Author: AIN Author

ಚಾಮರಾಜನಗರ;- ರಾಜ್ಯದಲ್ಲಿ ಸರ್ಕಾರಿ ಸೇವೆಗಳನ್ನು ನೌಕರರು ಉತ್ತಮವಾಗಿ ನಿರ್ವಹಿಸುತ್ತಾ ಬಂದಿದ್ದಾರೆ ಎಂದು ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಸೇವೆಗಳನ್ನು ನೌಕರರು ಉತ್ತಮವಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಜೊತೆಗೆ ನೌಕರರ ಮಕ್ಕಳ ಹೆಚ್ಚಿನ ವಿದ್ಯಾಭಾಸಕ್ಕೆ ಸಂಘದ ವತಿಯಿಂದ ಅನುಕೂಲಗಳನ್ನು ಮಾಡಲಾಗುತ್ತಿದೆ ವಿದ್ಯಾರ್ಥಿಗಳನ್ನು ಪ್ರೋತಾಹಿಸುವ ನಿಟ್ಟಿನಿಂದ ೨೦೨೦ನೇ ವರ್ಷದಿಂದ ನಗದು ಪ್ರತಿಭಾ ಪುರಸ್ಕಾರ ೬೦೦೦ ರಾಜ್ಯದ ಸರ್ಕಾರಿ ನೌಕರರ ಮಕ್ಕಳಿಗೆ ನೀಡುತ್ತಾ ಬಂದಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಜಿಲ್ಲಾ ಘಟಕದ ವತಿಯಿಂದ ಚಾಮರಾಜನಗರ ಜಿಲ್ಲೆಯ ನೂತನ ಶಾಸಕರು, ಸಚಿವರಿಗೆ ಹಾಗೂ ಸರ್ಕಾರಿ ನೌಕರರ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಿ ಅವರು ಮಾತನಾಡಿದರು. ಸಂಘನೆಗಳು ಜಿಲ್ಲೆಯಲ್ಲಿ ೧೩೮ ವಿದ್ಯಾರ್ಥಿಗಳು ೯೦ ಗಿಂತ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಅಂತಹ ಮಕ್ಕಳನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ.…

Read More

ಶ್ರೀನಗರ: ಜಾಮೀನಿನ (Bail) ಮೇಲೆ ಬಿಡುಗಡೆಯಾದ ಶಂಕಿತ ಉಗ್ರರ ಮೇಲೆ ನಿಗಾ ಇಡಲು ಅವರ ಕಾಲಿಗೆ ಜಿಪಿಎಸ್ ಆಧಾರಿತ ಬಳೆಯನ್ನು (GPS Anklet) ಜಮ್ಮು ಕಾಶ್ಮೀರ ಪೊಲೀಸರು (Jammu Kashmir) ಪರಿಚಯಿಸಿದ್ದಾರೆ. ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿ ಬಂಧನಕ್ಕೆ ಒಳಗಾದ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ದೇಶದ ಮೊದಲ ಪೊಲೀಸ್‌ ಪಡೆ ಎಂಬ ಹೆಗ್ಗಳಿಗೆ ಜಮ್ಮು ಕಾಶ್ಮೀರ ಪೊಲೀಸರು ಪಾತ್ರರಾಗಿದ್ದಾರೆ. ಜಿಪಿಎಸ್‌ ಟ್ರ್ಯಾಕರ್ ಆಂಕ್ಲೆಟ್ ವ್ಯಕ್ತಿಯ ಪಾದದ ಸುತ್ತಲೂ ಧರಿಸಬಹುದಾದ ಸಾಧನವಾಗಿದ್ದು, ಮೇಲ್ವಿಚಾರಣೆ ಮಾಡಲು ಮತ್ತು ಅವರ ಚಲನೆಯನ್ನು ಟ್ರ್ಯಾಕ್ ಮಾಡುತ್ತದೆ. ಜಾಮೀನು, ಪೆರೋಲ್ ಮತ್ತು ಗೃಹಬಂಧನದಲ್ಲಿರುವ ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಲು ಮತ್ತು ಜೈಲುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಈ ಸಾಧನವನ್ನು ಈಗಾಗಲೇ ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಬಳಸಲಾಗುತ್ತಿದೆ. https://ainlivenews.com/suprem-ray-healing-center-reiki/#google_vignette ಹಲವು ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ಗುಲಾಂ ಮೊಹಮ್ಮದ್‌ ಭಟ್‌ ಮೇಲೆ…

