾಡಬಹುದು. ಕೆಲವೊಮ್ಮೆ ಮೂಗಿನಲ್ಲಿ ರಕ್ತಸ್ರಾವವಾಗುವುದು ಸಹ ಅಧಿಕ ರಕ್ತದೊತ್ತಡದಿಂದ ಉಂಟಾಗಬಹುದು. ಆದ್ದರಿಂದ, ರಕ್ತದೊತ್ತಡವನ್ನು ಯಾವಾಗಲೂ…
ಬೆಂಗಳೂರು:- ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಸಮರ ಸಾರಿರೋ ಶಾಸಕ ಬಸನಗೌಡ ಯತ್ನಾಳ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.. ವಿಜಯೇಂದ್ರರನ್ನ ಕೆಳಗಿಳಿಸೋಕೆ ಅಂತಾ ತಂಡ ಕಟ್ಕೊಂಡು ದೆಹಲಿಗೆ ಹೋಗಿದ್ದ ಯತ್ನಾಳ್ ವಾಪಸ್ ಬರ್ತಾ ವಿಜಯದ ಹಾರ ಕೈಯಲ್ಲಿ ಇಡ್ಕೊಂಡು ಬಂದಿದ್ದೀವಿ ಅಂದ್ರಿದ್ರು.. ಆದ್ರೆ ವಿಜಯದ ಮಾಲೆ ಅಂದ ಯತ್ನಾಳ್ ಕೈ ಸೇರಿದೆ ಶೋಕಾಸ್ ನೋಟಿಸ್.. ಇದಕ್ಕೆ ಯತ್ನಾಳ್ ಸಹ ಖಡಕ್ ಆಗೇ ತಿರುಗೇಟು ಕೊಟ್ಟಿದ್ದಾರೆ. ಹಾಗಿದ್ರೆ ಯತ್ನಾಳ್ ಶೋಕಾಸ್ ನೋಟಿಸ್ ಬಂದಿದ್ದು ನಿಜಾನ.. ಅವರ ಉತ್ತರ ಹೀಗಿದೆ. https://ainlivenews.com/suggestions-are-being-sought-from-citizens-for-the-comprehensive-development-of-bengaluru/ ಹೌದು ಹೋಧಲ್ಲಿ ಬಂದಲ್ಲಿ ಮಾಜಿ, ಸಿಎಂ ಬಿಎಸ್ವೈ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ ಯತ್ನಾಳ್… ಅದು ಅಲ್ದೇ ಕುಟುಂಬ ರಾಜಕಾರಣ ವಿರುದ್ದದ ಹೋರಾಟ ಅಂತಾ ವಿಜಯೆಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸೋಕೆ ಅಂತಲೂ ಶತ ಪ್ರಯತ್ನಗಳ ಮಾಡ್ತಿದ್ದಾರೆ. ರಮೇಶ್ ಜಾರಕಿಹೊಳಿ, ಕುಮಾರಬಂಗಾಋರಪ್ಪ ಸೇರಿದಂತೆ ಕೆಲ ರೆಬಲ್ ಶಾಸಕರ ಜೊತೆಗೆ ಸೇರಿಸ್ಕೊಂಡು ದೆಹಲಿಗೂ…
ಬೆಂಗಳೂರು: ಫೆ. 11: ಬೆಂಗಳೂರಿನ ಹಿತದೃಷ್ಟಿಯನ್ನು ಕಾಯುವ ನಾಗರಿಕರಿಂದ ಸಲಹೆಗಳನ್ನು ಪಡೆದು, ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದೆಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಿಜ್ವಾನ್ ಹರ್ಷದ್ ರವರು ತಿಳಿಸಿದರು. https://ainlivenews.com/this-is-a-leafy-green-easy-to-eat-with-sugar-control/ ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ, ಬೊಮ್ಮನಹಳ್ಳಿ ವಲಯಗಳು ಸೇರಿ ಆರ್.ವಿ ಡೆಂಟಲ್ ಕಾಲೇಜು ಹಾಗೂ ರಾಜರಾಜೇಶ್ವರಿ ನಗರ, ಪಶ್ಚಿಮ ವಲಯಗಳು ಸೇರಿ ಜ್ಞಾನಭಾರತಿ ಕ್ಯಾಂಪಸ್ ನ ಡಾ. ನರಸಿಂಹಯ್ಯ ಸಭಾಂಗಣದಲ್ಲಿ ಇಂದು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ನಗರದಲ್ಲಿ ಸದ್ಯ ಇರುವ ಯಾವುದೇ ಕಾನೂನು, ಕಾಯ್ದೆಗಳಿಗೆ ಬೆಲೆ ಕೊಡುವವರಿಲ್ಲ. ಆದ್ದರಿಂದ ಉತ್ತ ಆಡಳಿತ ನಡೆಸಲುವಾಗಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಜಾರಿ ತರಲಾಗುತ್ತಿದೆ. ಜನರಿಗೆ ಯಾವ ಸೌಲಭ್ಯಗಳನ್ನು ನೀಡಬೇಕು, ಯಾವ ರೀತಿ ಆಡಳಿತವನ್ನು ನಡೆಸಬೇಕು ಎಂಬುದರ ಕುರಿತು ಹಲವಾರು ಆಯಾಮಗಳಲ್ಲಿ ಅಧ್ಯಯನ ನಡೆಸಿ ಅದನ್ನು ಜಾರಿಗೆ ತರಲು ಮುಂದಾಗಲಾಗುತ್ತಿದೆ ಎಂದು…
