Author: AIN Author

ಬೆಂಗಳೂರು:- ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ಡ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. https://ainlivenews.com/a-lone-train-hit-the-road-in-bandipur-passengers-are-excited-for-gajarajs-forest/ ಆರೋಪಿಯನ್ನು ಬಂಧಿಸಿ ಸ್ಥಳ ಮಹಜರು ನಡೆಸಿರುವ ಸೋಕೋ ಟೀಂ ತಡರಾತ್ರಿಯಿಂದಲೇ ವಿಚಾರಣೆ ಆರಂಭಿಸಿದ. ಘಟನೆ ಹಿನ್ನೆಲೆ, 3 ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದಿದೆ. ವಿನಾಯಕ ನಗರದಲ್ಲಿ ತಡರಾತ್ರಿ ಕರ್ಣ ಎಂಬುವರಿಗೆ ಸೇರಿದ್ದ 3 ಹಸುಗಳ ಕೆಚ್ಚಲು ಕೊಯ್ದ ರಕ್ತದ ಕೋಡಿಯನ್ನೇ ಹರಿಸಿದ್ದರು. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ಚಾಮರಾಜನಗರ:- ಬಂಡೀಪುರದಲ್ಲಿ ಒಂಟಿಸಲಗ ರಸ್ತೆಗಿಳಿದ ಹಿನ್ನೆಲೆ ಗಜರಾಜನ ಕಾಟಕ್ಕೆ ಪ್ರಯಾಣಿಕರು ಹೈರಾಣಾಗಿದ್ದಾರೆ. https://ainlivenews.com/frequent-itching-in-the-private-part-when-women-menstruate-what-could-be-the-reason-for-this/ ಒಂಟಿ ಸಲಗವೊಂದು ರಸ್ತೆಗೆ ಇಳಿದ ಪರಿಣಾಮ ಸುಮಾರು 3-4 ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ವೀಕೆಂಡ್ ಹಿನ್ನೆಲೆ ತಮಿಳುನಾಡಿನ ಊಟಿ ಮೂಲಕ ಕರ್ನಾಟಕಕ್ಕೆ ಬರುತ್ತಿರುವ ಪ್ರಯಾಣಿಕರು ಗಜರಾಜನ ಕಾಟಕ್ಕೆ ಹೈರಣಾಗಿದ್ದಾರೆ. ರಾತ್ರಿ 9 ಗಂಟೆಗೆ ಸಂಚಾರ ಬಂದ್ ಹಿನ್ನಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಇನ್ನೂ ಹೆಚ್ಚಾಗಿದೆ. ಇತ್ತೀಚೆಗೆ ತರಕಾರಿ ವಾಹನಗಳಿಗಾಗಿ ಗಜರಾಜ ಆಗಾಗ ರಸ್ತೆಗಿಳಿಯುತ್ತಿದ್ದ. ಅದನ್ನೇ ಅಭ್ಯಾಸ ಮಾಡಿಕೊಂಡು ಈಗ ರಸ್ತೆಯಲ್ಲೇ ನಿಂತು ವಾಹನ ಸವಾರರಿಗೆ ಆತಂಕ ಮೂಡಿಸಿದ್ದಾನೆ

