Author: AIN Author

ಹುಬ್ಬಳ್ಳಿ: ಕೀಲಿ ಮುರಿದು ಮನೆಯಲ್ಲಿದ್ದ 3.54 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಘಟನೆ ಇಲ್ಲಿನ ಗೋಕುಲ ರಸ್ತೆಯ ಮಂಜುನಾಥ ನಗರದಲ್ಲಿ ನಡೆದಿದೆ. ವೀರಪ್ಪ ಮಂಗಳೂರು ಎಂಬುವರ ಮನೆಯಲ್ಲಿದ್ದ 3.17 ಲಕ್ಷ ರೂ. ಮೌಲ್ಯದ 55 ಗ್ರಾಂ ಚಿನ್ನಾಭರಣ, 550 ಗ್ರಾಂ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆ ಬಂದರೇ ಸಾಕು ರಸ್ತೆಯಲ್ಲ ಕೆರೆಯಂತಾಗುತ್ತವೆ. ಬಹುತೇಕ ಮನೆಗಳು ಜಲಾವೃತ ಗೊಂಡು ಜನರು ಪರದಾಡುವಂತಾಗುತ್ತದೆ. ಹೌದು.. ಹುಬ್ಬಳ್ಳಿಯ ಗಣೇಶನಗರದ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಶಾಲಾ‌ ಮಕ್ಕಳು, ಸಾರ್ವಜನಿಕರು ನೀರಿನಲ್ಲಿಯೇ ಓಡುಡುವ ಮೂಲಕ ಸ್ಥಳೀಯ ಆಡಳಿತದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಅಲ್ಲದೇ ಪ್ರತಿ ಬಾರಿ ಮಳೆ ಬಂದಾಗಲೂ ಇಂತಹ ಅವ್ಯವಸ್ಥೆ ಸರ್ವೇಸಾಮಾನ್ಯವಾಗಿದೆ. ಇನ್ನೂ ಹುಬ್ಬಳ್ಳಿಯ ಚನ್ನಪೇಟೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮಳೆಯ ನೀರನ್ನು ಹೊರ ಹಾಕಲು ಹರಸಾಹಸ ಮಾಡುವಂತಾಗಿದೆ. ಯುಜಿಡಿ ಸಮಸ್ಯೆಯಿಂದ ಇಲ್ಲಿನ ಜನರ ಭವಣೆ ಹೇಳತೀರದಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪಾಲಿಕೆಯು ಸೂಕ್ತ ಕ್ರಮಗಳನ್ನು ಜರುಗಿಸಿ ಜನರ ಕಷ್ಟವನ್ನು ದೂರ ಮಾಡಬೇಕಿದೆ. ಶಾಲಾ ಮಕ್ಕಳ ಪರದಾಟ ಹಳೆ ಹುಬ್ಬಳ್ಳಿಯ ಇಂಡಿಪಂಪ ಹತ್ತಿರ ಪವನ ಸ್ಕೂಲ್ ಮಳೆಗೆ ಶಾಲಾ ಮಕ್ಕಳು ಪರದಾಟ ಮಳೆಗೆ ರಸ್ತೆ ಸಂಪರ್ಕ ಬಂದ್ ಸತತವಾಗಿ 3 ಘಂಟೆಗಳ ಕಾಲ ಮಳೆ ಬಾರಿ ಅವಾಂತರ ಆದ ಮಳೆಗೆ ಹಳೆ ಹುಬ್ಬಳ್ಳಿಯ ಇಂಡಿಪಂಪ…

