Author: AIN Author

ಮೈಸೂರು:- ಮೈಸೂರಿನ ಮೇಗಳಾಪುರದಲ್ಲಿ ಪ್ರೇಯಸಿ ದೂರವಾಗಿದ್ದಕ್ಕೆ ಲವರ್ ಬಾಯ್​ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. https://ainlivenews.com/power-cut-in-many-areas-of-bangalore-today-2/ ವಿನಯ್ ಮೃತ ದುರ್ದೈವಿ. ವಿನಯ್ ಬಾಲ್ಯದಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ವಿನಯ್‌ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಲವ್ ಲೋಕದಲ್ಲಿ ಮುಳುಗಿ ಹೋಗಿದ್ರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದ್ರೆ, ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಅದು ಕುಟುಂಬಸ್ಥರಿಗೂ ಗೊತ್ತಾಗಿ ಅಂತಿಮವಾಗಿ ವಿನಯ್​ನಿಂದ ದೂರವಾಗಿದ್ದಾಳೆ. ಇದರಿಂದ ಮನನೊಂದು ವಿನಯ್​ ಪ್ರಾಣ ಕಳೆದುಕೊಂಡಿದ್ದಾನೆ ಯುವತಿ ಬೇರೆಯವನನ್ನು ಮದುವೆಯಾದರೂ ವಿನಯ್, ಆಕೆಯನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಯುವತಿ ಸಹ ತಾನು ಬೇರೆಯವನನ್ನು ಮದುವೆಯಾದರೂ ವಿನಯ್ ಜೊತೆ ಸಂಪರ್ಕ ಹೊಂದಿದ್ದಳು. ಇಬ್ಬರು ಹಾಯಾಗಿ ಸುತ್ತಾಡಿಕೊಂಡಿದ್ದರು. ಮದುವೆ ನಂತರವೂ ಆಕೆ ವಿನಯ್ ಜೊತೆ ಸುತ್ತಾಟ ಮುಂದುವರಿಸಿದ್ದಳು. ಸಾಲದಕ್ಕೆ ಎರಡ್ಮೂರು ಬಾರಿ ಆಕೆ ಮನೆ ಬಿಟ್ಟು ವಿನಯ್ ಜೊತೆ ಹೋಗಿದ್ದಳು. ಮನೆಯವರು ಹುಡುಕಿ ಕರೆದುಕೊಂಡು ಬಂದಿದ್ದರು.‌ ಈ ಸಂಬಂಧ ಪೊಲೀಸ್…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/i-dont-go-looking-for-any-place-i-dont-get-what-i-look-for-dkshi/ ಬೆಂಗಳೂರಿನ ವಿನಾಯಕ ಲೇಔಟ್, ಅಜಿತ್ ಲೇಔಟ್, ಟಿಸಿ ಪಾಳ್ಯ ಸಿಗ್ನಲ್, ಭಟ್ಟರಹಳ್ಳಿ, ಚಿಕ್ಕಬಸವನಪುರ ಮತ್ತು ಯರಪ್ಪನ ಪಾಳ್ಯ, ಜೈ ಭುವನೇಶ್ವರ ಲೇಔಟ್, ಕೆಆರ್ ಪುರಂ ಮುಖ್ಯರಸ್ತೆ, ದೀಪಾ ಆಸ್ಪತ್ರೆ ಸುತ್ತಮುತ್ತ, ಕುವೆಂಪು ನಗರ, ರಾಮಮೂರ್ತಿ ನಗರ, ಎನ್‌ಆರ್‌ಐ ಲೇಔಟ್ ರಾಮಮೂರ್ತಿ ನಗರ, ಸಿಎಎನ್‌ವಿ ಲೇಔಟ್ ರಾಮಮೂರ್ತಿ ಮೇನ್ ರಸ್ತೆ, ರಾಘವೇಂದ್ರ ವೃತ್ತ, ಆಲ್ಫಾ ಗಾರ್ಡನ್, ಸ್ವತಂತ್ರ ನಗರ, ರಾಜೇಶ್ವರಿ ಲೇಔಟ್, ಮುನೇಶ್ವರ ಲೇಔಟ್. ಕೋ ಕೋನಟ್ ಗಾರ್ಡನ್, ಬೆಥೆಲ್ ನಗರ, ಬೃಂದಾವನ ಲೇಔಟ್, ಕೆಆರ್‌ಆರ್ ಲೇಔಟ್, ಕೇಂಬ್ರಿಡ್ಜ್ ಲೇಔಟ್, ಕೇಂಬ್ರಿಡ್ಜ್ ಗಾರ್ಡನ್ ಲೇಔಟ್ ಮತ್ತು ವಾರಣಾಸಿ ಲೇಕ್, ಗ್ಯಾಸ್ ಗೌಡೌನ್ ಮುಖ್ಯ ರಸ್ತೆ, ಎನ್‌ಆರ್‌ಐ 5 ನೇ ಮುಖ್ಯ ರಸ್ತೆ, ಗ್ರೀನ್‌ವುಡ್ ಲೇಔಟ್, ಪ್ರತಿಷ್ಠಾನ ಲೇಔಟ್, ಗ್ರೀನ್ ಗಾರ್ಡನ್ ಲೇಔಟ್, ಜೆಕೆ ಹಳ್ಳಿ, ಸನ್‌ಶೈನ್‌ ಲೇಔಟ್, ಗಾರ್ಡನ್ ಸಿಟಿ ಕಾಲೇಜು. ಲೇಕ್…

