Author: AIN Author

ಪ್ರೇಮಿಗಳ ದಿನವನ್ನು ಪ್ರೇಮಿಗಳಿಗೆ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಪ್ರೇಮಿಗಳ ದಿನದಂದು ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರೇಮಿಗಳ ದಿನಾಚರಣೆ ಫೆಬ್ರವರಿ 7 ರಿಂದ ಆರಂಭವಾಗಿದ್ದು, ಅದರಲ್ಲಿ ಅತ್ಯಂತ ವಿಶೇಷ ದಿನ ಫೆಬ್ರವರಿ 14. ಈ ದಿನದಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ https://ainlivenews.com/wpl-starts-from-today-gujarat-challenge-to-rcb-in-the-first-match/ ಫೆಬ್ರವರಿ 14ರಂದು ಜಗತ್ತಿನೆಲ್ಲೆಡೆ ವ್ಯಾಲೆಂಟೈನ್ಸ್​ ಡೇ ಆಚರಿಸಲಾಗುತ್ತದೆ. ಪ್ರೇಮಿಗಳ ದಿನಾಚರಣೆಯನ್ನು ಯುವ ಜೋಡಿಗಳು ಸಂಭ್ರಮಿಸುತ್ತಾರೆ. ಪ್ರತಿ ಜೀವಕ್ಕೂ ಇಲ್ಲಿ ಇನ್ನೊಂದು ಜೀವದ ಆಸರೆ. ನೋವು – ನಲಿವುಗಳನ್ನು ಹಂಚಿಕೊಳ್ಳುವುದಕ್ಕೆ ಪ್ರೇಮಿಗಳ ದಿನವೊಂದು ಸಂಕೇತ. ಮಲ್ಲಿಗೆ ಮೊಗ್ಗು ಅರಳಿ ತನ್ನ ಸುಗಂಧವನ್ನು ಸೂಸುವಂತೆ ತಿಳಿ ಬಿಳಿ ಬಣ್ಣದಿಂದ ಕಣ್‌ ಸೆಳೆಯುವಂತೆ ಪ್ರೇಮಿಗಳಿಗಿಂದು ವಿಶೇಷ ದಿನ ಪ್ರೀತಿ ಯಾರಿಗೆ ಯಾವಾಗ ಬೇಕಾದರೂ ಹುಟ್ಟಬಹುದು. ಕೆಲವರಿಗೆ ದೇಹ ಸೌಂದರ್ಯ ಇಷ್ಟ. ಇನ್ನು ಕೆಲವರು ಅವರ ಗುಣಕ್ಕೆ ಫಿದಾ ಆಗುತ್ತಾರೆ, ಅದು ಹುಡುಗ ಆಗಿರಬಹುದು… ಹುಡುಗಿಯೂ ಆಗಿರಬಹುದು. ಒಂದಷ್ಟು ಮಂದಿ ತಮ್ಮ ಸೊಬಗಿನಿಂದಲೇ ಆಕರ್ಷಿತರಾಗುತ್ತಾರೆ. ನೀವು ಪ್ರೀತಿಯಲ್ಲಿ ಬಿದ್ದಾಗ ಮೆದುಳಿನಲ್ಲಿ ಸಾಕಷ್ಟು ಪ್ರಕ್ಷುಬ್ಧತೆ ಇರುತ್ತದೆ.…