Read More

ಉಪ್ಪು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದ್ದು, ಅದೇ ರೀತಿಯಾಗಿ ಇದರಲ್ಲಿ ಸೌಂದರ್ಯ ವರ್ಧಿಸುವಂತಹ ಕೆಲವು ಗುಣಗಳು ಕೂಡ ಇವೆ. ಉಪ್ಪು ನೀರಿನಿಂದ ಯಾವೆಲ್ಲಾ ಅರೋಗ್ಯ ಹಾಗೂ ಸೌಂದರ್ಯ ಲಾಭಗಳನ್ನು ಪಡೆದುಕೊಳ್ಳಬಹುದು ಎಂದು ನೀವು ತಿಳಿಯಲು ತಯಾರಾಗಿ. ಗಂಟಲು ನೋವಿನ ಸಮಸ್ಯೆ  (throat pain) ಉಪ್ಪು ನೀರಿನಿಂದ ಗೋರ್ಗಲ್ ಮಾಡುವುದು ಗಂಟಲಿನಲ್ಲಿ ಇರುವ ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ಗಂಟಲು ನೋವಿನ ಸಮಸ್ಯೆ ಪರಿಹಾರವಾಗುತ್ತದೆ. ಇದು ಗಂಟಲು ಕೋಶಗಳಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಗಂಟಲು ಸೋಂಕು ಅಥವಾ ಗಂಟಲು ನೋವಿನ ಸಮಯದಲ್ಲಿ ಉಪ್ಪು ನೀರನ್ನು ಬಳಸುವುದರಿಂದ ನಿಮಗೆ ಪರಿಹಾರ ನೀಡಬಹುದು. ಏಕೆಂದರೆ ಸಮುದ್ರದ ಉಪ್ಪು ಉರಿಯೂತದ ಗುಣಗಳನ್ನು ಹೊಂದಿದೆ. ಇದರಿಂದಾಗಿ ಉಗುರುಬೆಚ್ಚಗಿನ ಉಪ್ಪು ನೀರಿನಿಂದ ಗೋರ್ಗಲ್ ಮಾಡಿದಾಗ  ಗಂಟಲಿನ ಸೋಂಕಿತ ಜೀವಕೋಶಗಳ ಉರಿಯೂತವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಚರ್ಮಕ್ಕಾಗಿ ಚರ್ಮದ ಸಮಸ್ಯೆಗಳನ್ನು (skin problem) ನಿವಾರಿಸಲು ಉಪ್ಪು ಸಹ ಪರಿಣಾಮಕಾರಿ ಮಾರ್ಗವಾಗಿದೆ. ಇದರಲ್ಲಿ ಇರುವ ಸಲ್ಫರ್ ಘಟಕಗಳು ಚರ್ಮದ ಮೇಲ್ಮೈಯನ್ನು ಸ್ವಚ್ಛವಾಗಿ ಮತ್ತು ಮೃದುವಾಗಿಡಲು…

Read More

ಸೂರ್ಯೋದಯ: 06.15 AM, ಸೂರ್ಯಾಸ್ತ : 05.52 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಶ್ವಯುಜ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಅಷ್ಟಮಿ 03:18 AM ತನಕ ನಂತರ ನವಮಿ ನಕ್ಷತ್ರ: ಇವತ್ತು ಆಶ್ಲೇಷ 01:23 PM ತನಕ ನಂತರ ಮಖ ಯೋಗ: ಇವತ್ತು ಶುಕ್ಲ 02:26 PM ತನಕ ನಂತರ ಬ್ರಹ್ಮ ಕರಣ: ಇವತ್ತು ಕೌಲವ 03:18 AM ತನಕ ನಂತರ ತೈತಲೆ 04:33 PM ತನಕ ನಂತರ ಗರಜ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ: 01:30 ನಿಂದ 03:00 ವರೆಗೂ ಅಮೃತಕಾಲ: 11.35 AM to 01.23 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:37 ನಿಂದ ಮ.12:22 ವರೆಗೂ ಮೇಷ: ಈ ರಾಶಿಯ ಗಂಡ ಹೆಂಡತಿ ಬೀಗಿ ಬಾಗುವುದಕ್ಕಿಂತ ಬಾಗಿ ನಡೆದರೆ ಒಳಿತು,ಶೈಕ್ಷಣಿಕ ವೃತ್ತಿಯವರಿಗೆ ಸ್ವಾಭಿಮಾನದಿಂದ ಕೆಲಸ ಮಾಡುವವರು,…