Read More

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗೆ ಬ್ರೇಕ್ ಹಾಕುವ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಇಲ್ಲಿಯವರೆಗೆ ಯಾವುದೇ ಸ್ಥಾನವನ್ನು ಹುಡುಕಿಕೊಂಡು ಹೋಗುವನಲ್ಲ, ಹುಡುಕಿಕೊಂಡು ಹೋದರೂ ಸಿಗುವ ಸ್ಥಾನ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು. https://ainlivenews.com/actor-saif-ali-khan-assault-case-what-actress-shilpa-shetty-said/ ಈ ಬಗ್ಗೆ ಮಾತನಾಡಿದ ಅವರು, ಇಲ್ಲಿಯ ನನ್ನ ಕೆಲಸ ಗುಣ ,ಸಂಘಟನೆ ನೋಡಿ ಪಾರ್ಟಿಯಿಂದ ಆಫರ್ ಮಾಡುತ್ತಿದ್ದರು, ನನಗೆಯೇ ಹುಡುಕಿ ಹೋಗಿಲ್ಲ, ಹುಡುಕಿಕೊಂಡು ಹೋದರು ಸಿಗುವ ಸ್ಥಾನವಿಲ್ಲ, ಯಾರಿಗೇ ಆದ್ರೂ ಆಫರ್ ಮಾಡಬೇಕು ನಾವಾಗೆ ಹೋದರೆ ಸಿಗಲ್ಲ ಎಂದು ಟೀಕಿಸಿದರು. ನಮ್ಮ ಪಕ್ಷದಲ್ಲಿ ಆಕಾಂಕ್ಷಿಯಾರಲ್ಲಿ ನಾಯಕತ್ವ ಗುಣ ,ಸಂಘಟನೆ ನೋಡಿ ಪಾರ್ಟಿಯಲ್ಲಿ ಆಫರ್ ಮಾಡ್ತಾರೆ, ಬೇರೆ ಪಾರ್ಟಿಗಳಲ್ಲಿ ಗೊತ್ತಿಲ್ಲ, ಒಂದು ವೇಳೆ ಸ್ಥಾನ ಸಿಗದಿದ್ದರೆ ಆತನಲ್ಲಿ ಏನೋ ಸಮಸ್ಯೆ ಇದೇ ಎಂದರ್ಥ, ಹೀಗಾಗಿ ನಾವಾಗೆ ಅಧಿಕಾರ ಕೇಳಿಕೊಂಡು ಹೋಗಬಾರದು ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು. ಪಕ್ಷದಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳಲು ಗಾಂಧಿ,ನೆಹರೂ, ಇಂದಿರಾ ಗಾಂಧಿ ಕುಳಿತ ಜಾಗದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕುಳಿತಿದ್ದಾರೆ.…