Read More

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇಂದಿನಿಂದ WPL ಆರಂಭವಾಗಲಿದೆ. 2024ರ ಆವೃತ್ತಿಯ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳು ಮಹಿಳಾ ಪ್ರೀಮಿಯರ್‌ ಲೀಗ್‌ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ. https://ainlivenews.com/why-dolly-dhananjays-wedding-is-in-mysore-this-is-strong-reason/ ರಾತ್ರಿ 7:30ಕ್ಕೆ ಗುಜರಾತ್‌ನ ವಡೋದರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಲಿದೆ. ಇದರೊಂದಿಗೆ ಭಾರತದ ಉದಯೋನ್ಮುಖ ಕ್ರಿಕೆಟ್‌ ಪ್ರತಿಭೆಗಳ ಪೋಷಣೆಗೆ ವೇದಿಗೆ ಸಜ್ಜುಗೊಂಡಿದೆ. ಪ್ರತಿ ಡಬ್ಲ್ಯೂಪಿಎಲ್‌ ಋತುವಿನಲ್ಲಿ, ಉದಯೋನ್ಮುಖ ಭಾರತೀಯ ಆಟಗಾರ್ತಿಯರ ಪಟ್ಟಿ ಬೆಳೆಯುತ್ತಲೇ ಇದೆ. ಅಲಿಸ್ಸಾ ಹೀಲಿ, ಸೋಫಿ ಮೊಲಿನೆಕ್ಸ್‌ ಮತ್ತು ಕೇಟ್‌ ಕ್ರಾಸ್‌ ಅವರಂತಹ ವಿದೇಶಿ ತಾರೆಯರು ಗಾಯಗಳಿಂದಾಗಿ ಈ ಆವೃತ್ತಿಯಿಂದ ಹೊರಗುಳಿದಿರುವುದರಿಂದ, ಮುಂಬರುವ ಋತುವು ಅನುಭವಿ ದೇಶೀಯ ಆಟಗಾರ್ತಿಯರಿಗೆ ಮತ್ತು ಹೊಸ ಪ್ರತಿಭೆಗಳಿಗೆ ಮಿಂಚಲು ಸುವರ್ಣಾವಕಾಶ ಕಲ್ಪಿಸುತ್ತದೆ. ಕಳೆದ ಬಾರಿಯ ಚಾಂಪಿಯನ್‌ ಆರ್‌ಸಿಬಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಕಠಿಣ ಸವಾಲನ್ನು ಎದುರಿಸುತ್ತಿದೆ. ಕಳೆದ ಋತುವಿನ ಪ್ರಮುಖ ಆಟಗಾರ್ತಿಯರಾದ ಆಲ್‌ರೌಂಡರ್‌ ಸೋಫಿ ಡಿವೈನ್‌, ಆರೋಗ್ಯಕ್ಕೆ ಆದ್ಯತೆ ನೀಡಲು ಕ್ರಿಕೆಟ್‌ನಿಂದ ವಿರಾಮ…

Read More

ಕನ್ನಡಿಗರ ಅಚ್ಚು ಮೆಚ್ಚಿನ ನಟ ಡಾಲಿ ಧನಂಜಯ ವಿವಾಹ ಬಂಧಿಯಾಗಲು ರೆಡಿಯಾಗಿದ್ದಾರೆ. ವೈದ್ಯೆ ಧನ್ಯತಾ ಜೊತೆಗೆ ಹಸೆಮಣೆ ಏರುತ್ತಿದ್ದಾರೆ. ಅಂದಹಾಗೆ ಇದೇ ಫೆಬ್ರವರಿಯಲ್ಲಿ ಈ ಜೋಡಿ ಮದುವೆಯಾಗಲು ನಿಶ್ಚಯಿಸಿದ್ದು, ಮೈಸೂರಿನಲ್ಲಿ ವಿವಾಹವಾಗಲಿದ್ದಾರೆ. https://ainlivenews.com/forest-attack-death-of-a-mercenary-woman/ ಸದ್ಯ ಚಂದನದಲ್ಲಿ ಮದುವೆ ಸಂಭ್ರಮ ನಡೀತಿದೆ. ಕನ್ನಡದ ಅಪ್ಪಟ ಪ್ರತಿಭೆ ಡಾಲಿ ಧನಂಜಯ್ ವಿವಾಹ ಸಂಭ್ರಮ ಶುರುವಾಗಿದೆ. ಡಾಲಿ ಧನಂಜಯ್ ಅವರು ಡಾಕ್ಡರ್ ಧನ್ಯತಾ ಅವರ ಕೈ ಹಿಡಿತಿದ್ದಾರೆ.. ಈಗಾಗಲೇ ಎರಡು ಕುಟುಂಬಗಳಲ್ಲೂ ಕೂಡ ಮದುವೆ ಸಂಭ್ರಮ ಕಳೆಕಟ್ಟಿದೆ. ಧನಂಜಯ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಒಂದು ರೀತಿ ಹಬ್ಬದ ವಾತಾವರಣವೇ ನಡೀತಿದೆ.. ಡಾಲಿ ಕುಟುಂಬದ ಜೊತೆಗೆ ಇಡೀ ಊರೇ ಸಂಭ್ರಮದಲ್ಲಿ ಭಾಗಿಯಾಗಿದೆ.. ಮದುವೆಗೂ ಮುನ್ನ ಕುಟುಂಬದ ಸಂಪ್ರದಾಯದಂತೆ ಡಾಲಿ ಧನಂಜಯ್ ಕೊಂಡು ಹಾಯ್ದಿದ್ದಾರೆ.. ಹೌದು, ಮದುವೆ ಶಾಸ್ತ್ರದ ಆರಂಭ ಮನೆದೇವರ ಪೂಜೆಯೊಂದಿಗೆ ಆರಂಭಗೊಂಡಿದೆ. ಮೊದಲಿಗೆ ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದಿದ್ದಾರೆ.. ಬಳಿಕ ಮನೆಯಲ್ಲಿ ಮನೆದೇವರ ಪೂಜೆಯನ್ನು ಸಲ್ಲಿಸಿದ್ದಾರೆ.. ಗೋಲ್ಡನ್ ಕಲರ್ ಶರ್ಟ್ ಮತ್ತು ಪಂಚೆಯಲ್ಲಿ…

Read More

ಮಡಿಕೇರಿ:- ಚನ್ನಂಗೊಲ್ಲಿ ಗ್ರಾಮದಲ್ಲಿ ಕಾಡಾನೆಯೊಂದರ ದಾಳಿಗೆ ಸಿಲುಕಿ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಜರುಗಿದೆ. https://ainlivenews.com/indian-post-department-gave-a-special-gift-to-dolly-dhananjays-wedding-invitation-card/ ಜಾನಕಿ (52) ಮೃತ ಮಹಿಳೆ. ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷಕ್ಕೆ ಕೊನೆಯೇ ಇಲ್ಲದಂತೆ ಅಗಿದೆ. ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವನ್ಯಜೀವಿಗಳ ಹಾವಳಿಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಸಮಸ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಈ‌ ನಡುವೆ ದಕ್ಷಿಣ ಕೊಡಗಿನಲ್ಲಿ ಕಾಡಾನೆಗಳ ಹಾವಳಿ ತಾರಕಕ್ಕೇರಿದೆ ಚನ್ನಂಗೊಲ್ಲಿ ಗ್ರಾಮದ ಬಳಿಯ ಕಾಫಿ ತೋಟವೊಂದರಲ್ಲಿ ಕಾರ್ಯನಿರ್ವಹಿಸಿ ಸಂಜೆ ಮನೆಗೆ ಮರಳುವ ಸಂದರ್ಭದಲ್ಲಿ ಮಹಿಳೆ ಮೇಳೆ ಕಾಡಾನೆ ದಿಢೀರ್ ದಾಳಿ ಮಾಡಿದೆ. ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಜಾನಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ

Read More

ಕೊಪ್ಪಳ:- ಕೊಪ್ಪಳ ಪೊಲೀಸರು ಕಾರ್ಯಚರಣೆ ನಡೆಸಿ ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ, ವಂಚಿಸುತ್ತಿದ್ದ ಕಿಲಾಡಿಯನ್ನು ಅರೆಸ್ಟ್ ಮಾಡಿದ್ದಾರೆ. https://ainlivenews.com/current-here-is-a-list-of-powerless-areas-in-these-areas-of-bangalore/ ಜೈಭೀಮ್ ಪಡಕೋಟಿ ಆರೋಪಿ. ಈತ ಮ್ಯಾಟ್ರಿಮೋನಿಯಲ್ಲಿ ಪರಿಚಯಿಸಿಕೊಂಡು ಮದುವೆ ಆಗುವುದು. ನಂತರ ಯುವತಿ ಕುಟುಂಬದವರಿಗೆ ಇಲ್ಲಸಲ್ಲದ ಆಸೆ ಹುಟ್ಟಿಸಿ ಹಣ ಪೀಕಿ, ಕ್ಯಾನಿನೋದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಕೊಪ್ಪಳ ಜಿಲ್ಲೆಯ ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ, ಪೊಲೀಸರು ವಂಚಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತನಿಗೆ ಮ್ಯಾಟ್ರಿಮೋನಿ ಆದಾಯದ ಮೂಲ. ಕ್ಯಾಸಿನೋ ಹಣ ಬಳಕೆಯ ವೇದಿಕೆ ಎಂಬ ವಿಷಯ ಬೆಳಕಿಗೆ ಬಂದಿದೆ. ಜೈಭೀಮ್ ವಿರುದ್ದ ರಾಜ್ಯದ 9 ಠಾಣೆಯಲ್ಲಿ ಕೊಲೆ ಸೇರಿ ಮಹಿಳೆಯರಿಗೆ ವಂಚಿಸಿದ 11 ಪ್ರಕರಣ ದಾಖಲಾಗಿವೆ. ಆ್ಯಪ್‌ನಲ್ಲಿ ಅನೇಕ ಯುವತಿಯರ ಪ್ರೊಪೈಲ್ ಚೆಕ್ ಮಾಡಿ, ನಂಬರ್ ಪಡೆದು ವಂಚನೆ ಮಾಡುವುದು ಈತನ ಕಾಯಕ. ಹೀಗೆಯೇ ಕೊಪ್ಪಳ ತಾಲೂಕಿನ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ನಂತರ ಅವರ ಕುಟುಂಬದ ಬೆನ್ನು ಬಿದ್ದು 2021ರಲ್ಲಿ ಮದುವೆಯಾಗಿದ್ದನು. ಮದುವೆಯಾಗಿ ಕೆಲ ದಿನಕ್ಕೆ ಪತ್ನಿಗೆ ಕಿರುಕುಳ…

Read More

ಬೆಂಗಳೂರು:- ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/pears-or-banana-for-good-health-in-which-the-best/ ಇಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೂ ಎಲಿಟಾ ಪ್ರೋಮೊನೇಡ್ ಅಪಾರ್ಟ್ ಮೆಂಟ್, ಕೆಆರ್ ಲೇಔಟ್, ಶಾರದಾನಗರ, ಚುಂಚುನ್ ಘಟ್ಟ ಮತ್ತು ಉಪ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಧ್ಯಾಹ್ನ 12 ಗಂಟೆವರೆಗೆ ಶಾಂತಿನಿಕೇತನ ರೆಸಿಡೆನ್ಸೀಯಲ್ ಅಪಾರ್ಟ್‌ಮೆಂಟ್, ಬ್ರಿಗೇಡ್ ಲೇಕ್ ಫ್ರಂಟ್ ರೆಸಿಡೆನ್ಸೀಯಲ್ ಅಪಾರ್ಟ್‌ಮೆಂಟ್, ಟೋಟಲ್ ಎನ್ವಿರಾನ್‌ಮೆಂಟ್ ಅಪಾರ್ಟ್‌ಮೆಂಟ್, ಇಪಿಐಪಿ ಇಂಡಸ್ಟ್ರೀಯಲ್ ಏರೀಯಾ, ಸದರಮಂಗಳ ಇಂಡಸ್ಟ್ರೀಯಲ್ ಏರೀಯಾ, ನಲ್ಲರಹಳ್ಳಿ ವಿಲೇಜ್, ಪಟ್ಟಂದೂರು ಅಗ್ರಹಾರ, ಇಸಿಸಿ ರೋಡ್, ಸಿದ್ದಾಪುರ ರೋಡ್, ಐಟಿಪಿಎಲ್ ಮುಖ್ಯ ರಸ್ತೆಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಶನಿವಾರ ಎಲ್ಲೆಲ್ಲಿ ಕರೆಂಟ್‌ ಕಟ್‌?: ಫೆಬ್ರವರಿ 15ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಶ್ರೀನಗರ, ಹೊಕೆರೆಹಳ್ಳಿ, ಪಿಇಎಸ್ ಎಂಜಿನಿಯರಿಂಗ್ ಕಾಲೇಜು,…

