Author: AIN Author

ಮಂಡ್ಯ :- ಮದ್ದೂರು ತಾಲ್ಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿರುವ ಲಕ್ಷ್ಮೀದೇವಿ ಅವರನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶಿಸಿದ್ದಾರೆ. https://ainlivenews.com/lokarpana-to-sri-shivayogi-kartru-gaddu-at-bellavi-kara-math/ ಮದ್ದೂರು ತಾಲ್ಲೂಕಿನ ಕಸಬಾ ಹೋಬಳಿಯ ಭೀಮನಕೆರೆ ಗ್ರಾಮದ ಸರ್ವೆ ನಂಬರ್ 121/3ರ 2 ಎಕರೆ 4 ಗುಂಟೆ ಭೂಮಿಗೆ ಸಂಬಂಧಪಟ್ಟಂತೆ ಕಾಲಂ 11ರಲ್ಲಿದ್ದ ಋಣಭಾರವನ್ನು ತೆಗೆದು ಹಾಕಿ ಕರ್ತವ್ಯ ಲೋಪವೆಸಗಿದ್ದರು. ಈ ಬಗ್ಗೆ ಸಾರ್ವಜನಿಕರು ತಿಂಗಳ ಹಿಂದೆ ಮದ್ದೂರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಶಿಸ್ತುಕ್ರಮಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ಉಪ ವಿಭಾಗಾಧಿಕಾರಿ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದರಿಂದ ಜಿಲ್ಲಾಧಿಕಾರಿಯು ಲಕ್ಷ್ಮೀದೇವಿ ಅವರನ್ನು ಅಮಾನತುಗೊಳಿಸಿ ಆದ್ದೇಶಿಸಿದ್ದಾರೆ.

Read More

ಮಂಡ್ಯ:- ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೊಂದೇಮಾದಿಹಳ್ಳಿ ಗ್ರಾಮದಲ್ಲಿ ಆಟವಾಡುತ್ತಿರುವಾಗ ಬಾಲಕನೋರ್ವ ಅಸಲಿ ಬಂದೂಕು ಎಂದು ತಿಳಿಯದೇ ಫೈರಿಂಗ್ ಮಾಡಿದ ಪರಿಣಾಮ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಜರುಗಿದೆ. https://ainlivenews.com/good-news-for-senior-citizens-traveling-by-train-50-discount-for-women-and-men-what-is-the-eligibility/ ಶಶಾಂಕ್ ಹಾಗೂ ಲಿಪಿಕಾ ದಂಪತಿಯ ಮಗ ಅಭಿಷೇಕ್(3) ಮೃತಪಟ್ಟ ಬಾಲಕ. ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಅವರ ಕೋಳಿ ಫಾರಂನಲ್ಲಿ ಕಳೆದು ಕೆಲವು ವರ್ಷಗಳಿಂದ ಈ ದಂಪತಿ ಕೆಲಸ ಮಾಡುತ್ತಿದ್ದರು. ದಂಪತಿಯನ್ನು ಭೇಟಿಯಾಗಲು ಭಾವಶಂಕರ್ ದಾಸ್ ಹಾಗೂ ಆತನ ಮಗ ಸುದೀಪ್ ದಾಸ್ ಬಂದಿದ್ದರು. ಈ ವೇಳೆ ಮಕ್ಕಳಿಬ್ಬರು ಆಟವಾಡುತ್ತಿದ್ದರು. ಆಟವಾಡುತ್ತಿದ್ದಾಗ ಪರವಾನಗಿ ಪಡೆದು ಇಟ್ಟುಕೊಂಡಿದ್ದ ನರಸಿಂಹಮೂರ್ತಿ ಅವರ ಬಂದೂಕು ಸುದೀಪ್ ಕೈಗೆ ಸಿಕ್ಕಿದ್ದು, ಅಸಲಿ ಬಂದೂಕು ಎಂದು ತಿಳಿಯದೇ ಫೈರಿಂಗ್ ಮಾಡಿದ್ದಾನೆ. ಪರಿಣಾಮ ಅಲ್ಲಿಯೇ ಇದ್ದ ಅಭಿಷೇಕ್ ಹೊಟ್ಟೆಯೊಳಗೆ ಗುಂಡು ಹೊಕ್ಕಿದ್ದು, ತಾಯಿ ಲಿಪಿಕಾ ಕೂಡ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕೂಡಲೇ ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.