Read More

ಹುಬ್ಬಳ್ಳಿ: ಸರ್ಕಾರ ಬಿಳಿಸುವ ಪ್ರವೃತ್ತಿ ಇರೋರು ಬಿಜೆಪಿ ಅವರು ಎಂದು ಹುಬ್ಬಳ್ಳಿಯಲ್ಲಿ ಸಂತೋಷ್ ಲಾಡ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ಭಾಗದಲ್ಲಿ ಬರಗಾಲ ಹಾಗೂ ನರೇಗಾ ವೀಕ್ಷಣೆ ಇಟ್ಕೊಂಡಿದ್ವಿ, ಕಳೆದ 40 ನಿಮಿಷದಿಂದ ಜೋರಾಗಿ ಮಳೆ ಬರ್ತಾ ಇದೆ. ನಾವು ತೆರಳಬೇಕಾದ ಸ್ಥಳದಲ್ಲೂ ಮಳೆ ಬರ್ತಾ ಇದೆ. ಇನ್ನು ಎರಡುಮೂರು ದಿನ ಹೀಗೆ ಮಳೆ ಮುಂದುವರಿಯಲಿ. ಇವತ್ತು ಸಂಜೆ ಸಂಪೂರ್ಣ ಬರದ ಬಗ್ಗೆ ನಿಮಗೆ ಮಾಹಿತಿ ಕೊಡಬೇಕು ಅಂದುಕೊಂಡಿದ್ದೆ. ಆಕಸ್ಮಿಕವಾಗಿ ಮಳೆ ಬಂದಿದೆ ಹೀಗಾಗಿ ಬರ ವೀಕ್ಷಣೆ ಮುಂದುವರೆಸಲು ಆಗೋದಿಲ್ಲ. ಇಲ್ಲಿ ಬಂದ ಸಾರ್ವಜನಿಕರೊಂದಿಗೆ ಚರ್ಚೆ ಮಾಡ್ತೇವೆ. ಮಳೆ ಬಂದಿದ್ದು ಅತ್ಯಂತ ಖುಷಿ ತಂದಿದೆ ಎಂದು ಹೇಳಿದರು. ಸರ್ಕಾರದ ಬಗ್ಗೆ ಹೊರ ರಾಜ್ಯದಲ್ಲಿ ಮೋದಿ ಹೇಳಿಕೆ ವಿಚಾರ ಇನ್ನೂ ಮೋದಿ ಸಾಹೇಬರು ಮಾಡಿರುವ ಭಾಷಣ ಎಲ್ಲರಿಗೂ ಗೊತ್ತಿದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಎಷ್ಟು ಹಣ ಕೊಟ್ಟಿದೆ?. ಇವತ್ತು ಮಧ್ಯ ಪ್ರದೇಶಕ್ಕೆ ಹೋಗಿ ಕರ್ನಾಟಕದ ಬಗ್ಗೆ ಮಾತನಾಡ್ತಾರೆ. ರಾಜ್ಯ ಸರ್ಕಾರ ಏನು…

Read More

ಮಂಡ್ಯ: ಹಾಡು ಹಗಲೇ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿ 4.5 ಲಕ್ಷ ಹಣ ಎಗರಿಸಿ ಪರಾರಿಯಾಗಿರುವ ಘಟನೆ ಮಂಡ್ಯದ ನಗರಸಭೆ ಆವರಣದಲ್ಲಿ ನಡೆದಿದೆ. ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ನತದೃಷ್ಟನಾಗಿದ್ದು, ನಗರಸಭೆ ಆವರಣದಲ್ಲಿ ಕಾರು ನಿಲ್ಲಿಸಿ SBI ಬ್ಯಾಂಕ್ ಗೆ ಕೆಲಸದ ನಿಮಿತ್ತ ಹೋಗಿದ್ದರು. ಕಾರಿನಲ್ಲಿ ಹಣವಿಟ್ಟಿದ್ದನ್ನ ಗಮನಿಸಿದ ಖತರ್ನಾಕ್ ಕಳ್ಳರು ಬ್ರೀಜಾ ಕಾರಿನಲ್ಲಿದ್ದ ಹಣವನ್ನ ಎಗರಿಸಿದ್ದಾರೆ. ಜಮೀನು ರಿಜಿಸ್ಟರ್ ಮಾಡಿಸಿ ರಿಜಿಸ್ಟರ್ ಕಚೇರಿ ಬಳಿಯಿಂದ ಹಣ ಪಡೆದು ನಗರಸಭೆ ಬಳಿ ಬಂದಿದ್ದರು. ಬೇರೆಯವರಿಗೆ ನೀಡಬೇಕಿದ್ದ ಹಣ ಕಳೆದುಕೊಂಡ ಪರಮೇಶ್ ಗೋಳಾಡುತ್ತಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ತುಮಕೂರು: ದರಿದ್ರ ಸರ್ಕಾರದಿಂದಾಗಿ ನಾವೆಲ್ಲಾ ಪೇಪರ್ ಎಂಎಲ್‌ಎಗಳಾಗಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಗೌಡ ವಾಗ್ದಾಳಿ ಮಾಡಿದ್ದಾರೆ. ತುಮಕೂರು ತಾಲೂಕಿನ ಬೆಳ್ಳಾವಿಯಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ರೈತರಿಗೆ ಮರಣ ಶಾಸನ ಬರೆದ ಸಿದ್ದರಾಮಯ್ಯ ಸರಕಾರ. ಬಿಎಸ್ ವೈ ಸರಕಾರ 20 ಸಾವಿರ ಟ್ರಾನ್ಸಫರ್ಮರ್ ಅಳವಡಿಕೆ ಮಾಡಿತ್ತು.. ರೈತರಿಂದ ಹಿಡಿದು ಕೈಗಾರಿಕೋದ್ಯಮಿ ಗಳಿಂದ ಹಿಡಿದು, ಯಾರಿಗೂ ಕೂಡ ಕರೆಂಟ್ ಇಲ್ಲ, ಹೇಮಾವತಿ ನೀರಿಲ್ಲ, ಇವತ್ತು ಬೆಂಗಳೂರು ತುಮಕೂರು,ಮಂಡ್ಯ ನೀರಿಲ್ಲದೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಮಕ್ಕಳಿಗೆ ಸೈಕಲ್ ಕೊಟ್ಟಿಲ್ಲ ಅಂತ, ಯೂನಿಫಾರ್ಮ್ ಕೊಟ್ಟಿಲ್ಲ ಅಂತ ಮಕ್ಕಳು ಬಂದಿದ್ದಾರೆ. ಶಾಸಕರ ಅನುದಾನ ಕೂಡ 2 ಕೋಟಿ  ಬದಲು 50 ಲಕ್ಷ ಕೊಟ್ಟಿದ್ದಾರೆ. ನಾವು ಯಾವ ಮುಖ ಇಟ್ಕೊಂಡ್ ಹೋಗೋದು. ಮೋದಿ ಕೊಡೋ ಅಕ್ಕಿನಾ ಕೂಡ ಕೊಡ್ತಾ ಇಲ್ಲ. ರಾಜ್ಯ ಸರಕಾರ ಏನ್ಮೇಕಾದ್ರು ಮಾಡ್ಕೊಳ್ಳಿ ಆದ್ರೆ ಮೋದಿ‌ ಕೊಡ್ತಿರೋ ಅಕ್ಕಿ ಕೊಡಿ, 2 ಕೆ.ಜಿ. ಕಡಿತ ಯಾಕೆ. ನಾವೆಲ್ಲಾ ಪೇಪರ್…