Read More

ಬಾಲ್ಯದಲ್ಲಿ ಎಷ್ಟೊಂದು ಸೀಬೆ ಹಣ್ಣು ಅಥವಾ ಪೇರಳೆ ತಿಂದಿದ್ದೇವೆ ಅನ್ನೋದಕ್ಕೆ ಲೆಕ್ಕವೇ ಇಲ್ಲ. ಎಲ್ಲರೂ ಅಂದು ಕೊಂಡಂತೆ ಸೀಬೆ ಹಣ್ಣು ಕೇವಲ ತಿನ್ನಲು ಮಾತ್ರ ರುಚಿಯಾದ ಹಣ್ಣುಲ್ಲ. ಇದರಿಂದ ಸ್ಕಿನ್, ಕೂದಲಿಗೂ ಉತ್ತಮ ಪೋಷಣೆ ದೊರೆಯುತ್ತದೆ. ಹೌದು ತಿನ್ನುವುದರ ಜೊತೆಗೆ ಸೀಬೆ ಹಣ್ಣನ್ನು ಈ ರೀತಿಯಾಗಿ ಬಳಸಿದರೆ ಅದರಿಂದ ಮತ್ತೆ ಹೊಸ ಸ್ಕಿನ್ ಕೇರ್ ಉತ್ಪನ್ನಗಳತ್ತ ಮುಖ ಮಾಡೋದೆ ಮರೆತು ಬಿಡೋದು ಗ್ಯಾರಂಟಿ. ಬಾಳೆಹಣ್ಣು ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿ ಹಣ್ಣು ಎಂದು ಪರಿಗಣಿಸಲಾಗಿದೆ. ಬಾಳೆಹಣ್ಣು ನಿಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಬಾಳೆಹಣ್ಣುಗಳು ಯಾವುದೇ ಋತುವಿನಲ್ಲಿ ಸುಲಭವಾಗಿ ಲಭ್ಯವಿರುತ್ತವೆ ಮತ್ತು ನೀವು ಅವುಗಳನ್ನು ಯಾವುದೇ ರೀತಿಯಲ್ಲಿ ಬಳಸಬಹುದು, ಎಲ್ಲರೂ ದಿನನಿತ್ಯ ಸೇವಿಸುವ ಹಣ್ಣುಗಳಲ್ಲಿ ಬಾಳೆಹಣ್ಣು ಮತ್ತು ಪೇರಳೆ ಕೂಡ ಸೇರಿದೆ. ಎರಡೂ ಹಣ್ಣುಗಳು ಕೂಡ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹಲವಾರು ಪ್ರಯೋಜನಗಳಿವೆ. ಆದರೆ ಪೇರಳೆ ಹಾಗೂ ಬಾಳೆಹಣ್ಣು, ಈ ಎರಡರಲ್ಲಿ ಆರೋಗ್ಯಕ್ಕೆ ಉತ್ತಮವಾದದ್ದು ಯಾವುದು ಎನ್ನುವ ಗೊಂದಲವಿರಬಹುದು?…

