Author: AIN Author

ಕಾರವಾರ:- ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ವಿಧಿವಶರಾಗಿದ್ದಾರೆ. ಸುಕ್ರಜ್ಜಿ ಎಂದೇ ಖ್ಯಾತಿ ಪಡೆದಿದ್ದ ಅವರು, ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ಬಡಿಗೇರಿ ಗ್ರಾಮದ ನಿವಾಸಿ ಆಗಿದ್ದರು. ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಿ ಬೊಮ್ಮ ಗೌಡ ಅವರನ್ನು ಜಾನಪದ ಕೋಗಿಲೆ ಅಂತಲೂ ಕರೆಯಲಾಗುತ್ತಿತ್ತು. ಆದ್ರೆ, ಜಾನಪದ ಕೋಗಿಲೆ ತನ್ನ ಹಾಡು ನಿಲ್ಲಿಸಿದೆ. https://ainlivenews.com/violent-protests-will-be-held-if-money-is-not-deposited-into-the-accounts-of-farmers-who-lost-their-land-within-a-month/ ಸುಕ್ರಿ ಬೊಮ್ಮಗೌಡ ಬಾಲ್ಯದಲ್ಲಿದ್ದಾಗ ತಮ್ಮ ತಾಯಿ ಮೂಲಕ ಜಾನಪದ ಹಾಡುಗಳನ್ನು ಕಲಿತಿದ್ದರು. ಜಾನಪದ ಹಾಡು, ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಸಂಗೀತ ಹಾಡುಗಳನ್ನು ಸಂರಕ್ಷಿಸಿಕೊಂಡು ಹೋಗುವಲ್ಲಿ ಶ್ರಮಿಸಿದ್ದರು. ಹಾಡುಗಳು ಮಾತ್ರವಲ್ಲದೇ ವಿವಿಧ ಸಾಮಾಜಿಕ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದರು.

Read More

ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ರಾಜ್ಯ ಹೆದ್ದಾರಿ ೧೩೭ ರ ನವಲಗುಂದ ಗದಗ ರಸ್ತೆಯಲ್ಲಿರುವ ರೇಲ್ವೆ ಗೇಟ್ ನಂ 18ರಲ್ಲಿ ನೂತನ ಮೇಲ್ಸೇತುವೆ ಕಾಮಗಾರಿ ಪ್ರಾರಂಭ ವಾದರೂ,ಅದಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಯಾವುದೇ ರೀತಿಯ ನೋಟಿಸು ಹಾಗೂ ಪರಿಹಾರ ನೀಡದ ಹಿನ್ನಲೆ ಜಮೀನು ಕಳೆದುಕೊಂಡ ಮಾಲಕರಿಂದ ಹಾಗೂ ರೈತ ಹೋರಾಟ ಸಮಿತಿಯಿಂದ ಬುಧವಾರ ರೇಲ್ವೆ ಗೇಟ್ ೧೮ರ ಬಳಿ ರಸ್ತೆ ತಡೆ ಮಾಡಿ ಕೆಲಕಾಲ ಪ್ರತಿಭಟನೆ ಮಾಡಿದರು. https://ainlivenews.com/3rd-odi-series-a-grand-victory-for-india-this-is-why-captain-gave-the-victory/ ಈ ಸಂದರ್ಭದಲ್ಲಿ ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ನ್ಯಾಯವಾದಿ ಪ್ರಕಾಶ ಅಂಗಡಿ ಮಾತನಾಡಿ ಕಳೆದ ಒಂದೂವರೆ ವರ್ಷದಿಂದ ಪಟ್ಟಣದ ಹಿತದೃಷ್ಟಿಯಿಂದ ನಾವು ಮೇಲಸೇತುವೆ ಮಾಡಲು ಅವಕಾಶ ಮಾಡಿದೆವು ಆದರೆ ಇಲ್ಲಿಯವರೆಗೂ ಯಾವುದೇ ನೋಟಿಸ್ ಆಗಲಿ ಪರಿಹಾರವನ್ನು ನೀಡಿಲ್ಲ ಇದ್ಕಕೆ ಸಂಬಂದಿಸಿದ ಜಿಲ್ಲಾಧಿಕಾರಿ, ಹಾಗೂ ಉಪವಿಭಾಗಧಿಕಾರಿಗಳಿ ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆ ರಸ್ತೆ ತಡೆ ಮಾಡಿ ಹೋರಾಟ ಮಾಡಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಜಮೀನು ಕಳೆದುಕೊಂಡ…