Read More

ದಾವಣಗೆರೆ: 2023 ರ ಚುನಾವಣೆಯಲ್ಲಿ ನಮ್ಮವರೆ ಬಿಜೆಪಿ ನೂರು ಸ್ಥಾನ ಬರದಬಾರದು ಅಂತ ಷ್ಯಡ್ಯಂತ್ರ ಮಾಡಿದ್ರು ಎಂದು ಮಾಜಿ ಶಾಸಕ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ದಾವಣಗೆರೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಒಂದಾಗಿ ಅವರೆ ಮುಖ್ಯಮಂತ್ರಿಯಾಗಬೇಕು ಅಂತ ಹಗಲು ಕನಸು ಕಾಣ್ತಾ ಇದ್ದರು ಎಂದು ಪರೋಕ್ಷವಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಗೆ ಟಾಂಗ್ ನೀಡಿದ್ದಾರೆ. ಈ ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ರು. ಆದ್ದರಿಂದ ನಮ್ಮ ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿದ್ದಾರೆ.  ಯಡಿಯೂರಪ್ಪರನ್ನು ಕೆಳಗೆ ಇಳಿಸಿದ್ರು. ಈಶ್ವರಪ್ಪ, ಜಗದೀಶ್ ಶೆಟ್ಟರ್, ಸವದಿ ಸೇರಿದಂತೆ ಫ್ರಂಟ್ ಲೈನ್ ನಾಯಕರನ್ನು ಮುಗಿಸಿದರು. ಒಬ್ಬ ವ್ಯಕ್ತಿ ದೆಹಲಿಯಲ್ಲಿ ಕೂತು ಸಿಎಂ ಆಗಲು ಇದೆಲ್ಲ ಮಾಡಿದ್ದಾನೆ ಎಂದು ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು. ಯಡಿಯೂರಪ್ಪರವರ ಪರವಾಗಿ ಮಾತನಾಡಿದ್ದಕ್ಕೆ ಈ ರೀತಿ ಮಾಡ್ತಾ ಇದ್ದಾರೆ. ಪರವಾಗಿ ಮಾತನಾಡಿದರೆ ನೋಟಿಸ್, ಅವರ ವಿರುದ್ಧವಾಗಿ ಮಾತನಾಡಿದರೆ ನೋಟೀಸ್ ಇಲ್ಲ. ಇದು ಯಾವ…