Read More

ಪಿರಿಯಡ್ಸ್ ಎಂಬುದು ಮಹಿಳೆಯ ಋತುಚಕ್ರದ ಭಾಗವಾಗಿ ಪ್ರತಿ ತಿಂಗಳೂ ಸಂಭವಿಸುವ ಸಾಮಾನ್ಯ ಯೋನಿ ರಕ್ತಸ್ರಾವವಾಗಿದೆ. ಪ್ರತಿ ತಿಂಗಳು ಈ ಮೂಲಕ ನಿಮ್ಮ ದೇಹವು ಗರ್ಭಧಾರಣೆಗೆ ಸಿದ್ಧವಾಗುತ್ತದೆ. ಮುಟ್ಟು ರಕ್ತ, ಯೋನಿ ಸ್ರವಿಸುವಿಕೆ ಮತ್ತು ಗರ್ಭಾಶಯದ ಗೋಡೆಯ ಎಂಡೊಮೆಟ್ರಿಯಲ್ ಕೋಶಗಳನ್ನು ಒಳಗೊಂಡಿರುವ ಒಂದು ಸಂಕೀರ್ಣ ಜೈವಿಕ ದ್ರವವಾಗಿದೆ. https://ainlivenews.com/dont-sell-your-property-if-brokers-come-home-dcm-dkshi/ ಮಹಿಳೆಯರಿಗೆ ಪ್ರತೀ ತಿಂಗಳು ಋತುಚಕ್ರದ ಸಂದರ್ಭದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವರಲ್ಲಿ ತಲೆನೋವು ಕಂಡುಬಂದರೆ, ಇನ್ನು ಕೆಲವರಿಗೆ ಅತಿ ಯಾದ ಹೊಟ್ಟೆನೋವು ಇರುವುದು. ಮನಸ್ಥಿತಿ ಬದಲಾವಣೆ ಎನ್ನುವುದು ಸಹಜ ಕೂಡ. ಆದರೆ ಹೆಚ್ಚಿನ ಮಹಿಳೆಯರಲ್ಲಿ ಯೋನಿ ಭಾಗದಲ್ಲಿ ತುರಿಕೆಯು ಕಂಡುಬರುವುದು. ಇದು ಋತುಚಕ್ರದ ಭಾಗದಲ್ಲಿ ತೀವ್ರ ಸ್ವರೂಪದಲ್ಲಿ ಇರುವುದು. ಇದು ತುಂಬಾ ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ, ಮುಜುಗರಕ್ಕೆ ಕಾರಣವಾಗಬಲ್ಲದು. ಇಂತಹ ಸಮಯದಲ್ಲಿ ಏನು ಮಾಡಬೇಕೆಂದು ತೋಚದು. ಆದರೆ ಯೋನಿ ತುರಿಕೆಗೆ ಕಾರಣಗಳು ಏನು ಎನ್ನುವುದನ್ನು ಪತ್ತೆ ಮಾಡಿಕೊಂಡರೆ, ಆಗ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗಲಿದೆ ಹಳೆ ರಕ್ತ ಹೊರಹೋಗುವುದು:…

Read More

ರಾಮನಗರ:- ಬ್ರೋಕರ್ ಗಳು ಮನೆಗೆ ಬಂದ್ರೆ ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ. https://ainlivenews.com/art-festival-at-sapna-book-house-prize-distribution-to-winners/ ಈ ಸಂಬಂಧ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಬ್ರೋಕರ್​ಗಳು ನಿಮ್ಮ ಮನೆಗೆ ಬರುತ್ತಾರೆ. ಯಾವುದೇ ಕಾರಣಕ್ಕೂ ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ ಎಂದರು. ಮತ್ತೆ ಮತ್ತೆ ನಿಮಗೆ ಹೇಳುತ್ತಿದ್ದೇನೆ, ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ. ನಿಮ್ಮ ಆಸ್ತಿಗೆ ಬಹಳ ಮೌಲ್ಯ ಬರಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಆಸ್ತಿ ಮಾರಿಕೊಳ್ಳಬೇಡಿ, ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ. ನಾನು ಶಾಲೆಗೆ 110 ಎಕರೆ ಜಮೀನು ಬರೆದುಕೊಟ್ಟಿದ್ದೇನೆ. ಹೆಚ್​ಡಿ ಕುಮಾರಸ್ವಾಮಿ ಅಥವಾ ಮಂಜುನಾಥ್ 1 ಸೈಟ್​ನಾದರೂ ಕೊಟ್ಟಿದ್ದಾರಾ? ನನ್ನನ್ನು ಶಾಸಕ, ಉಪ ಮುಖ್ಯಮಂತ್ರಿಯಾಗಿ ಮಾಡಿದ್ದೀರಿ. ಬೇರೆಯವರಿಗೆ ಮತ ಹಾಕಿದ್ದವರೂ ಯೋಚನೆ ಮಾಡಬೇಕು. ಸ್ಕೂಟರ್ ತಗೊಂಡು ಮದ್ದೂರು, ಮಳವಳ್ಳಿಗೆ ಹೋಗಿ ನೋಡಿ ಚನ್ನಪಟ್ಟಣಕ್ಕೆ ಹೋದರೆ ಮೂಗು ಹಿಡಿದುಕೊಂಡು ಹೋಗಬೇಕಿತ್ತು. ನನಗೆ ನಾಚಿಕೆ ಆಯ್ತು, ನಾನೇ 200-300 ಕೋಟಿ ರೂ ಹಣ ಕೊಟ್ಟೆ. ಬಹಳಷ್ಟು ಜನ ಡಿಕೆ ಬ್ರದರ್ಸ್ ಜೊತೆ ಹೋಗೋಣ ಅಂತ…