Read More

ಹಾವೇರಿ:- ಕರ್ನಾಟಕ ಜನತೆಗೆ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ ಶುಭ ಸುದ್ದಿ ಕೊಟ್ಟಿದೆ. https://ainlivenews.com/attention-diabetics-not-only-sugar-but-these-foods-are-also-poisonous-to-you/ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಮೈಲಾರಲಿಂಗೇಶ್ವರ್ ಜಾತ್ರೆ ಸಂಭ್ರಮದಿಂದ ನಡೆದಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಜಾತ್ರೆಯಲ್ಲಿ ಕಾರ್ಣಿಕ ನುಡಿಯಲಾಗಿದೆ. 12 ಅಡಿ ಎತ್ತರದ ಬಿಲ್ಲೇರಿದ ಗೊರವಯ್ಯ ಹನುಮಗೌಡ ಗುರೇಗೌಡರು ದೈವವಾಣಿ ನುಡಿದಿದ್ದು, ‘ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್’ ಎಂದು ನುಡಿದಿದ್ದಾರೆ. ಮೈಲಾರ ಕಾರ್ಣಿಕದ ಅರ್ಥವನ್ನು ಗ್ರಾಮಸ್ಥರು ತಿಳಿಸಿದ್ದು ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂದಿದೆ. ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಉತ್ತಮವಾಗಿದ್ದ ಕಾರಣ ರಾಜ್ಯದಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಮುಖ್ಯವಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು ಬೇಸಿಗೆಯಲ್ಲೂ ಈ ಬಾರಿ ನೀರಿಗೆ ಸಮಸ್ಯೆ ಇರುವುದಿಲ್ಲ ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನು ಈ ವರ್ಷ ಕೂಡ ಉತ್ತಮ ಮಳೆಯಾದರೆ ರಾಜ್ಯದ ಕೆರೆ ಕಟ್ಟೆಗಳು ಭರ್ತಿಯಾಗಲಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ.

Read More

ಕೇರಳ: ಪ್ರಥಮ ವರ್ಷದ ಕಿರಿಯ ವಿದ್ಯಾರ್ಥಿಗಳ ಜೊತೆ ಹಿರಿಯ ವಿದ್ಯಾರ್ಥಿಗಳು ಅಮಾನುಷವಾಗಿ ನಡೆದುಕೊಂಡ ಘಟನೆ ಇಲ್ಲಿನ ಸರ್ಕಾರಿ ನರ್ಸಿಂಗ್​ ಕಾಲೇಜೊಂದರಲ್ಲಿ ಜರುಗಿದೆ. https://ainlivenews.com/attention-diabetics-not-only-sugar-but-these-foods-are-also-poisonous-to-you/ ಈ ಬಗ್ಗೆ ದೂರು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ. ತಮ್ಮನ್ನು ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ದೈಹಿಕ ಕಸರತ್ತಿಗೆ ಬಳಸುವ ಡಂಬಲ್ಸ್​​ಅನ್ನು ಕಟ್ಟಿ ನೇತು ಹಾಕುತ್ತಿದ್ದರು. ಚೂಪಾದ ವಸ್ತುಗಳನ್ನು ಬಳಸಿ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಮೂವರು ಕಿರಿಯ ವಿದ್ಯಾರ್ಥಿಗಳು ದೂರು ನೀಡಿದ್ದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಕಳೆದ ನವೆಂಬರ್​​ನಿಂದ ನಮ್ಮ ಮೇಲೆ ನಿರಂತರವಾಗಿ ರ್ಯಾಗಿಂಗ್​ ಮಾಡಲಾಗುತ್ತಿದೆ. ಖಾಸಗಿ ಅಂಗಗಳಿಗೆ ಡಂಬಲ್ಸ್​​, ದಿಕ್ಸೂಚಿ ಮತ್ತಿತರ ವಸ್ತುಗಳನ್ನು ಕಟ್ಟಲಾಗುತ್ತಿತ್ತು. ದೇಹವನ್ನು ಗಾಯಗೊಳಿಸಿ, ನಂತರ ಅದರ ಮೇಲೆ ಲೋಷನ್ ಹಚ್ಚುತ್ತಿದ್ದರು. ಇದಲ್ಲದೆ, ಮುಖ, ತಲೆ ಮತ್ತು ಬಾಯಿಗೆ ಕ್ರೀಮ್ ಹಚ್ಚುತ್ತಿದ್ದರು ಎಂದು ವಿದ್ಯಾರ್ಥಿಗಳು ದೂರಿನಲ್ಲಿ ಆರೋಪಿಸಿದ್ದಾರೆ. ಡಿಸೆಂಬರ್ 13 ರಂದು, ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನಿಗೆ ತೀವ್ರ ದೈಹಿಕ ಹಿಂಸೆ ನೀಡಲಾಗಿದೆ. ಬಳಿಕ ಅದೇ ದಿನ ರಾತ್ರಿ, ಆರೋಪಿಯೊಬ್ಬ ಆತನ ಕೋಣೆಗೆ ಆಗಮಿಸಿ ಕೈಕಾಲುಗಳನ್ನು…