Read More

ಚಾಕೋಲೇಟ್‌ ಬಯಕೆ ಹೆಚ್ಚೇ? ಹಾಗಾದರೆ ನಿಮಗೆ ಈ ಪೋಷಕಾಂಶದ ಕೊರತೆಯಿರಬಹುದು ನೋಡಿ. ಈ ಚಾಕೋಲೇಟ್‌ ಪ್ರಿಯತೆ ಒಮ್ಮೊಮ್ಮೆ ಮೇರೆ ಮೀರುವ ಸಂದರ್ಭಗಳನ್ನೂ ನೀವು ಎದುರಿಸಿದ್ದೀರಾ? ಅಂದರೆ, ಇದ್ದಕ್ಕಿದಂತೆ ನಡುರಾತ್ರಿಯಲ್ಲೋ, ಅಥವಾ ಇನ್ನೆಲ್ಲೋ ಭಾಷಣ ಕೇಳುವಾಗಲೋ ಅಥವಾ ಇನ್ಯಾವುದೋ ಕೆಲಸದಲ್ಲಿದ್ದಾಗಲೇ, ಚಾಕೋಲೇಟ್‌ ತಿನ್ನಬೇಕೆಂಬ ಬಯಕೆ ಇದ್ದಕ್ಕಿದ್ದಂತೆ ಮೂಡುವುದು, ಬಹುಶಃ, ಹೀಗೆ ಅನಿಸಬೇಕೆಂದರೆ ನೀವು ಚಾಕೋಲೇಟ್‌ ಪ್ರೇಮಿ ಆಗಿರಲೇಬೇಕಾಗಿಲ್ಲ. ಇಷ್ಟರವರೆಗೆ ಚಾಕೋಲೇಟ್‌ ಇಷ್ಟವಿದ್ದರೂ, ಇದ್ದಕ್ಕಿದ್ದಂತೆ ತಿನ್ನಬೇಕೆಂಬ ಬಯಕೆ ಮೂಡದೆ ಇದ್ದರೂ, ಇತ್ತೀಚೆಗೆ ಯಾಕೋ ಯಾವಾಗಲೂ ಚಾಕೋಲೇಟ್‌ ತಿನ್ನಬೇಕೆಂಬ ಬಯಕೆ ನಿಮ್ಮನ್ನು ಕಾಡುತ್ತಿದ್ದರೆ ಯಾಕೆ ಹೀಗೆ ಎಂದು ತಲೆಕೆಡಿಸಬೇಡಿ. ನಿಮಗೆ ಹೀಗನಿಸುವುದಕ್ಕೆ ನೀವು ಅಂದುಕೊಂಡದ್ದಕ್ಕಿಂತಲೂ ಬೇರೆಯದೇ ಆದ ಕಾರಣಗಳಿರುತ್ತವೆ! ಹೌದು, ಚಾಕೋಲೇಟ್‌ ಬಯಕೆಯ ನಿಜವಾದ ಕಾರಣ ನಿಮ್ಮಲ್ಲಾಗಿರುವ ಪೋಷಕಾಂಶದ ಕೊರತೆಯೂ ಆಗಿರಬಹುದು. ಕೊಕೋ ಪೌಡರ್‌, ಕೊಕೋ ಬಟರ್‌ ಹಾಗೂ ಸಕ್ಕರೆ ಈ ಮೂರು ಪದಾರ್ಥಗಳು ಹೆಚ್ಚಿರುವ ಚಾಕೋಲೇಟ್‌ನಲ್ಲಿ ಇನ್ನುಳಿದ ಪದಾರ್ಥಗಳು ನೀವು ಯಾವ ಚಾಕೋಲೇಟ್‌ ಇಷ್ಟ ಪಡುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗಿದೆ. ಮಿಲ್ಕ್‌, ಚಾಕೋಲೇಟ್‌, ಡಾರ್ಕ್‌…