Read More

ರಾಯಚೂರು:- ನಟ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಕೇಸ್ ಗೆ ಸಂಬಧಪಟ್ಟಂತೆ ನಟಿ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainlivenews.com/ct-ravi-i-trust-cid-ct-ravi/ ಈ ಸಂಬಂಧ ಮಾತನಾಡಿದ ಅವರು, ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆ ಕೇಳಿ ಭಾರೀ ಶಾಕ್ ಆಗಿದೆ. ಅವರು ಬೇಗ ಗುಣಮುಖರಾಗುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದರು. ರಾಯಚೂರಿಗೆ ಬಂದಿರುವುದು ನಾನು ನಮ್ಮ ಊರಿಗೆ ಬಂದಂತೆ ಆಗಿದೆ. ನನ್ನ ಕನ್ನಡದ ಮುಂದಿನ ಸಿನಿಮಾ ಡೆವಿಲ್ ಹಾಗೂ ಕೆಡಿ ಬರುತ್ತಿವೆ. ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಬಗ್ಗೆ ನನಗೆ ಭಾರೀ ಕುತೂಹಲ ಇದೆ. ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಜೊತೆಗೆ ನಟಿಸಿದ್ದಾರೆ ಎಂದರು. ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನೋಡಲು ರಾಯಚೂರಿನಲ್ಲಿ ಜನ ಮುಗಿಬಿದ್ದಿದ್ದರು. ನಗರದ ಸ್ಟೇಷನ್ ರಸ್ತೆಯಲ್ಲಿ ಜನರ ನೂಕುನುಗ್ಗಲಿನಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಆಗಿತ್ತು.

Read More

ಬೆಂಗಳೂರು:- ನನಗೆ CID ಮೇಲೆ ವಿಶ್ವಾಸ ಹೋಗಿದೆ ಎಂದು CT ರವಿ ಹೇಳಿದ್ದಾರೆ. https://ainlivenews.com/countdown-to-start-of-wpl-do-you-know-which-team-rcb-will-face-on-which-day/ ಈ ಸಂಬಂಧ ಮಾತನಾಡಿದ ಅವರು, ನನಗೆ ಸಿಐಡಿ ತನಿಖೆಯಲ್ಲಿ ವಿಶ್ವಾಸ ಇಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಕೇಸ್‌ಗೆ ಸಂಬಂಧಿಸಿದಂತೆ ನನಗೆ ಸಿಐಡಿ ನೋಟಿಸ್ ಕೊಟ್ಟಿಲ್ಲ ಎಂದರು. ಸುವರ್ಣಸೌಧದಲ್ಲಿ ಗಲಾಟೆಗೆ ಸಂಬಂಧಿಸಿದಂತೆ ನೋಟಿಸ್ ಕೊಟ್ಟಿದ್ದರು. ಹೋಗಿ ವಿವರಣೆ ಕೊಟ್ಟು ಬಂದಿದ್ದೇನೆ. ಅಲ್ಲಿಯೇ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡುತ್ತೇವೆ ಎಂದರು. ಅದಕ್ಕೆ ನಾನು ಒಪ್ಪಲಿಲ್ಲ. ಮೊದಲು ಸಿಐಡಿ ತನಿಖಾ ವ್ಯಾಪ್ತಿ ಸ್ಪಷ್ಟಪಡಿಸಿ. ಸಭಾಪತಿ ರೂಲಿಂಗ್ ಕೊಟ್ಟ ಮೇಲೆ ತನಿಖೆ ಮಾಡಲು ಬರುತ್ತಾ ಎಂಬುದನ್ನು ಸ್ಪಷ್ಟಪಡಿಸಿ ಅಂದಿದ್ದೆ ಎಂದರು. ಇದು ರಾಜಕೀಯ ಒತ್ತಡದಿಂದ ಮಾಡುತ್ತಿರುವುದು ಸ್ಪಷ್ಟ. ನಾನು ಕೊಟ್ಟ ದೂರಿನ ಎಫ್‌ಐಆರ್ ಆಗಿಲ್ಲ. ಬೇರೆ ತನಿಖೆ ಮಾಡುತ್ತಾರೆ. ನನ್ನ ದೂರಿನ ಎಫ್‌ಐಆರ್ ಏಕೆ ಮಾಡಿಲ್ಲ? ಇದಕ್ಕೆ ಉತ್ತರ ಕೊಡಲಿ. ಸುಳ್ಳು ಕಥೆ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ಹಾಗಾಗಿ ನನಗೆ ಸಿಐಡಿ ತನಿಖೆ ಮೇಲೆ ವಿಶ್ವಾಸ ಇಲ್ಲ ಎಂದು ಕಿಡಿಕಾರಿದರು.