ಸಾಮಾನ್ಯವಾಗಿ ಜನ ಮಾತನಾಡುವಾಗ ಶುಗರ್ ಇದೆ ಅಂದಾಕ್ಷಣ ಅನ್ನ ಬಿಟ್ಟು ಬಿಡಿ. ಮುದ್ದೆ ತಿನ್ನಿ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಅಂತ ಹೇಳುವುದನ್ನು ಕೇಳಿರುತ್ತೀರಿ. https://ainlivenews.com/special-priority-to-agriculture-sector-n-chaluvarayaswamy/ ಮಧುಮೇಹ ಇರುವವರಿಗೆ ಅಕ್ಕಿ ಒಳ್ಳೇಯದಾ, ಗೋಧಿ ಒಳ್ಳೇಯದಾ, ರಾಗಿ ತಿನ್ನಬಹುದಾ? ಯಾಕಂದ್ರೆ ಮಧುಮೇಹ ಬಂದ ಬಹುತೇಕ ಮಂದಿ ಅನ್ನ ಬಿಟ್ಟು, ಚಪಾತಿ ಅಥವಾ ರಾಗಿ ಮುದ್ದೆ ತಿನ್ನಲು ಆರಂಭಿಸುತ್ತಾರೆ. ಅಕ್ಕಿ, ರಾಗಿ, ಗೋಧಿ, ಜೋಳ, ಸಿರಿಧಾನ್ಯಗಳು ಎಲ್ಲವೂ ಕಾರ್ಬೋಹೈಡ್ರೇಟ್ಗಳೇ. ಅಂದರೆ ಇವುಗಳನ್ನು ಅತಿಯಾಗಿ ಸೇವಿಸಿದರೆ ಮಧುಮೇಹ ಹೆಚ್ಚಳವಾಗುವುದರಲ್ಲಿ ಎರಡು ಮಾತಿಲ್ಲ. ಮಧುಮೇಹ ನಿಯಂತ್ರಣಕ್ಕೆ ನಾವು ಯಾವುದೇ ರೀತಿಯ ಔಷಧಿ ತೆಗೆದುಕೊಂಡರೂ, ಇದರಿಂದ ಉತ್ತಮ ಫಲಿತಾಂಶ ಸಿಗುತ್ತಿಲ್ಲ ಎಂದು ಅನೇಕ ಮಂದಿ ದೂರುತ್ತಾರೆ. ಹೌದು, ಮಧುಮೇಹಕ್ಕೆ ಔಷಧಿ ತೆಗೆದುಕೊಳ್ಳುವುದರಿಂದ ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣವೇ ನಿಯಂತ್ರಿಸಬಹುದು, ಆದರೆ ಸೂಕ್ತವಾದ ಆಹಾರ ಕ್ರಮ ಅನುಸರಿಸದಿದ್ದರೆ ಅಥವಾ ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳದಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಆಗುತ್ತಲೇ ಇರುತ್ತದೆ. ಆದರೆ ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸಲು…
ಚಿತ್ರದುರ್ಗ ಫೆ, 11..ನಮ್ಮದು ಸದಾ ರೈತ ಪರ, ಜನ ಪರ ಸರ್ಕಾರವಾಗಿದ್ದು ಮುಂದೆಯೂ ಕೃಷಿ ಕ್ಷೇತ್ರದ ಶ್ರೇಯೋಭಿವೃದ್ದಿಗೆ ವಿಶೇಷ ಆದ್ಯತೆ ನೀಡಲಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು. https://ainlivenews.com/good-news-for-virat-fans-kohli-is-the-captain-of-rcb-team/ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ರೇಣುಕಾಪುರ ಗ್ರಾಮದಲ್ಲಿ ಜಲಾನಯನ ಇಲಾಖೆ ವತಿಯಿಂದ ಮಳೆ ಆಶ್ರಿತ ಪ್ರದೇಶದಲ್ಲಿ ಆದಾಯೋತ್ಪನ್ನ ಮಾರ್ಗಗಳ ಮೂಲಕ ಕೃಷಿ ಸಂಬಂಧಿತ ವಲಯಗಳ ಅಭಿವೃದ್ಧಿ ಮತ್ತು ಪುನಶ್ಚೇತನಗೊಳಿಸುವ ಯೋಜನಯ ಫಲಶೃತಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು. ಸರ್ಕಾರದ ಯೋಜನೆ ಪರಿಣಾಕಾರಿ ಅನುಷ್ಠಾನ ವಾದರೆ ಗ್ರಾಮದ ಅಭಿವೃದ್ದಿಯ ಚಿತ್ರಣ ಹೇಗೆ ಬದಲಾಗಬಹುದು ಎಂಬುದಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮ ಉದಾಹರಣೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದುರ್ಗ ಅತ್ಯಂತ ಕಡಿಮೆ ಮಳೆ ಬೀಳುವ ಜಿಲ್ಲೆಯಾಗಿದೆ ಹಾಗಾಗಿ ಜಲಾನಯನ ಇಲಾಖೆಯ RAD – RFTRAAR ಯೋಜನೆಯ ಮೂಲಕ ಜಿಲ್ಲೆಗೆ 5 ಕೋಟಿ ರೂ ಅನುದಾನ ನೀಡಲಾಗಿದೆ.60 ಗ್ರಾಮಗಳಲ್ಲಿ ಇದು ಅನುಷ್ಠಾನವಾಗುತ್ತಿದೆ ಕೃಷಿ ಸಚಿವರು ಹೇಳಿದರು. ಪ್ರತಿ…
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪ್ರಸಕ್ತ ಸಾಲಿನಲ್ಲಿ ನಡೆಯುವ IPL 2025ರ ಪ್ರೀಮಿಯರ್ ಲೀಗ್ ನಲ್ಲಿ RCB ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಹೆಸರು ಫೈನಲ್ ಆಗಿದೆ ಎಂದು ತಿಳಿದು ಬಂದಿದೆ. ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಸುರೇಶ್ ರೈನಾ ಕಾಮೆಂಟರಿ ಬಾಕ್ಸ್ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಮಾತುಕತೆ ನಡೆಸುತ್ತಿರುವುದನ್ನು ವರ್ಣಿಸುತ್ತಾ ರೈನಾ, ಇಂಗ್ಲೆಂಡ್ ಆಟಗಾರ ಆರ್ಸಿಬಿ ತಂಡದ ನಾಯಕನೊಂದಿಗೆ ಕುಶಲೋಪರಿ ನಡೆಸುತ್ತಿದ್ದಾರೆ ಎಂದಿದ್ದಾರೆ. https://ainlivenews.com/you-are-not-allowing-the-people-of-the-state-to-live-peacefully-because-of-your-flattery-narayanaswamy-a-traitor-lashes-out-at-the-government/ ಇತ್ತ ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಅವರಿಗೆ ಆರ್ಸಿಬಿ ತಂಡದ ಮುಂದಿನ ನಾಯಕ ಯಾರೆಂಬುದು ಗೊತ್ತಿದೆ. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಎಂದು ಸುರೇಶ್ ರೈನಾ ಬಹಿರಂಗವಾಗಿ ಹೇಳಿದ್ದಾರೆ. ರೈನಾ ನೀಡಿರುವ ಸುಳಿವಿನಂತೆ ಐಪಿಎಲ್ 2025 ರಲ್ಲಿ…