Read More

ಹಣೆಗೆ ವಿಭೂತಿ ಅಥವಾ ಭಸ್ಮವನ್ನು ಹಚ್ಚಿಕೊಳ್ಳುವುದು ಸಾಮಾನ್ಯ. ದೇವಾಲಯದಲ್ಲಿ ಪೂಜಾರಿಗಳೂ ಹಣೆಯ ಮೇಲೆ ಮೂರು ಸಾಲಿನ ಭಸ್ಮವನ್ನು ಹಚ್ಚಿಕೊಂಡಿರುತ್ತಾರೆ.ಮಾತ್ರವಲ್ಲದೇ ಶಿವಶರಣರು, ಸ್ಮಾರ್ತ ಬ್ರಾಹ್ಮಣರು ಹಾಗೂ ಲಿಂಗಾಯಿತರೂ ಹಣೆಗೆ ವಿಭೂತಿಯನ್ನು ಹಚ್ಚುತ್ತಾರೆ. ಭಸ್ಮದ ರೂಪದಲ್ಲಿರುವ ವಿಭೂತಿಯನ್ನು ಹಣೆಯ ಮೇಲೆ ತೋರು ಬೆರಳು, ಮಧ್ಯ ಹಾಗೂ ಉಂಗುರ ಬೆರಳುಗಳ ಸಹಾಯದಿಂದ ಅನ್ವಯಿಸಲಾಗುತ್ತದೆ. https://ainlivenews.com/riot-case-in-cultural-city-explosive-element-mentioned-in-fir/ ನಮ್ಮ ಪುರಾಣ ಹಾಗೂ ಶಾಸ್ತ್ರಗಳಲ್ಲಿ ನಾವು ಹಣೆಗೆ ಹಚ್ಚುವ ವಿಭೂತಿಗೆ ವಿಶೇಷವಾದ ಸ್ಥಾನಮಾನವಿದೆ. ಬಹಳಷ್ಟು ಪವಿತ್ರ ಎಂದು ಇದನ್ನು ಭಾವಿಸಲಾಗುತ್ತದೆ ಹಾಗೂ ಪೂಜೆಯ ಸಂದರ್ಭಗಳಲ್ಲಿ ದೇವರಿಗೂ ಹಚ್ಚಿ ಜನರು ತಾವು ಕೂಡ ಹಚ್ಚಿಕೊಳ್ಳುತ್ತಾರೆ. ವಿಭೂತಿಯನ್ನು ಒಂದು ವಿಶೇಷವಾದ ಮರ ಅಥವಾ ಕಟ್ಟಿಗೆ ಉಪಯೋಗಿಸಿ ತಯಾರು ಮಾಡುತ್ತಾರೆ. ಇದರ ಜೊತೆಗೆ ಅಪ್ಪಟ ಹಸುವಿನ ತುಪ್ಪ, ಕೆಲವು ಗಿಡಮೂಲಿಕೆಗಳು, ಕೆಲವು ಕಾಳುಗಳು ಮತ್ತು ಇನ್ನಿತರ ಶುದ್ಧವಾದ ಪದಾರ್ಥಗಳಿಂದ ತಯಾರು ಮಾಡುತ್ತಾರೆ. ಹಣೆಯ ಮೇಲೆ ವಿಭೂತಿ ಧರಿಸುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ ಮತ್ತು ನಮ್ಮ ಭಾರತದಲ್ಲಿ ಎಲ್ಲಾ ಕಡೆ ಇದು ಸಾಮಾನ್ಯ. ವಿಭೂತಿಯನ್ನು…