Read More

ಯಾದಗಿರಿ: ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಜೆಎಂ ನ್ಯಾಯಾಧೀಶರ ಅನುಮತಿ ಪಡೆದು ಬಂಧಿತ 16 ಆರೋಪಿಗಳ ಪೈಕಿ 9 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. 9 ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇನ್ನೂ ಈ ಸಂಧರ್ಭದಲ್ಲಿ ತಂದೆಯೊಬ್ಬರು ಮಗನನ್ನು ಭೇಟಿಯಾಗಲು ಕೈಯಲ್ಲಿ ಔಷಧಿಗಳನ್ನು ಹಿಡಿದುಕೊಂಡು ಓಡೋಡಿ ಬಂದರು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಿಂದ ಬುತ್ತಿ, ಔಷಧಿ ಹಿಡಿದುಕೊಂಡು ಬಂದ ತಂದೆಯನ್ನು ಅಧಿಕಾರಿಗಳು ತಡೆದು ಮಾತ್ರೆ ನೀಡಲು ಅವಕಾಶ ಕೊಡಲಿಲ್ಲ, ಆರೋಪಿ ಹಸನ್ ಸಾಬ್ ಗೆ ಕಳೆದ ತಿಂಗಳು ಬೆನ್ನು ಹುರಿ ಕಾಣಿಸಿಕೊಂಡು ಬೆನ್ನಿನ್ನಲ್ಲಿ ನೀರು ತುಂಬಿತ್ತು, ಬೆನ್ನು ಹುರಿ ಕಡಿಮೆಯಾಗಲು ವೈದ್ಯರು 6 ತಿಂಗಳ ಮಾತ್ರೆಗಳನ್ನು ಬರೆದುಕೊಟ್ಟಿದ್ದಾರೆ.. 10  ದಿನಗಳ ಹಿಂದೆ ನನ್ನ ಮಗ ಎಕ್ಸಾಂ ಬರೆಯಲಿಕ್ಕೆ ಬಂದಾಗ ಅರೆಸ್ಟ್ ಮಾಡಿದ್ದಾರೆ.. 10 ದಿನಗಳಿಂದ ಮಗ ಮಾತ್ರೆ ತೆಗೆದುಕೊಂಡಿಲ್ಲ.. ಮಗನಿಗಾಗಿ ಆರೋಗ್ಯದಲ್ಲಿ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಹೇಗೆ..? ಮಗನಿಗೆ ಮಾತ್ರೆಗಳನ್ನು ನೀಡಲು ಪೊಲೀಸ್ರು ಅವಕಾಶ…

Read More

ರಾಯಚೂರು: ತಾಯಿಗೆ ಸದಾ ಕಿರುಕುಳ ನೀಡುತ್ತಿದ್ದಾನೆ ಎಂಬ ಸಿಟ್ಟಿನಲ್ಲಿ ಮಗನೊಬ್ಬ ತಂದೆಯನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಂಡಿ ತಿಮ್ಮಣ್ಣ (55) ಎಂಬಾತನನ್ನು ಅವನ ಮಗ ಶೀಲವಂತ (32) ಕೊಲೆ ಮಾಡಿದ್ದಾನೆ. ಕೊಂದ ಬಳಿಕ ಮೊದಲು ಶವವನ್ನು ನಾಶ ಮಾಡಲು ಮುಂದಾಗಿದ್ದನಾದರೂ ಬಳಿಕ ಭಯಗೊಂಡು ತಾನೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಬಂಡಿ ತಿಮ್ಮಪ್ಪ, ಅವನ ಪತ್ನಿ, ಮಗ ಶೀಲವಂತ, ಸೊಸೆ ಮತ್ತು ಇಬ್ಬರು ಮಕ್ಕಳು ಜತೆಯಾಗಿ ವಾಸಿಸುತ್ತಿದ್ದರು. ಬಂಡಿ ತಿಮ್ಮಣ್ಣ ಯಾವಾಗಲೂ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಗ ಶೀಲವಂತ ಹಲವಾರು ಬಾರಿ ಹೇಳಿದರೂ ಜಗಳ ನಿಲ್ಲಲೇ ಇಲ್ಲ. ಇದರಿಂದ ಆತ ಕುಪಿತನಾಗಿದ್ದ ಎನ್ನಲಾಗಿದೆ. ಭಾನುವಾರದಂದು ಈ ಕುರಿತ ಮಾತುಕತೆ ತಾರಕಕ್ಕೆ ಏರಿದೆ. ಈ ವೇಳೆ ಉಂಟಾದ ಘರ್ಷಣೆಯಲ್ಲಿ ಕೊಲೆ ಸಂಭವಿಸಿದೆ. ಎಲ್ಲ ಕುಟುಂಬಿಕರ ಮುಂದೆಯೇ ಮಗ ತಂದೆಯನ್ನು ಕೊಂದು ಹಾಕಿದ್ದಾನೆ.…