Read More

ಕೊಪ್ಪಳ:-ಕುಷ್ಟಗಿ ತಾಲೂಕಿನ ನಂದಾಪೂರ ಕ್ರಾಸ್ ಬಳಿ ಇಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ. https://ainlivenews.com/fire-to-d-two-hungry-a-calf-fire/ ಸಿಮೆಂಟ್ ಲಾರಿ ಹಾಗೂ ಬುಲೆರೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನಗೊಂಡಿದ್ದಾರೆ. 25 ವರ್ಷದ ಸಿದ್ಧಪ್ಪ ಪೊಲೀಸಗೌಡರ, 26 ವರ್ಷದ ಅಂಜನಪ್ಪ ಪೊಲೀಸ್‌ಗೌಡರ ಮೃತರು. ಗುರುವಾರ ಬೆಳಿಗ್ಗೆ ಸುಮಾರು 4 ಗಂಟೆಗೆ ಸಿಮೆಂಟ್ ಮಿಕ್ಸರ್ ಯಂತ್ರದ ಲಾರಿಯನ್ನು ತೆಗೆದುಕೊಂಡು ಕುಷ್ಟಗಿ ಕಡೆಗೆ ಹೊರಟಿದ್ದರು. ಇದೇ ವೇಳೆ ಕುಷ್ಟಗಿ ತರಕಾರಿ ಮಾರುಕಟ್ಟೆಗೆ ಸೌತೆಕಾಯಿ ಹಾಕಿ, ಲಿಂಗಸಗೂರು ಕಡೆಗೆ ಹೊರಟಿದ್ದ ಬುಲೆರೋ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ಬುಲೆರೋ ವಾಹನಕ್ಕೆ ಬೆಂಕಿ ಆವರಿಸಿದ್ದು, ಇಬ್ಬರು ಸಜೀವದಹನವಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

Read More

ಗದಗ:- ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಶೆಡ್ ನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದ ಎರಡು ಆಕಳು ಹಾಗೂ ಕರು ಸುಟ್ಟುಕರಕಲಾದ ಘಟನೆ ಜರುಗಿದೆ. https://ainlivenews.com/use-coconut-oil-like-this-you-will-have-knee-length-hair-100-result/ ನವೀನ ನವಲೆ ಎನ್ನುವ ರೈತನಿಗೆ ಸೇರಿದ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿ ಕೊಳ್ಳುತ್ತಿದ್ದಂತೆ ಎರಡು ಆಕಳು, ಒಂದು ಕರು ಸಾವನ್ನಪ್ಪಿದೆ. ಅಲ್ಲದೇ ಎರಡು ಟ್ರ್ಯಾಕ್ಟರ್ ಹೊಟ್ಟು, 10 ಚೀಲ್ ಈರುಳ್ಳಿ, ಹಾಗೂ ಶೆಡ್ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಸುಮಾರು 25 ಲಕ್ಷಕ್ಕೂ ಹೆಚ್ಚು ಹಾನಿ ಆಗಿದ್ದು, ರೈತ ಕುಟುಂಬ ಕಂಗಾಲಾಗಿದೆ.

Read More

ಮಡಿಕೇರಿ:- ಬಾಣಂತಿ ಓರ್ವರು, 14 ದಿನದ ಮಗು ಹಾಗೂ ಪತಿಯನ್ನು ತ್ಯಜಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿಯಲ್ಲಿ ಜರುಗಿದೆ. https://ainlivenews.com/use-coconut-oil-like-this-you-will-have-knee-length-hair-100-result/ ಕಾವೇರಮ್ಮ ನೇಣಿಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ದಿನೇಶ್-ಕಾವೇರಮ್ಮ ಮದುವೆಯಾಗಿ ಸುಮಾರು 4 ವರ್ಷಗಳು ಕಳೆದಿದೆ. ಫೆ.12 ರಂದು ಪತಿ ದಿನೇಶ್ ತಮ್ಮ ಮನೆಯ ಸನೀಹದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮನೆಯಲ್ಲಿ ಮಗುವಿನ ಕೂಗಾಟ ಕೇಳಿ ಬಂದು ನೋಡಿದ್ದಾರೆ. ಕಾವೇರಮ್ಮ ಸ್ನಾನದ ಕೋಣೆಯಲ್ಲಿ ಸೀರೆಯಿಂದ ನೇಣುಬಿಗಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More