Read More

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಸಪ್ನಾ ಬುಕ್ ಹೌಸ್ ಹಾಗೂ ರೊಸ್ಟಮ್ ಡೈರೀಸ್ ಇವುಗಳ ಸಂಯು ಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹುಬ್ಬಳ್ಳಿ ಆರ್ಟ್ ಫೆಸ್ಟಿವಲ್ ಉದ್ಘಾಟನೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. https://ainlivenews.com/how-many-almonds-to-eat-per-day-what-happens-to-excessive-consumption/ ಫೆಸ್ಟಿವಲ್ ಗಾಗಿ ಸುಮಾರು 2500 ಚಿತ್ರಕಲೆಗಳು ಸ್ವೀಕೃತವಾಗಿದ್ದವು. ಇದರಲ್ಲಿ 200 ಚಿತ್ರಕಲೆಗಳನ್ನು ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಜನವರಿ 31ರ ವರೆಗೆ ಪ್ರದರ್ಶನಕ್ಕೆ ಮುಕ್ತವಾಗಿದೆ. ಸಾರ್ವಜನಿಕರು ವೀಕ್ಷಿಸಬಹುದು. ಶಾಸಕ ಮಹೇಶ ಟೆಂಗಿನಕಾಯಿ ಅವರು ಆರ್ಟ್ ಗ್ಯಾಲರಿ ಉದ್ಘಾಟನೆ ಮಾಡಿದರು. ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಫೆಸ್ಟಿವಲ್ ನಿರ್ಣಾಯಕರಾದ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುರುಸಿದ್ದಪ್ಪ ಮಲ್ಲಾಪುರ, ಆರ್.ಬಿ. ಗರಗ, ಕೆ.ವಿ. ಶಂಕರ, ಮಂಜುನಾಥ ಕಾರಿಗಾರ, ಮಂಜುಳಾ ಕೆ.ವಿ. ಶಕುಂತಲಾ ವೆರ್ಣೇಕರ ಉಪಸ್ಥಿತರಿದ್ದರು. ಲಕ್ಷ್ಮಿ ಮಾಲ್ ಮಾಲೀಕ ಕಾಶೀನಾಥ ಚಾಟ್ಟಿ, ಸಪ್ನಾ ಬುಕ್‌ ಹೌಸ್‌ ವ್ಯವಸ್ಥಾಪಕ ರು ಎಂ.ವಿ. ಇತರರು ಪಾಲ್ಗೊಂಡಿದ್ದರು. ಆರ್ಟ್ ಫೆಸ್ಟಿವಲ್ ನ 16 ವರ್ಷದ ಒಳಗಿನ ವಿಜೇತರು ಇಂತಿದ್ದಾರೆ. ಇಫಾ ಅಮೀನ ಎಂ. ಪ್ರಥಮ,…