Read More

ಮಹಿಳಾ ಪ್ರೀಮಿಯರ್ ಲೀಗ್​ನ ಮೂರನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಅದರಂತೆ ಫೆಬ್ರವರಿ 14 ರಿಂದ ಈ ಟೂರ್ನಿ ಪ್ರಾರಂಭವಾಗಲಿದ್ದು, ಮಾರ್ಚ್ 11 ರಂದು ಕೊನೆಗೊಳ್ಳಲಿದೆ. ಮೊದಲ ಬಾರಿಗೆ ಈ ಲೀಗ್ ಅನ್ನು ನಾಲ್ಕು ನಗರಗಳಲ್ಲಿ ಆಯೋಜಿಸಲಾಗುತ್ತಿೆ. https://ainlivenews.com/fraud-by-mixing-water-with-pure-milk-by-the-dairy-staff/ ಡಬ್ಲ್ಯುಪಿಎಲ್​ನ ಮೂರನೇ ಆವೃತ್ತಿ ಫೆಬ್ರವರಿ 14 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್​ 15 ರಂದು ನಡೆಯಲ್ಲಿರುವ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆಬೀಳಲಿದೆ. ಈ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ವಡೋದರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕೊಟಂಬಿ ಕ್ರೀಡಾಂಗಣದಲ್ಲಿ ಟೂರ್ನಿಯ ಮೊದಲ ಪಂದ್ಯ ನಡೆಯಲಿದ್ದು, ಅಂದು ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಬಾರಿ ಬಿಸಿಸಿಐ ಡಬ್ಲ್ಯುಪಿಎಲ್ ವ್ಯಾಪ್ತಿಯನ್ನು ವಿಸ್ತರಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆ ಲೀಗ್‌ನ ಮೊದಲ ಸೀಸನ್ ಮುಂಬೈನ ಎರಡು ವಿಭಿನ್ನ ಮೈದಾನಗಳಲ್ಲಿ ಮಾತ್ರ ನಡೆದಿದ್ದರೆ, ಕೊನೆಯ ಸೀಸನ್​ ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆದಿತ್ತು. ಇದೀಗ 4 ಸ್ಥಳಗಳಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ…

Read More

ಚಿಕ್ಕಬಳ್ಳಾಪುರ:- ಡೈರಿ ಸಿಬ್ಬಂದಿಯೇ ಶುದ್ಧ ಹಾಲಿಗೆ ನೀರು ಬೆರಸಿ ವಂಚನೆ ಮಾಡಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. https://ainlivenews.com/metro-commuters-ask-here-variation-in-purple-line-traffic-on-this-day/ ತಾಲೂಕಿನ ಮಾಡಿಕೆರೆ ಹಾಲಿನ ಡೈರಿ ಬಿಎಂಸಿ ಕೇಂದ್ರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಮಾಡಿಕೆರೆ ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಲಿನ ಡಂಪ್ ಟ್ಯಾಂಕ್‌ಗೆ ನೀರು ಕಲಬೆರಕೆ ಮಾಡಿ, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಮೆಗಾ ಡೈರಿಗೆ ಸರಬರಾಜು ಮಾಡಿ ಈಗ ಸಿಕ್ಕಿ ಬಿದ್ದಿದ್ದಾರೆ. ಹಾಲಿನ ಡೈರಿ ಬಿಎಂಸಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಹಾಲಿನ ಮಿಶ್ರಣ ಅಕ್ರಮ ವಿಚಾರ ಬಯಲಾಗ್ತಿದ್ದಂತೆ ಸ್ವತಃ ಚಿಮುಲ್ ಎಂ.ಡಿ ಶ್ರೀನಿವಾಸಗೌಡ ಅಲರ್ಟ್ ಆಗಿದ್ದಾರೆ. ಡೈರಿಯ ಸಹಾಯಕ ಚೇತನ್‌ನನ್ನ ಕೆಲಸದಿಂದ ವಜಾ ಮಾಡಿದ್ದಾರೆ.