Read More

ಕಲಬುರಗಿ: ಭೀಕರ ಬರಗಾಲಕ್ಕೆ ತುತ್ತಾಗಿರುವ ಬಿಸಿಲೂರು ಕಲಬುರಗಿಗೆ ನಾಳೆ ನವೆಂಬರ್ 7 ರಂದು ಬಿವೈ ವಿಜಯೇಂದ್ರ ನೇತ್ರತ್ವದ ಬಿಜೆಪಿ ತಂಡ ಭೇಟಿ ನೀಡಲಿದೆ.. ಗ್ರಾಮೀಣ ಮತಕ್ಷೇತ್ರದ ಪಟ್ನಾ ಜೇವರ್ಗಿ ಕ್ಷೇತ್ರದ ಸೊನ್ನ ಹಾಗು ಅಫಜಲಪುರ ಕ್ಷೇತ್ರದ ಫರ್ತಾಬಾದ್ ಗ್ರಾಮದಲ್ಲಿ ತಂಡ ಸಂಚರಿಸಲಿದೆ.ರೈತರೊಡನೆ ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಲಿದೆ. ಮಾತ್ರವಲ್ಲ ಹೊಲಗಳಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಿ ಸರ್ಕಾರದ ಗಮನ ಸೆಳೆಯಲು ತಂಡ ಸಜ್ಜಾಗಿದೆ..ಬಿಜೆಪಿಯ ಈ ತಂಡದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಕಲಬುರಗಿ ಸಂಸದ ಉಮೇಶ್ ಜಾಧವ್ ಹಾಗು ಹಾಲಿ & ಮಾಜಿ ಶಾಸಕರು ಇರಲಿದ್ದಾರೆ ಅಂತ ಬಿಜೆಪಿಯ ರಾಜ್ಯ ವಕ್ತಾರ ಹಾಗು ಮಾಛಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ತಿಳಿಸಿದ್ದಾರೆ…

Read More

ದಾವಣಗೆರೆ: ಕಾಂಗ್ರೆಸ್ ಸರ್ಕಾರಕ್ಕೆ ಬರಗಾಲದ ಮತ್ತು ರಾಜ್ಯ ಜನ ಜೀವನದ ಗಾಂಭೀರ್ಯತೆಯೇ ಇಲ್ಲ ಆದ್ದರಿಂದ ಬರಗಾಲದ ಬಗ್ಗೆ‌ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ತೆಗೆದುಕೊಂಡಿಲ್ಲ ಎಂದು ದಾವಣಗೆರೆ ಜಿಲ್ಲೆಯ ‌ಹೊನ್ನಾಳಿಯಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕಾವೇರಿ ವಿಚಾರದಲ್ಲೂ ನಿರ್ಲಕ್ಷ್ಯ, ಕಾನೂನು‌ ಸುವ್ಯವಸ್ಥೆ ವಿಷಯದಲ್ಲೂ ನಿರ್ಲಕ್ಷ್ಯ, ಸರ್ಕಾರದ ಈ ನಿರ್ಲಕ್ಷ್ಯದಿಂದ‌ ಜನರು‌ ಸಂಕಟ ಅನುಭವಿಸುತ್ತಿದ್ದಾರೆ. ವಿದ್ಯುತ್ ಅಭಾವದಿಂದ ರೈತರು ನೋವು ಅನುಭವಿಸುತ್ತಿದ್ದಾರೆ ಎಂದರು. ಇನ್ನೂ ನಾವು ಈ ಬಗ್ಗೆ ಕೇಳಿದ್ರೆ ಕೇಂದ್ರ ಸರ್ಕಾರ ಕೊಡ್ಲಿ ಅಂತಾರೆ. ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನ ಕೊಟ್ಟೆ ಕೊಡತ್ತೆ. ಆದ್ರೆ ಸಿದ್ದರಾಮಯ್ಯನವರಿಗೆ ಸಿಎಂ ಸೀಟ್ ಯಾವಾಗ ಹೋಗುತ್ತೆ ಅಂತ ಚಿಂತೆ, ಡಿ ಕೆ ಶಿವಕುಮಾರ್ ಗೆ ನಾನು ಯಾವಾಗ ಸಿಎಂ ಆಗ್ತೀನಿ ಎಂಬ ಚಿಂತೆ ಹೀಗಾಗಿ ಸರ್ಕಾರರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ, ಹೈ ಕಮಾಂಡ್ ರಾಜ್ಯವನ್ನ ಎಟಿಎಂ ಮಶಿನ್ ಮಾಡಿಕೊಂಡಿದೆ. ಇದನ್ನೆಲ್ಲ ಬಿಟ್ಟು ಸರ್ಕಾರ ಜನರ…

Read More