Read More

ಚಳಿಗಾಲದಲ್ಲಿ ಒಡೆವ ಹಿಮ್ಮಡಿಯ ಸಮಸ್ಯೆಗೆ ಇಲ್ಲಿದೆ ಪರಿಹಾರ. ಈ ಸಮಸ್ಯೆ ಸಣ್ಣದೆಂದು ಸಾಮಾನ್ಯರಿಗೆ ಅನಿಸಬಹುದು. ಆದರೆ ನಿಜವಾಗಿಯೂ ಈ ಸಮಸ್ಯೆ ಅನುಭವಿಸಿದವರಿಗಷ್ಟೇ ಅದರ ಗಂಭೀರತೆ ಅರ್ಥವಾಗುವುದು. ಯಾಕೆಂದರೆ, ಹಿಮ್ಮಡಿ ಒಡೆಯಲು ಒಮ್ಮೆ ಶುರುವಾದರೆ, ಚಳಿಗಾಲದ ತೀವ್ರತೆ ಹೆಚ್ಚಾಗುತ್ತಾ ಹೋದಂತೆಲ್ಲ, ಇದೂ ಕೂಡಾ ತೀವ್ರವಾಗುತ್ತಲೇ ಹೋಗುತ್ತದೆ. ಪಾದಕ್ಕೆ ಸೂಕ್ತ ಕಾಳಜಿ ತೆಗೆದುಕೊಳ್ಳದೆ ಇದ್ದರೆ, ಹಿಮ್ಮಡಿ ಒಡೆದು ಒಡೆದು ಕೊನೆಗೆ ಪಾದದಿಂದ ರಕ್ತ ಜಿನುಗಲು ಆರಂಭವಾಗುತ್ತದೆ. ಆಗ ಕಾಲು ನೆಲದಲ್ಲಿ ಊರಲೂ ಸಾಧ್ಯವಾಗದಷ್ಟು ನೋವು. ಹಾಗಾಗಿ, ಚಳಿಗಾಲ ಬರುತ್ತಿದ್ದಂತೆ, ಈ ಸಮಸ್ಯೆ ಪ್ರತಿಬಾರಿ ಎದುರಿಸುವ ಮಂದಿ ಖಂಡಿತವಾಗಿಯೂ ತಮ್ಮ ಪಾದದ ಕುರಿತು ಗಂಭೀರವಾಗಿ ಕಾಳಜಿ ತೆಗೆದುಕೊಳ್ಳಲೇಬೇಕು. ಇಲ್ಲಿ ನಿರ್ಲಕ್ಷ್ಯ ಸಲ್ಲ. ಹಾಗಾದರೆ ಬನ್ನಿ, ಚಳಿಗಾಲದಲ್ಲಿ ಪಾದಗಳ ಕಾಳಜಿ ಹೇಗೆ ಮಾಡಬೇಕು ಎಂಬುದನ್ನು ನೋಡೋಣ. ನಿತ್ಯವೂ ಪಾದಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ. ಒದ್ದೆ ಪಾದಗಳನ್ನು ಮೆದುವಾದ ಟವೆಲ್‌ನಿಂದ ಮೆತ್ತಗೆ ಒರೆಸಿಕೊಂಡು, ಗಾಳಿಯಾಡಲು ಬಿಡಿ. ಮಲಗುವ ಮುನ್ನ, ಒಡೆದ, ಬಿರುಕು ಬಿಟ್ಟ ಹಿಮ್ಮಡಿಗೆ ದಪ್ಪ ಕ್ರೀಮನ್ನು ಹಚ್ಚಿ.…