Read More

ಬೆಂಗಳೂರು:- ಮೆಟ್ರೋ ಪ್ರಯಾಣಿಕರು ಈ ಸುದ್ದಿ ಗಮನವಿಟ್ಟು ಕೇಳಿ. ಜನವರಿ 19 ರಂದು ನೇರಳೆ ಮಾರ್ಗದ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು BMRCL ಹೇಳಿದೆ. https://ainlivenews.com/chamarajanagar-serial-illegal-explosives-explosion-livestock-condition-critical/ ಜ.19ರ ಬೆಳಗ್ಗೆ 7 ಗಂಟೆಯಿಂದ 10ರವರೆಗೆ ಮೆಟ್ರೋ ಸೇವೆ ಇರಲ್ಲ. ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣ ನಡುವೆ 3 ಗಂಟೆ ಮೆಟ್ರೋ ಸೇವೆ ಇರಲ್ಲ ಎಂದು ತಿಳಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ದಿನಂಕ 19 ರಂದು ಅಂದರೆ ಭಾನುವಾರ ದಂದು ನೇರಳೆ ಮಾರ್ಗದಲ್ಲಿನ ಕಬ್ಬನ್​ ಪಾರ್ಕ್ ಮತ್ತು ಎಂ.ಜಿ ರಸ್ತು ಮೆಟ್ರೋ ನಿಲ್ದಾ ಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಹಾಗಾಗಿ ಕೆಂಪೇಗೌಡ ಮೆಜೆಸ್ಟಿಕ್​​ ಮೆಟ್ರೋ ನಿಲ್ದಾಣ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 07:00 ರಿಂದ 10.00 ರ ವರೆಗೆ ಮೂರು ಗಂಟೆಗಳ ಕಾಲ ಮೆಟ್ರೋ ರೆೈಲು ಸೇವೆ ಇರುವುದಿಲ್ಲ. ನೇರಳೆ ಮಾರ್ಗದ ಇತರ ವಿಭಾಗಗಳಲ್ಲಿ ಬರುವ,…

Read More

ಚಾಮರಾಜನಗರ:: ಸರಣಿ ಅಕ್ರಮ ಸಿಡಿಮದ್ದು ಸ್ಫೋಟಕ್ಕೆ ಜಾನುವಾರುಗಳ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿ ಹೆಚ್ಚಾಗ್ತಾ ಇರುವುದು ಆತಂಕಕಾರಿ ವಿಷಯವಾಗಿದೆ. https://ainlivenews.com/chamarajanagar-the-attack-of-jungles-destroys-the-crops-of-farmers/ ಇಂದು ಮುಂಜಾನೆ ಹನೂರು ತಾಲೂಕಿನ ಆರ್.ಎಸ್.ದೊಡ್ಡಿ ಗ್ರಾಮದ ನಾಗಣ್ಣ ಎಂಬುವವರ ಹಸುವು ಸಿಡಿಮದ್ದು ಸ್ಪೋಟಕ ಸಿಡಿದು ಗಂಭೀರವಾದ ಗಾಯಗಳಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಹನೂರು ತಾಲುಕಿನ ಸುತ್ತಾಮುತ್ತಾ ಕಳೆದ ಹದಿನೈದು ದಿನಗಳಿಂದಲೂ ಈ ಘಟನೆಗಳು ಮರುಕಳುಹಿಸುತ್ತಿವೆ ಹಾಗೂ ಇತ್ತೀಚೆಗೆ ಕೆಲವು ವಿಕೃತ ಮನಸ್ಸಿನವರಿಗೆ ಮೂಕ ಪ್ರಾಣಿಗಳನ್ನು ಹಿಂಸಿಸುವುದೇ ಕಸುಬಾಗಿ ಬಿಟ್ಡಿದೆ. ಹನೂರು ತಾಲೂಕಿನ ಸುತ್ತಮುತ್ತಲಿನಲ್ಲಿ ಇದೀಗ ಹಂದಿಗೆ ಇರಿಸಿದ್ದ ಅಕ್ರಮ ಸಿಡಿಮದ್ದು ಸ್ಪೊಟಗೊಂಡು ಮನುಷ್ಯರಿಗೆ ಅಮೃತ ನೀಡುವ ಹಸುಗಳು ಗಂಭೀರ ಗಾಯಗಳಾಗುತ್ತಿರುವ ಘಟನೆ ಸತತವಾಗಿ ನಡೆಯುತ್ತಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಿಡಿಗೇಡಿಗಳು ಹಸುಗಳ ಕೆಚ್ಚಲು ಕತ್ತರಿಸಿದ ಘಟನೆ ಮಾಸುವ ಮುನ್ನವೇ ಹನೂರಲ್ಲಿ ಸ್ಪೋಟಕ ಸಿಡಿದು ಮುದ್ದಾದ ಹಸುವಿನ ಮುಖ ಹಾನಿಗೊಳಗಾಗಿ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಈ ಬಗ್ಗೆ ಎಚ್ಚೆದ್ದು…