Read More

ಬೆಂಗಳೂರು:- ಡಿಸಿಎಂ ಡಿಕೆ ಶಿವಕುಮಾರ್ ಅವರು ಭಾನುವಾರ ತಾವೇ ಟೇಪ್ ಹಿಡಿದು ವೈಟ್ ಟಾಪಿಂಗ್ ರೋಡ್ ಗಳ ಗುಣಮಟ್ಟ ಪರಿಕ್ಷೀಸಿದ್ದಾರೆ. https://ainlivenews.com/lokarpana-to-sri-shivayogi-kartru-gaddu-at-bellavi-kara-math/ ವೀಕೆಂಡ್​ನಲ್ಲೂ ಬಿಬಿಎಂಪಿಯ ಅಧಿಕಾರಿಗಳ ಜೊತೆ ರೌಂಡ್ಸ್ ಹಾಕಿದ ಡಿಸಿಎಂ ಡಿಕೆ ಶಿವಕುಮಾರ್, ತಾವೇ ಟೇಪ್ ಹಿಡಿದು ವೈಟ್ ಟಾಪಿಂಗ್ ರೋಡ್ ಗಳ ಗುಣಮಟ್ಟ ಪರಿಕ್ಷೀಸಿದ್ದಾರೆ. ಬೆಂಗಳೂರನ್ನು ಬ್ರ್ಯಾಂಡ್ ಮಾಡುತ್ತೇವೆ ಎಂದಿದ್ದ ಸರ್ಕಾರ, ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಯಡಿಯಲ್ಲಿ ರಾಜಧಾನಿಯ ರಸ್ತೆಗಳನ್ನ ವೈಟ್ ಟಾಪಿಂಗ್ ಮಾಡಲು ಮುಂದಾಗಿತ್ತು. ಇತ್ತ ಕಳೆದ ಎರಡ್ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿನ ಹಲವೆಡೆ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಚಾಲನೆ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಇಂದು ಬಿಬಿಎಂಪಿಯ ಅಧಿಕಾರಿಗಳ ಜೊತೆ ಸೇರಿ ನಗರದ ಹಲವೆಡೆ ನಡೆಯುತ್ತಿರೋ ವೈಟ್ ಟಾಪಿಂಗ್ ಕಾಮಗಾರಿಗಳನ್ನ ಪರಿಶೀಲಿಸಿದರು. ರಾಜಾಜಿನಗರದಿಂದ ಸಿಟಿರೌಂಡ್ಸ್ ಶುರುಮಾಡಿದ ಡಿಕೆಶಿ, ಯಶವಂತಪುರ, ಜಾಲಹಳ್ಳಿ, ನೆಟ್ಟಕಲ್ಲಪ್ಪ ಸರ್ಕಲ್ ಸೇರಿ ಹಲವೆಡೆ ವೈಟ್ ಟಾಪಿಂಗ್ ಕಾಮಗಾರಿಗಳನ್ನ ಪರಿಶೀಲನೆ ನಡೆಸಿದರು. ಇನ್ನು ರಾಜಧಾನಿಯ ರಸ್ತೆಗಳನ್ನು ಗುಣಮಟ್ಟದ ರಸ್ತೆಗಳಾಗಿ ಜನರ ಬಳಕೆಗೆ ಸಿಗುವಂತೆ ಮಾಡಲು ಸದ್ಯ ಬೆಂಗಳೂರಿನ…