ಕಲಬುರ್ಗಿ: ಕೂಲಿ ಕೆಲಸದ ವಿಚಾರದಲ್ಲಿ ನಡೆದ ಗಲಾಟೆಯು ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸಾಲೆಬೀರನಹಳ್ಳಿ ಗ್ರಾಮದಲ್ಲಿ ಜರುಗಿದೆ, https://ainlivenews.com/activities-of-mischief-destroy-500-nut-plants-in-the-harvest-the-farmers-kangaroo/ ರವಿ ಬೋವಿ (26) ಕೊಲೆಯಾದ ಯುವಕ. ಲಾರಿಯಿಂದ ಕಲ್ಲಿನ ಪರ್ಸಿ ಕೆಳಗಿಳಿಸುವ ವಿಚಾರದಲ್ಲಿ ಗಲಾಟೆ ಶುರುವಾಗಿದೆ. ಸಾಲೆಬೀರನಹಳ್ಳಿ ಗ್ರಾಮದ ಮಧುಸೂದನ್ ರೆಡ್ಡಿ ಎಂಬುವನಿಂದ ರವಿ ಎದೆಗೆ ಒದ್ದು ಹಲ್ಲೆ ನಡೆಸಲಾಗಿದೆ. ರವಿ ಎದೆಗೆ ಒದ್ದ ಹಿನ್ನಲೆ ಸ್ಥಳದಲ್ಲೆ ರವಿ ಬೋವಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬೆಳಗ್ಗೆಯವರೆಗೆ ಮನೆಯಲ್ಲಿ ವಾಂತಿ ಬೇಧಿಯಿಂದ ರವಿ ಬಳಲುತ್ತಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ರವಿ ಮೃತ ಪಟ್ಟಿದ್ದಾನೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು:- ಕಿಡಿಗೇಡಿಗಳ ಕೃತ್ಯದಿಂದ ಫಸಲಿಗೆ ಬಂದಿದ್ದ 500 ಅಡಿಕೆ ಗಿಡಗಳು ನಾಶವಾಗಿರುವ ಘಟನೆ ತಾಲೂಕಿನ ಬರಗೂರಿನಲ್ಲಿ ಜರುಗಿದೆ. https://ainlivenews.com/national-and-world-level-awards-for-ksrtc/ ಗಣೇಶ್ ಎಂಬ ರೈತರಿಗೆ ಸೇರಿದ ಅಡಿಕೆ ಗಿಡಗಳನ್ನು ರಾತ್ರಿ ವೇಳೆ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಗಣೇಶ್ ತೋಟಕ್ಕೆ ಬಂದು ನೋಡಿದಾಗ ಗಿಡ ಕಡಿದಿರುವುದು ಬೆಳಕಿಗೆ ಬಂದಿದೆ. ಹಳೇ ದ್ವೇಷದ ಹಿನ್ನೆಲೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕಿಡಿಗೇಡಿಗಳ ವಿರುದ್ಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು:-ಕೆಎಸ್ಆರ್ಟಿಸಿಗೆ ರಾಷ್ಟ್ರೀಯ ಹಾಗೂ ವಿಶ್ಚ ಮಟ್ಟದ ಪ್ರಶಸ್ತಿಗಳು ಬಂದಿದೆ. ಕೆಎಸ್ಆರ್ಟಿಸಿ ಜಾರಿಗೆ ತಂದ ಹೊಸ ಹೊಸ ಉಪಕ್ರಮಗಳು ಜನರಿಗೆ ಹತ್ತಿರವಾಗಿದ್ದು, ಈ ಕಾರಣದಿಂದ ಸಂಸ್ಥೆಗೆ ರಾಷ್ಟ್ರೀಯ ಹಾಗೂ ವಿಶ್ಚ ನಾವೀನ್ಯತೆ ಪ್ರಶಸ್ತಿಗಳು ಲಭಿಸಿವೆ. https://ainlivenews.com/tata-winger-vehicle-palty-14-wage-laborers-injured-the-condition-of-four-people/ ಪ್ರಶಸ್ತಿ ವಿವರ ಉತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ ಕನಸುಗಳ ಕಂಪನಿಗಳು ಉದ್ಯೋಗದಲ್ಲಿ ಆರೋಗ್ಯ ನಿರ್ವಹಣೆಗೆ ಗೌರವ ವರ್ಷದ ವ್ಯವಹಾರ ನಾಯಕ ಪ್ರಶಸ್ತಿ ಕಾರ್ಯಸ್ಥಳ ಮತ್ತು ಜನಸಂಪತ್ತು ಅಭಿವೃದ್ಧಿ ವಿಶ್ವ ಆರೈಕೆ ಪ್ರಶಸ್ತಿ ಉತ್ತಮ ಸಾರ್ವಜನಿಕ ಆರೋಗ್ಯ ಉಪಕ್ರಮ ವಿಶ್ವ ನಾವಿನ್ಯತೆ ಪ್ರಶಸ್ತಿ ಆರೋಗ್ಯ ತಂತ್ರಜ್ಞಾನದಲ್ಲಿ ಉತ್ತಮ ನಾವೀನ್ಯತೆ ಜಾಗತಿಕ ತಯಾರಿಕಾ ನಾಯಕರ ಪ್ರಶಸ್ತಿ ಸುಸ್ಥಿರತೆಯ ಗೌರವ ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