Read More

ಬೆಂಗಳೂರು;- ಕಾಂಗ್ರೆಸ್ಸಿನ 50 ಜನ ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ಈ ಸಂಬಂಧ ಮಾತನಾಡಿದ ಅವರು,ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿ- ಜೆಡಿಎಸ್‌ನಲ್ಲಿ ಯಾರೂ ಉಳಿಯುವುದಿಲ್ಲ. ಇನ್ನೂ ಐದು ತಿಂಗಳು ಸಮಯ ಕೊಡುತ್ತೇನೆ. ಕಾಂಗ್ರೆಸ್ಸಿನ 50 ಜನ ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ’ ಎಂದರು. ಮಾತೆತ್ತಿದರೆ ವರಿಷ್ಠರು, ವರಿಷ್ಠರು ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ರಾಜ್ಯ ನಾಯಕರಿಗೆ ಬೆಲೆ ಇಲ್ಲವೇ? ಎಲ್ಲವನ್ನೂ ವರಿಷ್ಠರೇ ಮಾಡುತ್ತಾ ಇದ್ದರೆ ನೀವೇನು ಮಾಡುತ್ತಾ ಇದೀರಿ? ಬೆರಳು ಚೀಪುತ್ತಾ ಇದ್ದೀರಾ’ ಎಂದು ವ್ಯಂಗ್ಯವಾಡಿದರು. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್‌ನ 19 ಶಾಸಕರು ಬೆಂಬಲ ಕೊಡುತ್ತೇವೆ’ ಎಂಬ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌, ‘ಕುಮಾರಸ್ವಾಮಿಯವರ ಬೆಂಬಲ ಕೇಳಿದವರ‍್ಯಾರು? ಈಗ ನಮಗೆ ಅವರ ಅವಶ್ಯಕತೆ ಏನಿದೆ? ಯಾರು ಮುಖ್ಯಮಂತ್ರಿ ಆಗುತ್ತಾರೆ, ಯಾರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎನ್ನುವುದು ಅವರಿಗೆ ಏಕೆ ಬೇಕು’ ಎಂದರು.

Read More

ಹುಬ್ಬಳ್ಳಿ: ಕೈ-ಕಾಲು ಕಳೆದುಕೊಂಡವರಿಗೆ ಕೃತಕ ಕೈ-ಕಾಲು ಕೊಡಲು ಮಜೇಥಿಯಾ ಫೌಂಡೇಷನ್ ಆಶ್ರಯದಲ್ಲಿ ನಗರದ ಮೂರುಸಾವಿರ ಮಠದ ಸಭಾ ಭವನದಲ್ಲಿ ಅಳತೆ ಪಡೆಯಲಾಯಿತು. ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಗವಿಕಲರ ಸೇವೆಯಲ್ಲಿ ಫೌಂಡೇಷನ್ ನಿರತವಾಗಿರುವುದು ಸಂತೋಷ ವಿಷಯ. ಬಡವರ ಬಗ್ಗೆ ಅತೀವ ಕಾಳಜಿ ಹೊಂದಿರುವ ಜಿತೇಂದ್ರ ಮಜೇಥಿಯಾ ಅವರು ಕಲಿಯುಗದ ಕರ್ಣ ಎಂದರು. ಕೈ-ಕಾಲು ಕಳೆದುಕೊಂಡವರು ನಿತ್ಯ ಜೀವನ ನಡೆಸುವುದು ಕಷ್ಟ. ಇಂಥವರ ಬಾಳಿಗೆ ಊರುಗೋಲಿನ ಅಗತ್ಯವಿದೆ. ಬೇರೆಯವರ ಮೇಲೆ ಅವಲಂಬನೆಯಾಗದೇ ಸ್ವಾವಲಂಬಿಯಾಗಲಿ ಎಂದು ಮಜೇಥಿಯಾದವರು ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ್ ಮಜೇಥಿಯಾ ಅಧ್ಯಕ್ಷತೆ ವಹಸಿ ಮಾತನಾಡಿ, ಅಂಗವಿಕಲ ಸೇವೆಗೆ ನಮ್ಮ ಫೌಂಡೇಷನ್ ಸದಾ ಸಿದ್ಧ ಎಂದು ವಾಗ್ದಾನ ಮಾಡಿದರು. ಹೈದರಾಬಾದ್‌ನಿಂದ ಆಗಮಿಸಿದ್ದ ಕೃತಕ ಕೈ-ಕಾಲು ತಯಾರಿಕ ಘಟಕವು ಅಂಗವಿಕಲರ ಕೈ-ಕಾಲುಗಳ ಅಳತೆ ತೆಗೆದುಕೊಂಡಿತು. ಫೌಂಡೇಷನ್ ಕಾರ್ಯದರ್ಶ ಅಮರೇಶ ಹಿಪ್ಪರಗಿ, ಡಾ.ಕೆ. ರಮೇಶ ಬಾಬು, ಡಾ.ವಿ.ಬಿ. ನಿಟಾಲಿ, ಡಾ. ನಾಗರಾಜ…