Read More

ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ತಂಡವು 6 ವಿಕೆಟ್ ಗಳ ಜಯ ಸಾಧಿಸಿದೆ. https://ainlivenews.com/congress-set-out-to-extinguish-akshara-devi-by-vijayendra-says-the-governments-move-is-the-height-of-foolishness/ ವಡೋದರಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಂಟಿಂಗ್‌ಗೆ ಇಳಿದ ಯುಪಿ ವಾರಿಯರ್ಸ್ ತಂಡ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಗುಜರಾತ್ ತಂಡಕ್ಕೆ 144 ರನ್ ಗಳ ಗುರಿ ನೀಡಿತು. 144 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡ 4 ವಿಕೆಟ್‌ ನಷ್ಟಕ್ಕೆ 144 ರನ್ ಗಳಿಸಿ ಗೆಲುವು ಕಂಡಿತು. ಗುಜರಾತ್ ತಂಡದ ನಾಯಕಿ ಆಶ್ಲೇ ಗಾರ್ಡ್ನರ್ 5 ಫೋರ್ ಹಾಗೂ 3 ಸಿಕ್ಸ್ ಸಿಡಿಸುವ ಮೂಲಕ 29 ಎಸೆತಗಳಿಗೆ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಒಟ್ಟು 32 ಎಸೆತಗಳಿಗೆ 52 ರನ್ ಗಳಿಸಿ ಆಶ್ಲೇ ಗಾರ್ಡ್ನರ್ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಹರ್ಲಿನ್‌ ಡಿಯೋಲ್‌ ಅಯೇಜ 34 ರನ್‌, ಡಿಯಾಂಡ್ರ ಡಾಟಿನ್ ಅಜೇಯ 33 ರನ್‌ ಜವಾಬ್ದಾರಿಯುತ ಬ್ಯಾಟಿಂಗ್‌ನೊಂದಿಗೆ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

Read More

ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೀಗಾಗಲೇ ಜಾರಿಗೆ ತಂದಿರುವ ಸಾಕಷ್ಟು ಯೋಜನೆಗಳನ್ನು ಹಿರಿಯ ನಾಗರಿಕರು ಸದುಪಯೋಗ ಪಡೆದುಕೊಂಡಿದ್ದಾರೆ. https://ainlivenews.com/lokarpana-to-sri-shivayogi-kartru-gaddu-at-bellavi-kara-math/ ಪ್ರಯಾಣವನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಮೂಲಕ ಕಡಿಮೆ ಆದಾಯದ ಮೇಲೆ ಅವಲಂಬಿತವಾಗಿರುವ ಹಿರಿಯ ನಾಗರಿಕರಿಗೆ ಆರ್ಥಿಕ ಪರಿಹಾರವನ್ನು ಒದಗಿಸುವುದು ಮುಖ್ಯ ಗುರಿಯಾಗಿದೆ. ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಗಣನೀಯ ರಿಯಾಯಿತಿಯನ್ನು 2025 ರ ಫೆಬ್ರವರಿ 15 ರಿಂದ ಪರಿಚಯಿಸಿದೆ. ಅರ್ಹತೆ ಪಡೆಯಲು, ಮಹಿಳೆಯರು ಕನಿಷ್ಠ 58 ಮತ್ತು ಪುರುಷರು ಕನಿಷ್ಠ 60 ವರ್ಷ ವಯಸ್ಸಿನವರಾಗಿರಬೇಕು. ಭಾರತೀಯ ನಾಗರಿಕರು ಮಾತ್ರ ಈ ಕೊಡುಗೆಯನ್ನು ಪಡೆಯಬಹುದು. ಇದು ತತ್ಕಾಲ್ ಟಿಕೆಟ್‌ಗಳಿಗೆ ಅಲ್ಲ, ನಿಯಮಿತ ಬುಕಿಂಗ್‌ಗಳಿಗೆ ಅನ್ವಯಿಸುತ್ತದೆ. ವಯಸ್ಸಿನ ಪ್ರೂಪ್ ಅಪ್‌ಲೋಡ್ ಮಾಡಿ, ಪಾವತಿ ಮಾಡಿ ಮತ್ತು ಟಿಕೆಟ್ ಡೌನ್‌ಲೋಡ್ ಮಾಡಿ. ಹಿರಿಯ ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತದೆ. ಇದಲ್ಲದೆ, ಸ್ಲೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ಕೆಳಗಿನ ಬರ್ತ್‌ಗಳಿಗೆ…