Read More

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾದಾಮಿಯು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಪ್ರೋಟೀನ್ಗಳು ಸ್ನಾಯುಗಳನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ನಿಯಮಿತವಾಗಿ ತಿನ್ನುವುದರಿಂದ, ದೇಹದಲ್ಲಿ ಕೊಬ್ಬು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. https://ainlivenews.com/power-cut-in-this-area-of-bangalore-today/ ಬಾದಾಮಿಯು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಸಹಾಯಕವಾಗಿದೆ. ಆದರೆ ಯಾವುದನ್ನಾದರೂ ಅಧಿಕಗೊಳಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಬಾದಾಮಿ ತಿನ್ನುವ ಮೂಲಕ ಆರೋಗ್ಯವನ್ನು ಬಲಪಡಿಸಲು ಬಯಸಿದರೆ, ಸರಿಯಾದ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಇದಲ್ಲದೆ ಈ ಒಣ ಹಣ್ಣನ್ನು ಸೇವಿಸಲು ಉತ್ತಮ ಸಮಯದ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು.. ನೀವು ಒಂದು ದಿನದಲ್ಲಿ ಅಂದರೆ 24 ಗಂಟೆಗಳಲ್ಲಿ 20 ರಿಂದ 30 ಗ್ರಾಂ ಬಾದಾಮಿಯನ್ನು ಸೇವಿಸಬಹುದು. ಫೈಬರ್, ಪ್ರೋಟೀನ್, ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಉತ್ತಮ ಪ್ರಮಾಣದ ಪೋಷಕಾಂಶಗಳು ಬಾದಾಮಿಯಲ್ಲಿ ಕಂಡುಬರುತ್ತವೆ. ಪ್ರತಿದಿನ 5 ರಿಂದ 8 ಬಾದಾಮಿಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ, ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು. ಆಯುರ್ವೇದದ ಪ್ರಕಾರ, ಬೆಳಗ್ಗೆ…

Read More

ಬೆಂಗಳೂರು:- ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/press-club-of-bangalore-2024-award-cm-siddaramayya/ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಕಾವೇರಿನಗರ, ಹುಳಿಮಾವು, ಅಕ್ಷಯ ನಗರ, ಹೊಂಗಸಂದ್ರ, ಬಿ.ಟಿ.ಎಸ್ ಲೇಔಟ್, ಕೋಡಿಚಿಕ್ಕನಹಳ್ಲಿ, ವಿಜಯಬ್ಯಾಂಕ್ ಲೇಔಟ್, ವಿಶ್ವಪ್ರಿಯಾ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಲಿದೆ ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

Read More

ಸೂರ್ಯೋದಯ – 6:53 AM ಸೂರ್ಯಾಸ್ತ – 5:56 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಹೇಮಂತ್ ಋತು, ಪುಷ್ಯ ಮಾಸ, ತಿಥಿ – ಹುಣ್ಣಿಮೆ ನಕ್ಷತ್ರ – ಆರ್ದ್ರೆ 10:37 ರಾಹು ಕಾಲ – 07:30 ದಿಂದ 09:00 ವರೆಗೆ ಯಮಗಂಡ – 10:30 ದಿಂದ 12:00 ವರೆಗೆ ಗುಳಿಕ ಕಾಲ – 01:30 ದಿಂದ 03:00 ವರೆಗೆ ಬ್ರಹ್ಮ ಮುಹೂರ್ತ – 5:17 ಬೆ ದಿಂದ 6:05 ಬೆ ವರೆಗೆ ಅಮೃತ ಕಾಲ – ಯಾವುದೂ ಇಲ್ಲ ಅಭಿಜಿತ್ ಮುಹುರ್ತ – 12:02 ಮ ದಿಂದ 12:47 ಮ ವರೆಗೆ ನಿಮ್ಮ ಹೆಸರು, ಜನ್ಮ ದಿನಾಂಕ, ಜನ್ಮ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು ಅದರ ಜೊತೆಗೆ ಭಾವ ಚಿತ್ರ ಹಾಗೂ ಹಸ್ತಸಾಮುದ್ರಿಕೆ ಕಳಿಸಿದರೆ ಸಂಪೂರ್ಣ ಭವಿಷ್ಯ ತಿಳಿಸಲಾಗುವುದು. ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯ ಶಾಸ್ತ್ರ,ವಾಸ್ತು ಶಾಸ್ತ್ರ,ಸಂಖ್ಯಾಶಾಸ್ತ್ರ ಹಾಗೂ ನಾಡಿ…