Read More

ಚಾಮರಾಜನಗರ: ಕಾಡಿನಿಂದ ಹೊರ ಬರುತ್ತಿರುವ ಕಾಡಾನೆಗಳ ಗುಂಪು ಕಳೆದ ಒಂದು ವಾರದಿಂದ ರೈತರ ಫಸಲುಗಳನ್ಜು ನಾಶ ಪಡಿಸುತ್ತಿರುವ ಘಟನೆ ಮುಂದುವರಿದಿದೆ. https://ainlivenews.com/defamation-case-against-bjp-temporary-relief-for-congress-leader-rahul-gandhi/ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬೈಲೂರು ಸುತ್ತಾಮುತ್ತಾ ಕಾಡಾನೆಗಳ ಉಪಟಳ ಮಿತಿಮೀರಿದೆ.. ಒಂದು ವಾರದ ಹಿಂದೆ ಮಕ್ನಾ ಆನೆ ದಾಳಿಯಿಂದ ರಾತ್ರೋ ರಾತ್ರಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಫಸಲು ರಕ್ಷಿಸಿಕೊಳ್ಳಲು ಹೈರಾಣಾಗಿದ್ರು‌ ಇದೀಗ ಮೂರು ಆನೆಗಳ ಗುಂಪು ರೈತರ ನಿದ್ರೆ ಕೆಡಿಸುತ್ತಿವೆ‌. ಗುಂಪು ಆನೆಗಳು ರೈತರು ಬೆಳೆದ ಮುಸುಕಿನ ಜೋಳ ಸೇರಿದಂತೆ ರೈತರ ಫಸಲನ್ನು ಹಾಳು ಮಾಡುತ್ತಿವೆ‌ ನಿನ್ನೆ ತಡ ರಾತ್ರಿ ಹನೂರು ತಾಲೂಕು ಬೈಲೂರು ಗ್ರಾಮ ಪಂಚಾಯತ್ತಿಗೆ ಸೇರಿದ ಹುಣಸೆಪಾಳ್ಯ ಗ್ರಾಮದ ರೈತ ಮಹಿಳೆ ಪ್ರೇಮ ಸದಾನಂದ ಅವರ ಜಮೀನಿಗೆ ತಡ ರಾತ್ರಿ 3 ಆನೆಗಳು ನುಗ್ಗಿ ಜೋಳದ ಬೆಳೆ ನಾಶ ಮಾಡಿದೆ. ಕೂಡಲೆ ಅರಣ್ಯ ಇಲಾಖೆ ಸಿಬ್ಬಂಧಿಗಳು ಆನೆಗಳನ್ನು ಕಾಡಿಗೆ ಓಡಿಸುವಂತೆ ಆ ಭಾಗದ ರೈತರು ಒತ್ತಾಯಿಸಿದ್ದಾರೆ.

Read More