Read More

ಎಲ್ಲಾ ಕಾಲದಲ್ಲಿಯೂ ಜನರಿಗೆ ಸುಲಭವಾಗಿ ಸಿಗುವ ಹಣ್ಣು ಎಂದರೆ ಅದು ಪಪ್ಪಾಯಿ. ಈ ಹಣ್ಣು ಆರೋಗ್ಯಕ್ಕೆ ಕೂಡ ಬಹಳ ಉತ್ತಮ ಎಂದು ಸುಲಭವಾಗಿ ಹೇಳಬಹುದು. ಪಪ್ಪಾಯಿ ಹಣ್ಣು ತನ್ನೊಳಗೆ ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿದೆ. ಎಲ್ಲಾ ವಯೋಮಾನದವರು ಕೂಡ ಈ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ. https://ainlivenews.com/kuruburu-shanthakumar-seriously-injured-airlifted-from-punjab-to-bangalore/ ಎಲ್ಲಾ ಸೀಸನ್ನಲ್ಲಿಯೂ ಲಭ್ಯವಿರುವ ಹಣ್ಣು ಎಂದರೆ ಅದು ಪಪ್ಪಾಯಿ. ಇದು ನಾರಿನಾಂಶ, ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಈ ಹಣ್ಣನ್ನು ನಿಯಮಿತವಾಗಿ ತಿನ್ನುವವರಿಗೆ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ರೋಗ ಬರುವ ಅಪಾಯ ಕಡಿಮೆ ಎಂದು ವೈದ್ಯರು ಹೇಳುತ್ತಾರೆ. ತೂಕ ನಿರ್ವಹಣೆಗೆ ಪಪ್ಪಾಯಿ ಹೆಚ್ಚು ಉಪಯುಕ್ತವಾಗಿದೆ. ಪಪ್ಪಾಯಿಯಲ್ಲಿ ಅಸಂಖ್ಯಾತ ಆರೋಗ್ಯ ಪ್ರಯೋಜನಗಳಿದ್ದರೂ, ಇದು ಕೆಲವರು ಸೇವಿಸಲು ಸೂಕ್ತವಾದ ಹಣ್ಣಲ್ಲ ಎಂದು ನಿಮಗೆ ತಿಳಿದಿದ್ಯಾ? ಹೌದು, ಪಪ್ಪಾಯಿ ತಿನ್ನುವುದರಿಂದ ಕೆಲವರ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗಬಹುದು. ಹಾಗಾದ್ರೆ ಈ ಹಣ್ಣನ್ನು ಯಾರು ತಿನ್ನಬಾರದು ಎಂಬುವುದರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ಗರ್ಭಿಣಿಯರು: ಗರ್ಭಿಣಿಯರು…

Read More

ತುಂಬಾ ಜನರು ಇಷ್ಟಪಡದ ಆಹಾರ ಅಂದ್ರೆ ಅದು ಹಾಗಲಕಾಯಿ, ಕಾರಣ ಇದು ಕಹಿ ಆಗಿರುತ್ತದೆ. ಆದ್ರೆ ಹಾಗಲಕಾಯಿ ಸೇವನೆ ಆರೋಗ್ಯಕ್ಕೆ ಹಲವು ಲಾಭಗಳನ್ನು ಒದಗಿಸುತ್ತದೆ. https://ainlivenews.com/fire-accident-at-the-palace-grounds-decorations-burnt/ ಮಧುಮೇಹಿಗಳಿಗೆ ಹಾಗಲಕಾಯಿ ಒಳ್ಳೆಯ ಔಷಧಿ ಎಂದು ಹೇಳಬಹುದು. ಹಲವಾರು ಪ್ರಯೋಜನಗಳಿಂದ ಕೂಡಿದ ಹಾಗಲಕಾಯಿಯನ್ನು ಕೆಲವು ಆಹಾರಗಳೊಂದಿಗೆ ತಿನ್ನಬಾರದು. ಆ ಆಹಾರಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ. ಹಾಗಲಕಾಯಿ ಸೇವಿಸುವುದರಿಂದ ರಕ್ತ ಶುದ್ಧವಾಗುತ್ತದೆ ಮತ್ತು ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ವಿಶೇಷವಾಗಿ ಮಧುಮೇಹ ಇರುವವರಿಗೆ, ಹಾಗಲಕಾಯಿ ಸರ್ವರೋಗ ನಿವಾರಕವಾಗಿದೆ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಹಾಗೆಯೇ ಆರೋಗ್ಯವಂತರನ್ನಾಗಿ ಮಾಡುತ್ತದೆ. ನೀವು ಹಾಗಲಕಾಯಿಯಿಂದ ಹಲವು ರೀತಿಯ ತಿಂಡಿ, ಪದಾರ್ಥಗಳನ್ನು ತಯಾರಿಸಬಹುದು. ಆದರೆ ಹಾಗಲಕಾಯಿಯನ್ನು ಮಾತ್ರ ಕೆಲವು ಆಹಾರಗಳೊಂದಿಗೆ ತಿನ್ನಲೇಬಾರದು. ಏಕೆಂದರೆ ಇದರ ಪೋಷಕಾಂಶಗಳು ಮತ್ತು ಸುವಾಸನೆಗಳು ಕೆಲವು ಪದಾರ್ಥಗಳೊಂದಿಗೆ ಪ್ರತಿಕ್ರಿಯಿಸಿ ದೇಹದ ಆರೋಗ್ಯದ ಮೇಲೆ ಅನೇಕ ತೊಂದರೆಗಳನ್ನುಂಟುಮಾಡಬಹುದು. ಹಾಗಿದ್ರೆ ಹಾಗಲಕಾಯಿಯನ್ನು ಯಾವ ಆಹಾರಗಳೊಂದಿಗೆ ಸೇವಿಸಬಾರದು ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಹಾಗಲಕಾಯಿ ತಿಂದ…