Read More

ಬೆಂಗಳೂರು: ಹಿರಿ ನಟ ಸರಿಗಮ ವಿಜಯ್ ಬೆಂಗಳೂರು ಆಸ್ಪತ್ರೆಗೆ ದಾಖಲೆ ಮಾಡಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆ ಹಿರಿಯ ನಟ ಸರಿಗಮ ವಿಜಯ್ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. https://ainlivenews.com/father-son-died-for-mobile-how-did-the-incident-happen/ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟನ ಆರೋಗ್ಯ ಸ್ಥಿತಿ ಇಂದು ಗಂಭೀರವಾಗಿದೆ. ಈ ಬಗ್ಗೆ ಸರಿಗಮ ವಿಜಯ್ ಅವರ ಪುತ್ರ ಮಾಹಿತಿ ಕೊಟ್ಟಿದ್ದಾರೆ.

Read More

ಮುಂಬೈ :- ಮೊಬೈಲ್ ಗಾಗಿ ಪ್ರಾಣಬಿಟ್ಟ ಅಪ್ಪ-ಮಗ ಇಬ್ಬರು ನೇಣಿಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದಿದೆ. https://ainlivenews.com/this-leaf-found-in-your-backyard-is-a-miracle-cure-for-cancer-best-for-diabetics-too/ ತಂದೆ ಮೊಬೈಲ್ ಕೊಡಿಸದ್ದಕ್ಕೆ ಮಗ ನೇಣಿಗೆ ಶರಣಾಗಿದ್ದು, ಮಗನ ಸಾವಿನಿಂದ ನೊಂದು ತಂದೆಯೂ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಸೂಸೈಡ್‌ ಮಾಡಿಕೊಂಡಿದ್ದಾನೆ. ಮಗ ಬುಧವಾರ ಸಂಜೆ ಮೊಬೈಲ್ ಕೊಡಿಸುವಂತೆ ತಂದೆ ಬಳಿ ಹಠ ಮಾಡಿದ್ದಾನೆ. ಆದರೆ ತಂದೆ ತಾನು ಜಮೀನು ಹಾಗೂ ವಾಹನಕ್ಕೆ ಪಡೆದ ಸಾಲವನ್ನು ಮರುಪಾವತಿಸಬೇಕಿದ್ದು, ಮೊಬೈಲ್ ಕೊಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಬೇಸರಗೊಂಡ ಮಗ ಮನೆ ಬಿಟ್ಟು ಹೋಗಿದ್ದಾನೆ. ಮಗ ಮನೆಗೆ ವಾಪಸ್ ಬಾರದ್ದನ್ನು ಕಂಡು ತಂದೆ ಜಮೀನಿನ ಬಳಿ ತೆರಳಿದಾಗ ಮಗ ನೇಣಿಗೆ ಶರಾಣಾಗಿರುವುದು ಕಂಡುಬಂದಿದೆ. ಇದರಿಂದ ಆಘಾತಗೊಂಡ ತಂದೆ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಮಂದಿ ಇವರನ್ನು ಹುಡುಕಿಕೊಂಡು ಜಮೀನಿನ ಬಳಿ ತೆರಳಿದಾಗ ಇಬ್ಬರೂ ಒಂದೇ ಹಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

Read More