Read More

ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಅದರ ಮಹತ್ವ ಇರುವುದು, ಖುಶಿ ಸಿಗುವುದು ಯಾವಾಗ ಎಂದರೆ ನಾವೇ ಆಕಾಶ ಬುಟ್ಟಿ ಮಾಡಿ ಮನೆ ಮುಂದೆ ತೂಗು ಬಿಟ್ಟಾಗ. ಈ ಹಿನ್ನೆಲೆಯಲ್ಲಿ ಸುನಿಧಿ ಕಲಾ ಸೌರಭ ಸಂಸ್ಥೆಯು ಅನಂತ ಪ್ರೇರಣಾ ಕೇಂದ್ರದ ಸಹಯೋಗದೊಂದಿಗೆ ಆಕಾಶ ಬುಟ್ಟಿ ತಯಾರಿಸುವ ವಿಧಾನವನ್ನು ಕಲಿಸುವ ಶಿಬಿರ ಹಮ್ಮಿಕೊಂಡಿದೆ. ನವೆಂಬರ್ 7ರಿಂದ 9ರ ವರೆಗೆ ನಿತ್ಯ ಸಂಜೆ 4ಕ್ಕೆ ಆಕಾಶಬುಟ್ಟಿ ತಯಾರಿಕೆ ಕಲಿಸಿಕೊಡಲಾಗುವುದು. ಇಲ್ಲಿಯ ವಿಜಯನಗರ ಕೆಂಪಣ್ಣನವರ ಕಲ್ಯಾಣ ಮಂಟಪ ಪಕ್ಕದ ಅನಂತ ಪ್ರೇರಣಾ ಕೇಂದ್ರದ ಸಭಾಂಗಣದಲ್ಲಿ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವೀಣಾ ಅಠವಲೆ ಅವರನ್ನು ಸಂಪಕಿರ್ಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಸುಭಾಸ ನರೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬೆಂಗಳೂರು;- ರಾಜಧಾನಿ ಬೆಂಗಳೂರಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೊಲೆ ಕೇಸ್‌ ಗೆ ಸಂಬಂಧಿಸಿದಂತೆ ಕಲ್ಲು ಕ್ವಾರಿಯನ್ನು ಸ್ಥಗಿತಗೊಳಿಸಿದ್ದಕ್ಕೆ ಡಿಡಿ ಪ್ರತಿಮಾ ಕೊಲೆ ಶಂಕೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಹುಣಸಮಾರನಹಳ್ಳಿಯಲ್ಲಿ ಕ್ವಾರಿ ಸ್ಥಗಿತಗೊಳಿಸಿದ್ರು. ಅಕ್ರಮ ಗಣಿಗಾರಿಕೆ ಸಂಬಂಧ ಉಪ ನಿರ್ದೇಶಕಿ ಪ್ರತಿಮಾ ವರದಿ ನೀಡಿದ್ದರು. ಗ್ರಾಮದ ಸರ್ವೆ ನಂಬರ್‌ 177, 179ರಲ್ಲಿ 4 ಎಕರೆ ಜಾಗದಲ್ಲಿ ದೂರು ಬಂದಿತ್ತು. ದೂರಿನ ಅನ್ವಯ ಅಧಿಕಾರಿಗಳು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದರು. ಲೈಸೆನ್ಸ್ ಪಡೆಯದೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರು. ಕಲ್ಲು ಬಂಡೆಗಳನ್ನ ಅಕ್ರಮವಾಗಿ ಬ್ಲಾಸ್ಟ್ ಮಾಡುತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿ ಪ್ರತಿಮಾ ಇದನ್ನು ನಿಲ್ಲಿಸಿದ್ದರು. ನಾಲ್ಕು ಎಕರೆ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಕಲ್ಲು ಕ್ವಾರಿಯನ್ನ ನಿಲ್ಲಿಸಿದ್ದಕ್ಕೆ ಮರ್ಡರ್ ಶಂಕೆ ವ್ಯಕ್ತವಾಗಿದೆ.

Read More