Read More

IPL 2025ರ ವೇಳಾಪಟ್ಟಿಯಲ್ಲಿ ಆರ್ಗನೈಸರ್ಸ್​ ಈಗಾಗಲೇ ಬಿಡುಗಡೆ ಮಾಡಿದೆ. ಮೊದಲ ಪಂದ್ಯದದಲ್ಲಿಯೇ ಬೆಂಗಳೂರು ರಾಯಲ್ ಚಾಲೆಂರ್ಜ್ಸ್​ ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡಗಳು ಮಾರ್ಚ್​ 22ರಂದು ಎದುರಾಗುವ ಮೂಲಕ ಐಪಿಎಲ್​2025 ಶುರುವಾಗಲಿದೆ. ಫಿನಾಲೆ ಪಂದ್ಯವನ್ನು ಮೇ 25 ರಂದು 2024ರ ಐಪಿಎಲ್ ಗೆದ್ದ ತಂಡದ ತವರನಲ್ಲಿ ಆಡಿಸಲು ನಿರ್ಣಯಿಸಲಾಗಿದೆ. ಅಂದ್ರೆ ಕೊಲ್ಕತ್ತಾದಲ್ಲಿಯೇ ಫೈನಲ್ ಪಂದ್ಯ ನಡೆಯಲಿದೆ. https://ainlivenews.com/fire-accident-at-the-palace-grounds-decorations-burnt/ ಬಿಸಿಸಿಐ 18ನೇ ಸೀಸನ್ ಐಪಿಎಲ್ ವೇಳಾಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಈ ಬಾರಿಯೂ 10 ತಂಡಗಳು ಭಾಗವಹಿಸಲಿವೆ. ಐಪಿಎಲ್‌ನ ಮೊದಲ ಪಂದ್ಯ ಮಾರ್ಚ್ 22, 2025 ರಂದು ನಡೆಯಲಿದ್ದು, ಆರ್​ಸಿಬಿ ಹಾಗೂ ಹಾಲಿ ಚಾಂಪಿಯನ್ ಕೆಕೆಆರ್ ತಂಡಗಳು ಸೆಣಸಾಡಲಿವೆ 65 ದಿನಗಳ ಕಾಲ ನಡೆಯುವ ಟೂರ್ನಮೆಂಟ್​ನಲ್ಲಿ ಪ್ಲೇಯಾಫ್​ 70 ಪಂದ್ಯಗಳು ಸೇರಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಮಾರ್ಚ್ 22 ರಿಂದ ಮೇ 18 ರವರೆಗೆ 70 ಲೀಗ್ ಪಂದ್ಯಗಳು ನಡೆಯಲಿವೆ. ಪ್ಲೇಆಫ್‌ಗಳು ಮೇ 20 ರಿಂದ ಮೇ 25 ರವರೆಗೆ ನಡೆಯಲಿವೆ. ಈ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಫೆಬ್ರವರಿ 18 ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. https://ainlivenews.com/lokarpana-to-sri-shivayogi-kartru-gaddu-at-bellavi-kara-math/ 220/66/11 ಕೆ.ವಿ ಎನ್.ಆರ್.ಎಸ್ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಫೆಬ್ರವರಿ 18ರ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಕೆಳಕಂಡ ಭಾಗಗಳಲ್ಲಿ ಕರೆಂಟ್‌ ಕಟ್ಟಾಗಲಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ಮಂಜುನಾಥ ನಗರ, ಶಿವನಗರ, ಗಾಯತ್ರಿ ನಗರ, ಪ್ರಕಾಶನಗರ, ಎಲ್.ಎನ್ ಪುರ, ಸುಬ್ರಂಮಣ್ಯನಗರ, ವಿಜಯನಗರ, ರಾಜಾಜಿನಗರ 2ನೆ ಬ್ಲಾಕ್ ಮತ್ತು 6ನೆ ಬ್ಲಾಕ್, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ, ಶಂಕರಮಠ, ಬ್ರೀಗೆಡ್ ಅಪಾರ್ಟ್‌ಮೆಂಟ್, ಮಾಗಡಿ ರಸ್ತೆ 1ನೇ ಕ್ರಾಸ್‌ನಿಂದ 8ನೇ ಕ್ರಾಸ್, ಮಾಗಡಿ ರಸ್ತೆ 9ನೇ ಕ್ರಾಸ್, ಮಾಗಡಿ ರಸ್ತೆ 10ನೇ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ,…