Read More

ಮೈಸೂರು:- ಸಾಂಸ್ಕೃತಿಕ ನಗರಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಗಲಭೆ ಕೇಸ್ ಗೆ ಸಂಬಂಧಿಸಿದಂತೆ ಎಫ್​ಐಆರ್​ನಲ್ಲಿ ಸ್ಫೋಟಕ ಅಂಶ ಉಲ್ಲೇಖ ಮಾಡಲಾಗಿದೆ. ಗಲಭೆಯಲ್ಲಿ 1 ಸಾವಿರಕ್ಕೂ ಹೆಚ್ಚು ಜನ ಇದ್ದರು ಎಂದು ಪೊಲೀಸರು ತಿಳಿಸಿದ್ದು, ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಸಂಬಂಧ ಈಗಾಗಲೇ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇನ್ನು ಸ್ವಲ್ಪ ಯಾಮಾರಿದ್ದರೂ ಪೊಲೀಸರ ಹೆಣಗಳು ಬೀಳುತ್ತಿದ್ದವು ಎಂದು ಎಫ್​ಐಆರ್​ನಲ್ಲಿ ಉಲ್ಲೆಖವಾಗಿದೆ. https://ainlivenews.com/rape-victim-has-right-to-abortion-high-court-verdict/ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸರ್ಕಾರದ ಆಸ್ತಿ ಪಾಸ್ತಿಗೆ ಹಾನಿ, ಪೊಲೀಸ್ ಇಲಾಖೆಗೆ ಸಂಬಂದಿಸಿದ ವಾಹನಗಳಿಗೆ ಹಾನಿ, ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಇದರಿಂದ ಪೊಲೀಸರ ಸಾವು ಸಂಭವಿಸಬಹುದು ಎಂದು ತಿಳಿದು ಕಲ್ಲು ತೂರಾಟ ಮಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮುಸ್ಲಿಂ ಯುವಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಉದಯಗಿರಿ ಪೊಲೀಸ್ ಠಾಣಾ ಪಿಎಸ್ಐ ಸುನೀಲ್ ಸಿ.ಎನ್ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಗಳ ಬೇಟೆಯಾಡಲು ಸಿಸಿಬಿ…

Read More

ಗದಗ:- ಗದಗ ನಗರದ ಬೆಟಗೇರಿಯ ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಮನೆ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ಈ ವೇಳೆ ಕೋಟಿ ಕೋಟಿ ಹಣದ ಕಂತೆ ಪತ್ತೆಯಾಗಿದೆ. ಅಪಾರ ಹಣ‌ ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಅಲ್ಲದೇ ಕಂತೆ ಕಂತೆ ಹಣ ಎಣಿಸಲು ಪೊಲೀಸರು ಸುಸ್ತಾಗಿ ಹೋಗಿದ್ದಾರೆ. https://ainlivenews.com/king-kohli-batting-good-news-for-india/ ಬೆಟಗೇರಿ ಸಿಪಿಐ ಧೀರಜ್ ಶಿಂಧೆ, ಪಿಎಸ್ಐ ಆರಿ, ಎಸ್ಪಿ ಬಿ ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಮೊನ್ನೆ ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ ಸುಮಾರು 1 ಕೋಟಿ 50 ಲಕ್ಷ ಹಣ ಪತ್ತೆಯಾಗಿತ್ತು. ನಿನ್ನೆಯೂ ಕೂಡ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಹೀಗಾಗಿ ಇಂಚಿಂಚು ಜಾಗವನ್ನೂ ಬಿಡದೇ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೊನ್ನೆ ಪೊಲೀಸರು ದೂರೊಂದರ ಆಧಾರದ ಮೇಲೆ ಅವನ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಕೋಟಿಗಟ್ಟಲೆ ಹಣ ಪತ್ತೆಯಾಗಿದೆ. ನಿನ್ನೆ ಅವನಿಗೆ ಸೇರಿದ ಕೇಸರ್ ಫೈನಾನ್ಸ್ ಬಳಿಯಿರುವ ಮನೆಯ ಮೇಲೆ ದಾಳಿ ನಡೆಸಿದಾಗಲೂ ಕಂತೆ ಕಂತೆ…