Read More

ಅನ್ನವನ್ನು ಮಾಡುವುದು ತುಂಬಾ ಸುಲಭ ಮತ್ತು ಅನೇಕ ಜನರಿಗೆ ಇದು ನೆಚ್ಚಿನ ಭಕ್ಷ್ಯವಾಗಿದೆ. ಜನರು ವಿವಿಧ ರೀತಿಯ ಅನ್ನವನ್ನು ತಿನ್ನುತ್ತಾರೆ. ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಇರುತ್ತದೆ. ಇದರೊಂದಿಗೆ, ಪ್ರೋಟೀನ್, ಕೊಬ್ಬು ಮತ್ತು ಕ್ಯಾಲ್ಸಿಯಂ ಅನ್ನು ಸಹ ಒಳಗೊಂಡಿದೆ. ಆದರೆ, ರಾತ್ರಿ ಅನ್ನ ತಿನ್ನಬೇಕೋ ಬೇಡವೋ ಎಂಬ ಪ್ರಶ್ನೆ ಅನೇಕರ ಮನದಲ್ಲಿ ಮೂಡುವುದು ಖಂಡಿತ. https://ainlivenews.com/kuruburu-shanthakumar-seriously-injured-airlifted-from-punjab-to-bangalore/ ಅನ್ನ ಒಂದು ರೀತಿಯ ಮುಖ್ಯ ಆಹಾರವಾಗಿ ಪಾತ್ರ ನಿರ್ವಹಿಸುತ್ತದೆ. ಬತ್ತದಿಂದ ಅನ್ನ ಮಾಡಿ, ನಂತರ ಬೇರೆ ಬೇರೆ ಅಡುಗೆ ಮಾಡ್ತಾರೆ. ಅನ್ನ ಮಾಡೋದು ಸುಲಭ ಹಾಗೂ ಕಾರ್ಬೋಹೈಡ್ರೇಟ್ಸ್ ಇರುವ ಕಾರಣ ಎನರ್ಜಿಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ. ಆದರೆ ಅನ್ನದಲ್ಲಿ ಕಾರ್ಬೋಹೈಡ್ರೇಟ್ಸ್ ಮಾತ್ರವಲ್ಲದೆ, ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಐರನ್, ಪೊಟ್ಯಾಷಿಯಂ ಕೂಡ ಇದೆ. ಇಷ್ಟೆಲ್ಲಾ ಪೌಷ್ಟಿಕಾಂಶಗಳಿದ್ದರೂ ಕೆಲವರು ರಾತ್ರಿ ಅನ್ನ ತಿನ್ನಬಾರದು. ಅನ್ನದಲ್ಲಿ ಕಾರ್ಬೋಹೈಡ್ರೇಟ್ಸ್ ಜಾಸ್ತಿ ಇರೋದ್ರಿಂದ ಎನರ್ಜಿ ಕೊಡುತ್ತೆ, ಗ್ಲೂಕೋಸ್ ವಿಭಜನೆ ಆಗುತ್ತೆ. ರಾತ್ರಿ ಎನರ್ಜಿಯ ಅಗತ್ಯವಿರುವುದಿಲ್ಲ. ಹಾಗಾಗಿ ರಾತ್ರಿ ಅನ್ನ ತಿಂದ್ರೆ ಗ್ಲೂಕೋಸ್ ಜಾಸ್ತಿ ಆಗಿ…

Read More