Read More

ಟೀಮ್ ಇಂಡಿಯಾಯು ಇಂಗ್ಲೆಂಡ್‌ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ 142 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. https://ainlivenews.com/attention-diabetics-not-only-sugar-but-these-foods-are-also-poisonous-to-you/ ಟೀಂ ಇಂಡಿಯಾದ ಅದ್ಭುತ ಆಲ್‌ರೌಂಡ್ ಪ್ರದರ್ಶನದಿಂದಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 142 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ, ಭಾರತ ಇಂಗ್ಲೆಂಡ್ ವಿರುದ್ಧ 3-0 ಸರಣಿಯನ್ನು ವೈಟ್‌ವಾಶ್ ಮಾಡಿದೆ. ಗೆಲುವಿನ ಬಳಿಕ ಮಾತನಾಡಿದ ರೋಹಿತ್, ಇಂಗ್ಲೆಂಡ್​ ವಿರುದ್ಧ ಸೀರೀಸ್​ ಗೆದ್ದು ಖುಷಿ ತಂದಿದೆ. ನಾವು ಈ ಸೀರೀಸ್​ನಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಭಾವಿಸುತ್ತೇವೆ. ಅದರಲ್ಲೂ ಟೀಮ್​ ಇಂಡಿಯಾದ ಆಟಗಾರರು ಬೌಲಿಂಗ್​ ಮತ್ತು ಬ್ಯಾಟಿಂಗ್​ ಎರಡು ವಿಭಾಗಗಳಲ್ಲೂ ಆಲ್​ರೌಂಡರ್​ ಪ್ರದರ್ಶನ ನೀಡಿದ್ದಾರೆ ಎಂದರು ರೋಹಿತ್​. ಇನ್ನು, ಮುಂದೆ ಚಾಂಪಿಯನ್ಸ್​ ಟ್ರೋಫಿ ಇದೆ. ವಿಶ್ವಕಪ್​ನಲ್ಲೂ ನಾವು ಗೆದ್ದ ರೀತಿ ಎಲ್ಲರಿಗೂ ಗೊತ್ತಿದೆ. ತಂಡದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಅಗ್ರೆಸ್ಸಿವ್​ ಆಗಿ ಬ್ಯಾಟಿಂಗ್​ ಮಾಡಲು ಅವಕಾಶ ಇದೆ. ಇನ್ನೂ ಕೆಲವು ವಿಚಾರಗಳಲ್ಲಿ ಸುಧಾರಿಸಬೇಕಿದೆ. ಈ…

Read More

ಅಲಹಾಬಾದ್:- ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಗರ್ಭಪಾತದ ಹಕ್ಕಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. https://ainlivenews.com/air-show-vacation-to-bengaluru-school-colleges-2-days-from-today/ ನ್ಯಾಯಮೂರ್ತಿಗಳಾದ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಪ್ರಶಾಂತ್ ಕುಮಾರ್ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು 17 ವರ್ಷದ ಅತ್ಯಾಚಾರ ಸಂತ್ರಸ್ತೆಯ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದೆ. ಅತ್ಯಾಚಾರದಿಂದ ಯುವತಿ ಅಥವಾ ಮಹಿಳೆ ಗರ್ಭಿಣಿಯಾದರೆ ಆ ಮಗುವನ್ನು ಉಳಿಸಿಕೊಳ್ಳಬೇಕೇ, ಬೇಡವೇ ಎಂದು ನಿರ್ಧರಿಸಲು ಆಕೆಗೆ ಹಕ್ಕಿದೆ. ಕಾನೂನು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಗೆ ತನ್ನ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಹಕ್ಕನ್ನು ಒದಗಿಸುತ್ತದೆ ಎಂದು ಕೋರ್ಟ್ ಹೇಳಿದೆ. ವೈದ್ಯಕೀಯ ಗರ್ಭಪಾತ ಕಾಯ್ದೆಯ ಸೆಕ್ಷನ್ 3(2) ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಗೆ ತನ್ನ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸುವ ಹಕ್ಕನ್ನು ಒದಗಿಸುತ್ತದೆ. ಆಕೆಗೆ ವೈದ್ಯಕೀಯವಾಗಿ ಗರ್ಭಪಾತವನ್ನು ಮಾಡಿಸಿಕೊಳ್ಳುವ ಅಥವಾ ಆ ಮಗುವನ್ನು ಹೆತ್ತು ಅದರ ಜವಾಬ್ದಾರಿ ವಹಿಸಿಕೊಳ್ಳುವ ಎರಡೂ ಹಕ್ಕುಗಳಿರುತ್ತದೆ. ಆಕೆಯ ಮಾತೃತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಹಕ್ಕನ್ನು ನಿರಾಕರಿಸುವುದು ಅವಳ ಘನತೆಯಿಂದ ಬದುಕುವ ಮಾನವ ಹಕ್ಕನ್ನು ನಿರಾಕರಿಸುವುದಕ್ಕೆ…

Read More

ಹಿಂದೂ ಧರ್ಮದಲ್ಲಿ, ಗುರುವಾರವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗುತ್ತದೆ ಮತ್ತು ಈ ದಿನದಂದು ಅವನನ್ನು ಪೂಜೆ ಕೈಂಕರ್ಯಗಳೊಂದಿಗೆ ಆರಾಧಿಸಲಾಗುತ್ತದೆ. ಗುರುವಾರದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ, ವಿಷ್ಣು ದೇವನೊಂದಿಗೆ ಲಕ್ಷ್ಮಿ ದೇವಿಯ ಅನುಗ್ರಹವನ್ನೂ ಪಡೆದುಕೊಳ್ಳಬಹುದು ಎನ್ನುವ ನಂಬಿಕೆಯಿದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದ ವ್ಯಕ್ತಿಯು ತನ್ನ ಜೀವನದಲ್ಲಿ ಸಂಪತ್ತು ಅಥವಾ ಸಮೃದ್ಧಿಯ ಯಾವುದೇ ಕೊರತೆಯನ್ನು ಎದುರಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಗುರುವಾರ ಪೂಜೆಯೊಂದಿಗೆ, ಕೆಲವು ಕೆಲಸಗಳನ್ನು ಸಹ ಮಾಡಬೇಕು. https://ainlivenews.com/attention-diabetics-not-only-sugar-but-these-foods-are-also-poisonous-to-you/ ಗುರುವಾರವನ್ನು ವಿಶ್ವದ ಅಧಿಪತಿಯಾದ ವಿಷ್ಣುವಿಗೆ ಅರ್ಪಿಸಲಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಗುರುವಾರ ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಎಂದು ನಂಬಲಾಗಿದೆ. ಆದ್ದರಿಂದ, ಗುರುವಾರ, ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸುವ ಜನರು ಪ್ರಯೋಜನ ಪಡೆಯುತ್ತಾರೆ. ಗುರುವಾರ ವಿಷ್ಣುವನ್ನು ಪೂಜಿಸಿದರೆ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಇರುತ್ತದೆ. ಇದರೊಂದಿಗೆ, ವೃತ್ತಿ ಮತ್ತು ವ್ಯವಹಾರದಲ್ಲಿ ಸ್ಥಾನವೂ ಇದೆ. ಆದಾಗ್ಯೂ, ಈ ಪ್ರಯೋಜನಗಳನ್ನು ಪಡೆಯಲು, ಗುರುವಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವುಗಳ ಬಗ್ಗೆ…

Read More